Gayatri Mantra Benefits: ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರಕ್ಕೆ ವಿಶೇಷ ಮಹತ್ವವಿದೆ. ಇದು ಅತ್ಯಂತ ಶಕ್ತಿಶಾಲಿ ಮಂತ್ರವೆಂದು ಪರಿಗಣಿಸಲಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಅಲ್ಲದೆ, ವ್ಯಕ್ತಿಯು ರೋಗ ಮುಕ್ತನಾಗುತ್ತಾನೆ. ಆದರೆ ಇದನ್ನು ಪಠಿಸುವ ಮೊದಲು, ವ್ಯಕ್ತಿಯು ಗಾಯತ್ರಿ ಮಂತ್ರದ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ.


COMMERCIAL BREAK
SCROLL TO CONTINUE READING

ಗಾಯತ್ರಿ ಮಂತ್ರ ಜಪಿಸುವ ವಿಧಾನ: ಗಾಯತ್ರಿ ಮಂತ್ರವನ್ನು ಹಿಂದೂ ಧರ್ಮದಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಗಾಯತ್ರಿ ಮಂತ್ರವನ್ನು ಜಪಿಸುವಾಗ ಕೆಲ ನಿಯಮಗಳನ್ನು ಪಾಲಿಸದಿದ್ದರೆ, ಅದು ಪೂರ್ಣ ಪುಣ್ಯವನ್ನು ನೀಡುವುದಿಲ್ಲ ಎಂದು ನಂಬಲಾಗಿದೆ. ಗಾಯತ್ರಿ ಮಂತ್ರವನ್ನು ಜಪಿಸುವ ಬಗ್ಗೆ ಕೆಲವು ನಿಯಮಗಳನ್ನು ಹೇಳಲಾಗಿದೆ. ಮಂತ್ರವನ್ನು ಜಪಿಸುವಾಗ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕ. ಧಾರ್ಮಿಕ ಗ್ರಂಥಗಳ ಪ್ರಕಾರ, ಮಂತ್ರವನ್ನು ಸ್ಪಷ್ಟ ಉಚ್ಚಾರಣೆಯೊಂದಿಗೆ ಪಠಿಸಲಾಗುತ್ತದೆ. ಜಪ ಮಾಡುವಾಗ ತಪ್ಪಾದ ಉಚ್ಚಾರಣೆಯು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. 


ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಆರ್ಥಿಕ ಸ್ಥಿತಿ, ಕಚೇರಿಯಲ್ಲಿ ಬರುವ ಸಮಸ್ಯೆಗಳು ಇತ್ಯಾದಿ ನಿವಾರಣೆಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಗಾಯತ್ರಿ ಮಂತ್ರದಿಂದ ಅನೇಕ ಪ್ರಯೋಜನಗಳಿವೆ. ಆದರೆ ನಿಯಮಗಳನ್ನು ತಿಳಿದುಕೊಂಡು ಕಾಳಜಿ ವಹಿಸಿ ಅದನ್ನು ಪಠಿಸಬೇಕು. ಅದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಗಾಯತ್ರಿ ಮಂತ್ರವನ್ನು ಪಠಿಸುವ ಸರಿಯಾದ ವಿಧಾನ ಇಲ್ಲಿದೆ ನೋಡಿ.


ಇದನ್ನೂ ಓದಿ: ಈ 5 ರಾಶಿಗಳಿಗೆ ಭಾರೀ ಅದೃಷ್ಟ ನೀಡಲಿದ್ದಾನೆ ಬುಧ..! ಉದ್ಯೋಗದಲ್ಲಿ ಸಿಗಲಿದೆ ಬಡ್ತಿ, ಹೆಚ್ಚಲಿದೆ ವೇತನ


ಗಾಯತ್ರಿ ಮಂತ್ರವನ್ನು ಪಠಿಸುವ ನಿಯಮಗಳು: ಗಾಯತ್ರಿ ಮಂತ್ರದ ಪಠಣವನ್ನು ಸೂರ್ಯೋದಯಕ್ಕೆ ಸ್ವಲ್ಪ ಮೊದಲು ಪ್ರಾರಂಭಿಸಬೇಕು ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಗಾಯತ್ರಿ ಮಂತ್ರವನ್ನು ಮಧ್ಯಾಹ್ನ ಕೂಡ ಪಠಿಸಬಹುದು. ಗಾಯತ್ರಿ ಮಂತ್ರವನ್ನು ಪಠಿಸುವಾಗ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ. ಹಾಗೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.


