ನವದೆಹಲಿ : ಸಮುದ್ರಗುಪ್ತ ಎಂದು ಕರೆಯಲ್ಪಡುವ ಆಚಾರ್ಯ ಚಾಣಕ್ಯ ಅದ್ಭುತ ಪ್ರತಿಭೆ ಭಂಡಾರ ಎಂದೇ ಕರೆಯಲ್ಪಡುತ್ತಿದ್ದರು. ಅವರು ಅಸಾಧಾರಣ ಬುದ್ಧಿವಂತಿಕೆಯನ್ನು ಹೊಂದಿದ್ದರು (Chanakya Niti for Success).  ಚಾಣಕ್ಯ ತನ್ನ ಬುದ್ಧಿವಂತಿಕೆಯಿಂದ ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿ ಮಾಡಿದ. ನೀತಿಶಾಸ್ತ್ರದ ಲೇಖಕರಾದ ಆಚಾರ್ಯ ಚಾಣಕ್ಯ ಯಾವಾಗಲೂ ಇತರರ ಬಗ್ಗೆ ಹಿತಾಸಕ್ತಿ ಹೊಂದಿದ್ದರು. ಸಮಾಜದ ಏಳಿಗೆಯ ಬಗ್ಗೆ ಸದಾ ಮಾತನಾಡುತ್ತಿದ್ದರು. ಚಾಣಕ್ಯ ತನ್ನ ನೀತಿಯಲ್ಲಿ  ಮೂರು ವಿಷಯಗಳ ಬಗ್ಗೆ ಹೇಳಿದ್ದಾರೆ (Chanakya niti).  ಒಬ್ಬ ವ್ಯಕ್ತಿಯನ್ನು ಎಲ್ಲಾ ತೊಂದರೆಗಳಿಂದ ಪಾರು ಮಾಡಬಹುದಾದ ವಿಷಯಗಳನ್ನು ಅವರು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ನೀತಿಶಾಸ್ತ್ರದ  ಶ್ಲೋಕ :
ಚಾಣಕ್ಯನು ನೀತಿ ಶಾಸ್ತ್ರದಲ್ಲಿ ಒಂದು ಪದ್ಯವನ್ನು ಉಲ್ಲೇಖಿಸಿದ್ದಾನೆ (Chanakya Niti). ಶ್ಲೋಕವು- "ಸಂಸಾರತಪಾದ್ಗ ಧನಃ   ತ್ರಯೋ ವಿಶ್ರಾನ್ತಿಹೇತವಃ, ಅಪತ್ಯಂ ಚ ಕಲ್ತ್ರಂ ಚ ಸತಾಂ ಸಂಘತಿರೇವ ಚ." ಈ ಶ್ಲೋಕದ ಅರ್ಥ ಏನು ಹೇಳುತ್ತದೆ ಎಂದರೆ ಲೌಕಿಕ ತಾಪದಿಂದ ಉರಿಯುತ್ತಿರುವ ಜನರಿಗೆ  ಹೆಂಡತಿ, ಮಕ್ಕಳು ಮತ್ತು ಸಜ್ಜನರ ಸಹವಾಸವೇ ಪರಿಹಾರ ನೀಡಬಲ್ಲದು ಎಂದು.  


ಇದನ್ನೂ ಓದಿ : ಅತ್ಯಂತ ಕಿರಿ ವಯಸ್ಸಿನಲ್ಲಿಯೇ ಸಿರಿವಂತರಾಗುತ್ತಾರೆ ಈ ಅಕ್ಷರದಿಂದ ಹೆಸರು ಆರಂಭವಾಗುವವರು


ಪುತ್ರ : 
ಚಾಣಕ್ಯ ನೀತಿಯ ಪ್ರಕಾರ (Chanakya Niti), ಸಂತೋಷವನ್ನು ನೀಡುವ ಮಗ ಅಂದರೆ ತನ್ನ ಹೆತ್ತವರ ಸುಖ ಸಂತೋಷದ ಕಾಳಜಿ ವಹಿಸುವ ಪುತ್ರ  ಉತ್ತಮ ಸಹವಾಸದಲ್ಲಿದ್ದು ತನ್ನ ಜೀವನದ ಗುರಿಯನ್ನು ಸಾಧಿಸುವಂತೆ ಇರಬೇಕು. ಅಂತಹ ಮಗ ಭವಿಷ್ಯದಲ್ಲಿ ಪೋಷಕರು ಮತ್ತು ಕುಟುಂಬದ ಹೆಸರನ್ನು ಬೆಳಗಿಸುತ್ತಾನೆ. ಅಂತಹ ಸದ್ಗುಣಶೀಲ ಮಗನೊಂದಿಗೆ, ವ್ಯಕ್ತಿಯ ಇಡೀ ಜೀವನವು ಸಂತೋಷದಿಂದ ಉಳಿಯುತ್ತದೆ (Chanakya Niti For Success). 


ಪತ್ನಿ : 
ಚಾಣಕ್ಯ ನೀತಿಯ ಪ್ರಕಾರ,  ಸೌಮ್ಯ ಮತ್ತು ದಕ್ಷ ಸ್ವಭಾವದ ಪತ್ನಿಯನ್ನು ಹೊಂದಿದ್ದರೆ ವ್ಯಕ್ತಿಯ ಜೀವನವು ಸಂತೋಷದಿಂದ ಕಳೆಯುತ್ತದೆ. ಸುಶೀಲ ಪತ್ನಿ ಪ್ರತಿ ಕಷ್ಟದಲ್ಲೂ ಬೆಂಬಲ ನೀಡುತ್ತಾಳೆ (Chanakya Niti about women). ಅದೇ ಸಮಯದಲ್ಲಿ, ಪ್ರತಿಕೂಲ ಸಂದರ್ಭಗಳಲ್ಲಿಯೂ  ಸದಾ ಪತಿಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. 


ಇದನ್ನೂ ಓದಿ : Mercury Transit: ಕುಂಭ ರಾಶಿಯಲ್ಲಿ ಬುಧ ಸಂಕ್ರಮಣ 5 ರಾಶಿಯವರಿಗೆ ಉತ್ತಮ ಲಾಭ !


ಸಜ್ಜನರ ಸಹವಾಸ :
ಕೆಲವೊಮ್ಮೆ ಒಬ್ಬ ವ್ಯಕ್ತಿಯು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಆತ ದುಷ್ಟ ಸ್ವಭಾವದವರ ಸ್ನೇಹ ಬೆಳೆಸಿಕೊಳ್ಳುತ್ತಾನೆ (Chanakya niti about friends). ಇದು ಭವಿಷ್ಯದಲ್ಲಿ ಅಪಾಯಕಾರಿಯಾಗಿ ಸಾಬೀತಾಗಬಹುದು.  ಲೌಕಿಕ ದುಃಖಗಳನ್ನು ಕಡಿಮೆ ಮಾಡಲು, ಒಬ್ಬನು ಉತ್ತಮ ಗುಣಗಳನ್ನು ಹೊಂದಿರುವ ಅಥವಾ ಸಜ್ಜನರ ಸಹವಾಸ ಮಾಡಬೇಕು. 


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ .


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.