ದಿನಭವಿಷ್ಯ 08-05-2022: ಭಾನುವಾರದಂದು ವೃಷಭ ರಾಶಿಯ ಜನರು ತಮ್ಮ ಪ್ರೀತಿಪಾತ್ರರ ಮೇಲೆ ಅನಗತ್ಯ ಕೋಪಿಸಿಕೊಳ್ಳಬಾರದು. ತುಲಾ ರಾಶಿಯವರು ವಿದೇಶದಲ್ಲಿ ಉದ್ಯೋಗ ಪಡೆಯುವ ಸಾಧ್ಯತೆ ಇದೆ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.


COMMERCIAL BREAK
SCROLL TO CONTINUE READING

ಮೇಷ ರಾಶಿ: ಮೇಲಧಿಕಾರಿಗಳು ಈ ರಾಶಿಯ ಜನರನ್ನು ಇಷ್ಟಪಟ್ಟರೆ, ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಈ ತಪ್ಪುಗ್ರಹಿಕೆಯು ನಿಮ್ಮ ಕೆಲಸಕ್ಕೆ ಅಪಾಯವನ್ನುಂಟುಮಾಡುತ್ತದೆ. ಚಿಲ್ಲರೆ ವ್ಯಾಪಾರಸ್ಥರಿಗೆ ಉತ್ತಮ ಲಾಭವಾಗುವ ಸಂಭವವಿದ್ದು, ಇದಕ್ಕಾಗಿ ಪ್ರಯತ್ನ ಮಾಡಬೇಕಾಗುತ್ತದೆ.     


ವೃಷಭ ರಾಶಿ: ವೃಷಭ ರಾಶಿಯವರಿಗೆ ಕಚೇರಿಯಲ್ಲಿ ಒಳ್ಳೆಯ ಸುದ್ದಿ ಸಿಗಲಿದ್ದು, ಬಡ್ತಿಯ ಪೂರ್ಣ ಸಾಧ್ಯತೆ ಇದೆ. ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ವೈದ್ಯಕೀಯ ಸಂಬಂಧಿತ ವ್ಯವಹಾರದಲ್ಲಿ ಹೂಡಿಕೆ ಮಾಡಿ. ಏಕೆಂದರೆ ಇಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ. ಆತ್ಮೀಯರ ಮೇಲೆ ಅನಗತ್ಯ ಕೋಪ ಮಾಡಿಕೊಳ್ಳಬಾರದು. ಆರೋಗ್ಯದ ವಿಷಯದಲ್ಲಿ ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ.


ಮಿಥುನ ರಾಶಿ: ನೀವು ಬಹಳ ದಿನಗಳಿಂದ ಚಿಂತಿಸುತ್ತಿದ್ದ ಕೆಲಸಗಳು ಈಗ ಪೂರ್ಣಗೊಳ್ಳುತ್ತವೆ. ವ್ಯಾಪಾರಿಗಳು ತಮ್ಮ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳಬೇಕು. ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಉದ್ಯೋಗ ಸಿಗಬಹುದು.


ಕರ್ಕ ರಾಶಿ: ಕರ್ಕಾಟಕ ರಾಶಿಯ ಜನರು ಈಗ ತಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಬೇಕು. ಇಂದು ಧಾನ್ಯ ವ್ಯವಹಾರದಲ್ಲಿ ನಷ್ಟವಾಗುವ ಸಂಭವವಿದ್ದು, ವ್ಯಾಪಾರಸ್ಥರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಮನೆಯಲ್ಲಿ ಕೆಲವು ಶುಭ ಕಾರ್ಯಗಳು ನಡೆಯಲಿವೆ. 


ಇದನ್ನೂ ಓದಿ: Surya Gochar 2022 : ಸೂರ್ಯ ದೇವನ ಸಂಚಾರ : ಮೇ 15 ರಿಂದ ಈ ರಾಶಿಯವರ ಭವಿಷ್ಯ ಬದಲಾಗಲಿದೆ!


ಸಿಂಹ ರಾಶಿ: ಬಟ್ಟೆ ವ್ಯಾಪಾರಿಗಳು ಇಂದು ಉತ್ತಮ ಲಾಭ ಗಳಿಸಲು ಸಾಧ್ಯವಾಗುತ್ತದೆ. ಯುವಕರು ಮೊದಲು ತಮ್ಮ ನ್ಯೂನತೆಗಳನ್ನು ಗುರುತಿಸಬೇಕು, ನಂತರ ಅವುಗಳನ್ನು ಒಂದೊಂದಾಗಿ ನಿವಾರಿಸಲು ಪ್ರಯತ್ನಿಸಬೇಕು. ಸೂರ್ಯದೇವನ ಆರಾಧನೆ ಮಾಡಿಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಮತ್ತಷ್ಟು ಹೆಚ್ಚುತ್ತದೆ.


ಕನ್ಯಾ ರಾಶಿ: ಕನ್ಯಾ ರಾಶಿಯ ಜನರಿಗೆ ಹೊಸ ಅವಕಾಶಗಳು ಸಿಗಲಿವೆ. ವ್ಯವಹಾರದಲ್ಲಿ ಸಣ್ಣ ಬದಲಾವಣೆ ಮಾಡಿದರೆ ನೀವು ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಕ್ರೋಧವೇ ಪಾಪದ ಮೂಲ ಹಾಗಾಗಿ ಯುವಕರು ಕೋಪ ಮಾಡಿಕೊಳ್ಳಬಾರದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಆಹಾರವನ್ನು ಸಮತೋಲನದಲ್ಲಿಡಿ. ಸಿಹಿ ಮಾಡಿ ದೇವರಿಗೆ ನೈವೇದ್ಯ ಮಾಡಿ ಆದಷ್ಟು ಹಂಚಬೇಕು.


