ಕರ್ಪೂರದ ಪ್ರಯೋಜನಗಳು: ಎಲ್ಲರ ಮನೆಯಲ್ಲೂ ಯಾವುದೇ ಪೂಜೆಯಲ್ಲಿ ಕರ್ಪೂರವನ್ನು ಬಳಸೇ ಬಳಸುತ್ತೇವೆ. ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿ ಎರಡು ಬಗೆಯ ಕರ್ಪೂರಗಳು ಲಭ್ಯವಿವೆ. ಒಂದು ನೈಸರ್ಗಿಕ ಕರ್ಪೂರ ಮತ್ತು ಇನ್ನೊಂದು ಕೃತಕ ಕರ್ಪೂರ. ಪೂಜೆಯಲ್ಲಿ ಬಳಸುವ ಕರ್ಪೂರವು ನೈಸರ್ಗಿಕವಾಗಿದ್ದು, ಕೃತಕ ಕರ್ಪೂರವನ್ನು ಬಟ್ಟೆಗಳಲ್ಲಿ ಇರಿಸಲು ಬಳಸಲಾಗುತ್ತದೆ. ಈ ಕೃತಕ ಕರ್ಪೂರವನ್ನು ವಿವಿಧ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗಿದ್ದು, ದೀರ್ಘಕಾಲದವರೆಗೆ ಕಬೋರ್ಡ್‌ನಲ್ಲಿ ಇರಿಸಲಾದ ಬಟ್ಟೆಗಳು ವಾಸನೆಯನ್ನು ಹರಡುವುದಿಲ್ಲ. ಆದರೆ, ಈ ಎರಡೂ ಕರ್ಪೂರಗಳ ನಡುವೆ ಸಾಮಾನ್ಯವಾದ ಒಂದು ವಿಷಯವೆಂದರೆ ಅವುಗಳ ವಾಸನೆಯು ತುಂಬಾ ಪ್ರಬಲವಾಗಿದೆ.  ಕರ್ಪೂರ ಅಂತಹ ಒಂದು ವಸ್ತುವಾಗಿದ್ದು ಬಹುತೇಕ ಎಲ್ಲರ ಮನೆಯಲ್ಲೂ ಇದನ್ನು ಬಳಸಲಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕೇವಲ ಎರಡು ರೂಪಾಯಿಗೆ ಲಭ್ಯವಿರುವ ಈ ಕರ್ಪೂರವು  ಕೆಲವು ಅದ್ಭುತ ಪ್ರಯೋಜನಗಳನ್ನು ಹೊಂದಿದೆ ಎಂಬುದು ಕೆಲವೇ ಜನರಿಗಷ್ಟೇ ತಿಳಿದಿದೆ. ಹಾಗಿದ್ದರೆ, ಕರ್ಪೂರ ಬಳಕೆಯಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಿದೆ ತಿಳಿಯೋಣ...


COMMERCIAL BREAK
SCROLL TO CONTINUE READING

ಕರ್ಪೂರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೇರಳವಾಗಿವೆ:
ನೈಸರ್ಗಿಕ ಕರ್ಪೂರವು ಸುಡುವ ಎಣ್ಣೆಯುಕ್ತ ವಸ್ತುವಾಗಿದೆ ಮತ್ತು ಇದನ್ನು ಭೀಮಸೇನಿ ಕರ್ಪೂರ ಎಂದೂ ಕರೆಯುತ್ತಾರೆ. ಮನೆಯಲ್ಲಿ ಕರ್ಪೂರವನ್ನು ಸುಡುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ತಿಳಿದರೆ ನೀವು ಬಹುಶಃ ಆಶ್ಚರ್ಯಚಕಿತರಾಗುವಿರಿ. ವಾಸ್ತವವಾಗಿ, ಮನೆಯಲ್ಲಿ ಕರ್ಪೂರ ಹಚ್ಚುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ಹೊರಹೋಗಿ ಸಕಾರಾತ್ಮಕತೆ ಮನೆಯನ್ನು ಪ್ರವೇಶಿಸಲಿದೆ ಎಂಬುದು ಧಾರ್ಮಿಕ ನಂಬಿಕೆ. ಕರ್ಪೂರವನ್ನು ಸುಡುವುದರಿಂದ ಬರುವ ವಾಸನೆಯು ನಮಗೆ ತುಂಬಾ ಒಳ್ಳೆಯದು. ಕರ್ಪೂರದಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ, ಇದು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಹಳ ಪ್ರಯೋಜನಕಾರಿ ಎಂದು ನಂಬಲಾಗಿದೆ. 


ಇದನ್ನೂ ಓದಿ- Shukra Asta Effects: ಈ ಜನರ ಅದೃಷ್ಟವನ್ನು ಬೆಳಗಿಸಲಿದ್ದಾನೆ ಅಸ್ತ ಶುಕ್ರ


ಕರ್ಪೂರದ ಪ್ರಯೋಜನಗಳು: 
>> ನಿಮಗೆ ತಲೆನೋವಿನ ಸಮಸ್ಯೆ ಇದ್ದರೆ, ಶುಂಠಿ, ಅರ್ಜುನ ತೊಗಟೆ ಮತ್ತು ಬಿಳಿ ಚಂದನವನ್ನು ಕರ್ಪೂರದೊಂದಿಗೆ ಪುಡಿಮಾಡಿ ಪೇಸ್ಟ್ ಮಾಡಿ. ಈ ಎಲ್ಲಾ ವಸ್ತುಗಳ ಪ್ರಮಾಣವು ಸಮಾನವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಈ ಪೇಸ್ಟ್ ಅನ್ನು ಹಣೆಯ ಮೇಲೆ ಹಚ್ಚುವುದರಿಂದ ತಲೆನೋವಿಗೆ ಉತ್ತಮ ಪರಿಹಾರ ಸಿಗುತ್ತದೆ.