ಕನಿಷ್ಠ 108 ಬಾರಿ ಜಪಿಸಿ:  ಗಾಯಿತ್ರಿ ಮಂತ್ರವನ್ನು ಕನಿಷ್ಟ 108 ಬಾರಿ ಜಪಿಸಬೇಕು. ಹೀಗೆ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದರ ಮಂತ್ರವನ್ನು ರುದಕ್ಷಿ ಮಾಲೆಯೊಂದಿಗೆ ಜಪಿಸಲಾಗುತ್ತದೆ. ರುದ್ರಾಕ್ಷಿ ಮಣಿಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ, ಈ ಜಪವನ್ನು ಮಾಡುವುದರಿಂದ ಬಯಸಿದ ಫಲಿತಾಂಶಗಳು ಸಿಗುತ್ತವೆ ಎಂದು ನಂಬಲಾಗಿದೆ. ಗಾಯತ್ರಿ ಮಂತ್ರವನ್ನು ಯಾವಾಗಲೂ ಮೌನವಾಗಿ ನಡೆಸಲಾಗುತ್ತದೆ.


ಇದನ್ನೂ ಓದಿ: Vastu Tips: ಊಟ ಮಾಡುವಾಗ ನೀವೂ ಈ ತಪ್ಪನ್ನು ಮಾಡುತ್ತಿದ್ದೀರಾ? ಇರಲಿ ಎಚ್ಚರ


ಈ ರೀತಿಯ ಆಹಾರವನ್ನು ಸೇವಿಸಬೇಡಿ: ಗಾಯತ್ರಿ ಮಂತ್ರವನ್ನು ಪಠಿಸುವ ಮೊದಲು ಆಹಾರ ಮತ್ತು ಪಾನೀಯಗಳ ಬಗ್ಗೆ ಕಾಳಜಿ ವಹಿಸುವುದು ಸಹ ಬಹಳ ಮುಖ್ಯ. ಮಂತ್ರದ ಆರಂಭದ ಮೊದಲು ಆಹಾರವು ಶುದ್ಧವಾಗಿರಬೇಕು. ಈ ಸಮಯದಲ್ಲಿ ಜಪ ಮಾಡುವವರು ಮಾಂಸಾಹಾರ ಸೇವಿಸಬಾರದು. ಅಲ್ಲದೆ, ಮದ್ಯಪಾನ ಮಾಡಬೇಡಿ. ಇದನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಅದರ ಪರಿಣಾಮವು ನಮ್ಮ ಜೀವನದಲ್ಲಿ ಕಂಡುಬರುತ್ತದೆ.


ರೋಗಗಳಿಂದ ಮುಕ್ತಿ: ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯು ರೋಗಗಳಿಂದ ಮುಕ್ತಿ ಹೊಂದುತ್ತಾನೆ ಎಂದು ನಂಬಲಾಗಿದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಧನಾತ್ಮಕ ಶಕ್ತಿ ನೆಲೆಸಿರುತ್ತದೆ. ಮಂತ್ರವನ್ನು ಜಪಿಸಿದ ನಂತರ ಪಾತ್ರೆಯಲ್ಲಿ ತುಂಬಿದ ನೀರನ್ನು ಸೇವಿಸಬೇಕು. ಮಂತ್ರವನ್ನು ಪಠಿಸುವುದರಿಂದ ರೋಗಗಳು ದೂರವಾಗುತ್ತವೆ.


(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.