ತುಲಾ: ಈ ರಾಶಿಯ ಜನರು ವಿದೇಶದಲ್ಲಿ ಉದ್ಯೋಗ ಪಡೆಯುವ ಸಾಧ್ಯತೆ ಇದೆ. ವ್ಯಾಪಾರಿಗಳು ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಬುದ್ಧಿವಂತಿಕೆಯಿಂದ ವ್ಯವಹಾರ ಮಾಡಿದರೆ ಲಾಭ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿರುವ ಯುವಕರು ಈಗ ಯಶಸ್ವಿಯಾಗುವ ಸಾಧ್ಯತೆಯಿದೆ. ವಿಭಕ್ತ ಕುಟುಂಬದಲ್ಲಿ ವಾಸಿಸುವವರು ಕೆಲವು ಸಮಸ್ಯೆಗಳನ್ನು ಎದುರಿಸಬಹುದು, ಮನಸ್ಸಿನಲ್ಲಿ ಗೊಂದಲವಿದ್ದರೆ ಪ್ರೀತಿಪಾತ್ರರೊಡನೆ ಮನದಾಳ ಹಂಚಿಕೊಂಡರೆ ನೆಮ್ಮದಿ ಸಿಗುತ್ತದೆ.


ವೃಶ್ಚಿಕ ರಾಶಿ: ಹೊಸ ಉದ್ಯೋಗಕ್ಕೆ ಸೇರಿರುವ ವೃಶ್ಚಿಕ ರಾಶಿಯ ಜನರು ಅಜಾಗರೂಕತೆಯಿಂದ ನಡೆದುಕೊಳ್ಳಬಾರದು. ಲೋಹದ ಬೆಲೆ ಹೆಚ್ಚುತ್ತಿದ್ದು, ಪಾತ್ರೆ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ ಸಿಗಲಿದೆ. ಯುವಕರು ಸಮಯದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ನೀವು ಯಾವಾಗಲೂ ಬಡವರಿಗೆ ಸಹಾಯ ಮಾಡಲು ಸಿದ್ಧರಾಗಿರಬೇಕು, ಇದರಿಂದ ನಿಮಗೆ ಒಳಿತಾಗಲಿದೆ.  


ಇದನ್ನೂ ಓದಿ: Shivalinga: ಶಿವಲಿಂಗವನ್ನು ಈ ರೀತಿ ಪೂಜಿಸಿದರೆ ಹಣದ ಸಮಸ್ಯೆ ದೂರವಾಗುತ್ತೆ


ಧನು ರಾಶಿ: ನೀವು ಎಚ್ಚರಿಕೆಯಿಂದ ಯೋಚಿಸಿದ ಬಳಿಕ ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ಇಂದು ಉದ್ಯಮಿಗಳ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಅವರು ಉತ್ತಮ ಗಳಿಕೆ ಮಾಡುತ್ತಾರೆ. ಬಾಕಿಯಿರುವ ಕೆಲಸವನ್ನು ಬೇಗ ಮುಗಿಸಲು ಯೋಜನೆ ರೂಪಿಸಿ.


ಮಕರ ರಾಶಿ: ಮಕರ ರಾಶಿಯವರು ತಮ್ಮ ಮೇಲಧಿಕಾರಿಯ ಮಾತಿನಿಂದ ಕೋಪಗೊಳ್ಳಬಹುದು, ಮಹಿಳಾ ಸಹೋದ್ಯೋಗಿಗಳನ್ನು ಗೌರವಿಸಬೇಕು. ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ಲಾಭವಾಗಲಿದೆ. ಯುವಕರು ಮೊದಲು ತಮ್ಮ ತಂದೆ-ತಾಯಿಗಳನ್ನು ಗೌರವಿಸಬೇ. ಮಕ್ಕಳ ವರ್ತನೆಯ ಮೇಲೆ ಪೋಷಕರು ನಿಗಾ ಇಡಬೇಕು.  


ಕುಂಭ ರಾಶಿ: ಇಂದು ನಿಮಗೆ ಆರ್ಥಿಕವಾಗಿ ಉತ್ತಮ ಸಮಯವಾಗಿರುತ್ತದೆ. ಮಕ್ಕಳನ್ನು ಸದಾ ಖುಷಿಯಿಂದ ಇಟ್ಟುಕೊಳ್ಳಬೇಕು. ಇಂದು ನಿಮ್ಮ ಆರೋಗ್ಯವು ಸ್ವಲ್ಪಮಟ್ಟಿಗೆ ಹದಗೆಡಬಹುದು. ಮಾಡಬಹುದಾದ ಕೆಲಸಗಳಿಗೆ ನೀವು ಬದ್ಧರಾಗಿರಬೇಕು.


ಮೀನ ರಾಶಿ: ಉದ್ಯೋಗ ಪಡೆಯಲು ತಯಾರಿ ನಡೆಸುತ್ತಿರುವ ಮೀನ ರಾಶಿಯ ಜನರು ತಮ್ಮ ಪ್ರಯತ್ನ ತೀವ್ರಗೊಳಿಸಬೇಕು, ಯಶಸ್ಸು ಸಿಗಲಿದೆ. ವ್ಯಾಪಾರಸ್ಥರ ಪ್ರತಿಷ್ಠೆ ಹೆಚ್ಚಾಗುವುದು, ಬೇರೇಡೆ ಸಿಲುಕಿರುವ ಹಣವೂ ದೊರೆಯುವುದು ಮತ್ತು ವ್ಯಾಪಾರದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅನಾರೋಗ್ಯದಿಂದ ನಡೆಯುತ್ತಿದ್ದರೆ ನೀವು ಎಚ್ಚರದಿಂದಿರಬೇಕು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.