>> ಪ್ರೌಢಾವಸ್ಥೆಯ ಸಮಯದಲ್ಲಿ, ಹುಡುಗ-ಹುಡುಗಿಯರಲ್ಲಿ ಮೊಡವೆ ಸಮಸ್ಯೆ ಸಾಮಾನ್ಯ. ಕೆಲವರಿಗೆ ಈ ಸಮಸ್ಯೆಯಿಂದ ಬೇಗನೆ ಮುಕ್ತಿ ದೊರೆಯುತ್ತದೆ. ಆದರೆ ಕೆಲವು ಮಕ್ಕಳಿಗೆ ಈ ಮೊಡವೆಗಳು ದೀರ್ಘಕಾಲದವರೆಗೆ ತೊಂದರೆ ಕೊಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಕರ್ಪೂರ ಎಣ್ಣೆಯು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಇದು ಮೊಡವೆಗಳನ್ನು ಗುಣಪಡಿಸುವುದು ಮಾತ್ರವಲ್ಲದೆ ಅವುಗಳ ಮರು-ಬೆಳವಣಿಗೆಯನ್ನು ತಡೆಯುತ್ತದೆ.


>> ಮೊಡವೆ, ಹುಣ್ಣು ಮತ್ತು ಮೊಡವೆಗಳಿಂದಾಗಿ ಮುಖದ ಮೇಲೆ ಮೂಡುವ ಕಲೆಗಳನ್ನು ಯಾರೂ ಇಷ್ಟಪಡುವುದಿಲ್ಲ. ಈ ಸಂದರ್ಭದಲ್ಲಿ ತೆಂಗಿನ ಎಣ್ಣೆಯೊಂದಿಗೆ ಬೆರೆಸಿದ ಕರ್ಪೂರವನ್ನು ಬಳಸಬಹುದು. ತೆಂಗಿನ ಎಣ್ಣೆ ಮತ್ತು ಕರ್ಪೂರದ ಈ ಮಿಶ್ರಣವು ಅಂತಹ ಕಲೆಗಳ ಮೇಲೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ ಮುಖದ ತ್ವಚೆಯನ್ನು ಆರೋಗ್ಯವಾಗಿಡುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Toe Ring Benefits: ಕಾಲುಂಗುರ ಧರಿಸುವುದರ ಹಿಂದೆಯೂ ಇದೆ ವೈಜ್ಞಾನಿಕ ಕಾರಣ- ಅದರ ಪ್ರಯೋಜನಗಳನ್ನು ತಿಳಿಯಿರಿ


>> ಹೆಚ್ಚುತ್ತಿರುವ ಮಾಲಿನ್ಯ ಮತ್ತು ಕೆಟ್ಟ ನೀರಿನ ಬಳಕೆಯಿಂದಾಗಿ ಜನರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತಿದೆ. ಇದಲ್ಲದೇ ಇಂದಿನ ಕಾಲದಲ್ಲಿ ತಲೆಹೊಟ್ಟು ಸಮಸ್ಯೆಯಿಂದಲೂ ಅನೇಕರು ತೊಂದರೆಗೀಡಾಗಿದ್ದಾರೆ. ಅಂತಹವರು ಕೊಬ್ಬರಿ ಎಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಅದರಿಂದ ಸಾಕಷ್ಟು ಲಾಭಗಳು ಸಿಗುತ್ತವೆ. ಇದು ನಿಮ್ಮ ನೆತ್ತಿಯಲ್ಲಿ ಡ್ಯಾಂಡ್ರಫ್ ಅನ್ನು ನಿಯಂತ್ರಿಸುವುದು ಮಾತ್ರವಲ್ಲದೆ ಕೂದಲು ಉದುರುವಿಕೆಗೆ ತುಂಬಾ ಪ್ರಯೋಜನಕಾರಿಯಾಗಿದೆ.


>> ನೆಗಡಿ ಮತ್ತು ಕೆಮ್ಮಿನ ಸಂದರ್ಭದಲ್ಲಿ ಬಿಸಿನೀರಿನಲ್ಲಿ ಕರ್ಪೂರವನ್ನು ಸೇರಿಸಿ ಹಬೆ ತೆಗೆದುಕೊಳ್ಳುವುದು ಉತ್ತಮ ಪರಿಹಾರವನ್ನು ನೀಡುತ್ತದೆ. ಇದಲ್ಲದೇ ಕೆಮ್ಮಿನ ಸಂದರ್ಭದಲ್ಲಿ ಸಾಸಿವೆ ಅಥವಾ ಎಳ್ಳೆಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ಬೆನ್ನು ಮತ್ತು ಎದೆಯ ಮೇಲೆ ಹಗುರವಾದ ಕೈಗಳಿಂದ ಮಸಾಜ್ ಮಾಡಿದರೆ ಉತ್ತಮ ಪರಿಹಾರ ಸಿಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.