ನವದೆಹಲಿ: ಶನಿದೇವ(Shani Dev)ನ ಆಶೀರ್ವಾದ ಪಡೆಯಲು ಮತ್ತು ಶನಿದೋಷ ನಿವಾರಣೆಗೆ ಶನಿವಾರವನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಇದಲ್ಲದೇ ಈ ದಿನ ಶ್ರೀರಾಮನ ಭಕ್ತ ಭಗವಾನ್‌ ಹನುಮಂತ(Hanuman)ನನ್ನು ಪೂಜಿಸಿದರೆ ಶನಿದೇವನು ಸಂತೋಷಗೊಳ್ಳುತ್ತಾನಂತೆ. ಶನಿವಾರದ ವಿಶೇಷ ದಿನದಂದು ಹನುಮಂತನನ್ನು ಪೂಜಿಸುವುದರಿಂದ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವಂತೆ. ಈ ದಿನ ಶನಿದೇವನಿಗೆ ನಿಜವಾದ ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಶನಿದೇವನ ಆಶೀರ್ವಾದ ಪಡೆಯಲು ಶನಿವಾರ(Saturday Remedies)ದಂದು ಕೆಲವು ವಿಶೇಷ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಶನಿವಾರದಂದು ಯಾವುದೇ ಕಾರಣಕ್ಕೂ ಖರೀದಿಸಬಾರದಂತೆ. ಹೀಗೆ ಮಾಡಿದರೆ ಸಮಸ್ಯೆಗಳು ತಪ್ಪಿದ್ದಲ್ಲವೆಂದು ನಂಬಲಾಗಿದೆ.


ಶನಿವಾರ ಸಾಸಿವೆ ಎಣ್ಣೆ ಖರೀದಿಸಬೇಡಿ


ನಂಬಿಕೆಗಳ ಪ್ರಕಾರ ಶನಿವಾರದಂದು ಸಾಸಿವೆ ಎಣ್ಣೆ(Mustard Oil)ಯನ್ನು ಖರೀದಿಸುವುದನ್ನು ತಪ್ಪಿಸಬೇಕು. ಏಕೆಂದರೆ ಹೀಗೆ ಮಾಡುವುದರಿಂದ ಶನಿದೇವನು ಅತೃಪ್ತನಾಗಿರುತ್ತಾನೆ. ಇದರಿಂದ ಜೀವನದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಶನಿವಾರ ಸಾಸಿವೆ ಎಣ್ಣೆಯನ್ನು ಖರೀದಿಸಬೇಡಿ.


ಇದನ್ನೂ ಓದಿ: ಈ ಐದು ವಸ್ತುಗಳನ್ನು ಚೆಲ್ಲಿದರೆ ಶನಿದೇವರು ಜೀವನವೆಲ್ಲಾ ನೀಡುತ್ತಾರೆ ಸಂಕಷ್ಟ


ಕಬ್ಬಿಣದಿಂದ ಮಾಡಿದ ವಸ್ತುಗಳು


ಜ್ಯೋತಿಷಿಗಳ ಪ್ರಕಾರ ಶನಿವಾರದಂದು ಕಬ್ಬಿಣದ ವಸ್ತುಗಳನ್ನು ಖರೀದಿಸಬಾರದು. ಶನಿವಾರದಂದು ಖರೀದಿಸಿದರೆ ಶನಿದೇವನಿಗೆ ಕೋಪ ಬರುತ್ತದೆ. ಇದರಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಸ್ಯೆಗಳು ಹೆಚ್ಚುತ್ತಲೇ ಇರುತ್ತವೆ. ಆದರೆ ಶನಿವಾರದಂದು ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ದಾನ ಮಾಡುವುದು ಶುಭ. ಶನಿವಾರದಂದು ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಅಗತ್ಯವಿರುವವರಿಗೆ ದಾನ ಮಾಡಬೇಕೆಂದು ತಿಳಿಸಲಾಗಿದೆ.  


ಶನಿವಾರ ಉಪ್ಪು ಖರೀದಿಸಬೇಡಿ


ಶನಿವಾರದಂದು ಉಪ್ಪು(Salt) ಖರೀದಿಸುವುದನ್ನು ಸಹ ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಶನಿವಾರದಂದು ಯಾವುದೇ ಕಾರಣಕ್ಕೂ ಉಪ್ಪನ್ನು ಖರೀದಿಸಬಾರದು. ಶನಿವಾರದಂದು ಪೀಪಲ್‌ ಮರದ ಬೇರಿನಲ್ಲಿ ನೀರು ಹಾಕಿ ದೀಪವನ್ನು ಹಚ್ಚುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಬಹುಬೇಗ ಈಡೇರುತ್ತವೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ಗಡ್ಡ-ಮೀಸೆಯ ಕೂದಲು ಬೆಳ್ಳಗಾಗುತ್ತಾ?: ಈ 5 ಮನೆಮದ್ದುಗಳಿಂದ ಕಪ್ಪಾಗಿಸಬಹುದು


ಶನಿವಾರದಂದು ಕಪ್ಪು ಎಳ್ಳನ್ನು ಖರೀದಿಸಬೇಡಿ


ಶನಿವಾರದಂದು ಕಪ್ಪು ಎಳ್ಳನ್ನು ಖರೀದಿಸುವುದು ಧರ್ಮಗ್ರಂಥಗಳಲ್ಲಿ ಅಶುಭವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ ಶನಿ ದೇವನನ್ನು ಈ ದಿನ ಕಪ್ಪು ಎಳ್ಳು ಮತ್ತು ಸಾಸಿವೆ ಎಣ್ಣೆಯಿಂದ ಪೂಜಿಸಲಾಗುತ್ತದೆ. ಶನಿವಾರದಂದು ಕಪ್ಪು ಎಳ್ಳನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ. ಶನಿವಾರದಂದು ಹೀಗೆ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಸಂತೋಷ ದೂರವಾಗುತ್ತದೆ ಎಂದು ನಂಬಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.