udh Gochar In Kumbha Rashi: ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧವನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಬುಧನನ್ನು ವ್ಯಾಪಾರ, ಬುದ್ಧಿವಂತಿಕೆ, ತಾರ್ಕಿಕ ಸಾಮರ್ಥ್ಯ ಮತ್ತು ಆರ್ಥಿಕತೆಯ ಕಾರಕ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಬುಧನ ನಡೆಯಲ್ಲಿ ಬದಲಾವನೆಯಾದಾಗ, ಅದು ಈ ಕ್ಷೇತ್ರಗಳನ್ನು  ಒಳಗೊಂಡಂತೆ ಎಲ್ಲಾ ದ್ವಾದಶ ರಾಶಿಗಳ ಮೇಲೆ ಮೇಲೆ ಪ್ರಭಾವ ಬೀರುತ್ತದೆ. ಫೆಬ್ರವರಿ 27 ರಂದು, ಬುಧ ಗ್ರಹವು ಕುಂಭ ರಾಶಿಗೆ ಸಾಗಿದೆ. ಇದರೊಂದಿಗೆ ಶನಿ ಮತ್ತು ಸೂರ್ಯ ದೇವ ಈಗಾಗಲೇ ಕುಂಭದಲ್ಲಿ ನೆಲೆಸಿದ್ದಾರೆ. ಇದರಿಂದ ಅಲ್ಲಿ ತ್ರಿಗ್ರಹಿ ಯೋಗವೂ ಸೃಷ್ಟಿಯಾಗುತ್ತಿದೆ. ಬುಧನ ಈ ಶನಿ ರಾಶಿ ಗೋಚರದಿಂದ ಯಾವ ರಾಶಿಗಳ ಧನ-ಸಂಪತ್ತು ಮತ್ತು ಆದಾಯದಲ್ಲಿ ಹೆಚ್ಚಳವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಮಿಥುನ ರಾಶಿ
ಬುಧದ ಸಂಚಾರವು ನಿಮಗೆ ಸಾಕಷ್ಟು ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಏಕೆಂದರೆ ಬುಧನು ನಿಮ್ಮ ರಾಶಿಗೆ ಅಧಿಪತಿ. ಸೌಕರ್ಯ ಹಾಗೂ ಅದೃಷ್ಟದ ಭಾವದಲ್ಲಿ ಆತ ವಿರಾಜಮಾನನಾಗಿದ್ದಾನೆ. ಹೀಗಾಗಿ ಈ ಸಮಯದಲ್ಲಿ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ಅಲ್ಲದೆ, ನೀವು ಯಾವುದೇ ಧಾರ್ಮಿಕ ಅಥವಾ ಮಂಗಳಕರ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಇನ್ನೊಂದೆಡೆ ನೀವು ಶನಿ ದೇವರ ಆಶೀರ್ವಾದವನ್ನು ಸಹ ಪಡೆಯುವಿರಿ. ಈ ಅವಧಿಯಲ್ಲಿ ನಿಮಗೆ ಬರಬೇಕಾದ ಹಣ ಅಥವಾ ನಿಂತುಹೋದ ಹಣ ನಿಮ್ಮತ್ತ ಮರಳಲಿದೆ.


ಇದನ್ನೂ ಓದಿ-ಮಾರ್ಚ್ ತಿಂಗಳಿನಲ್ಲಿ ನಿರ್ಮಾಣಗೊಳ್ಳುತ್ತಿದೆ ಲಕ್ಷ್ಮಿ ನಾರಾಯಣ ಯೋಗ, 3 ರಾಶಿಗಳ ಜನರಿಗೆ ಭಾರಿ ಧನಲಾಭ!


ಸಿಂಹ ರಾಶಿ
ಸಿಂಹ ರಾಶಿಯವರಿಗೆ ಬುಧ ಸಂಕ್ರಮಣವು ಮಂಗಳಕರವೆಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ಜಾತಕದ ಲಾಭ ಮತ್ತು ಸಂಪತ್ತಿನ ಅಧಿಪತಿಯು ಸಂಕ್ರಮಣದ ಜಾತಕದ ಸಪ್ತಮ ಭಾವದಲ್ಲಿ ಕುಳಿತಿದ್ದಾನೆ. ಇದೇ ವೇಳೆ ಶನಿ ದೇವ ಕೂಡ ನಿಮ್ಮ ದಾಂಪತ್ಯ ಭಾವದಲ್ಲಿ ಶಶ ಹೆಸರಿನ ರಾಜಯೋಗ ನಿರ್ಮಿಸಿ ವಿರಾಜಮಾನನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೀವು ನಿಮ್ಮ ಸಂಗಾತಿಯ ಸಹಾಯದಿಂದ ಹಣವನ್ನು ಪಡೆಯಬಹುದು. ಇದರೊಂದಿಗೆ ಜೀವನ ಸಂಗಾತಿಯ ಪ್ರಗತಿಯೂ ಇರಲಿದೆ. ಈ ಅವಧಿಯಲ್ಲಿ ನಿಮ್ಮ  ನಿಮ್ಮ ಆದಾಯವೂ ಹೆಚ್ಚಾಗಲಿದೆ. ಅದೇ ಸಮಯದಲ್ಲಿ, ವೃತ್ತಿ-ವ್ಯಾಪಾರದಲ್ಲಿ ಕ್ರಮೇಣ ಸುಧಾರಣೆ ಕಂಡುಬರಲಿದೆ. ಕುಟುಂಬದ ಸದಸ್ಯರ ಆರೋಗ್ಯವೂ ಉತ್ತಮವಾಗಿರುತ್ತದೆ.


ಇದನ್ನೂ ಓದಿ-Holi 2023 ಹಬ್ಬದ ಬಳಿಕ ಈ ರಾಶಿಗಳ ಜನರಿಗೆ ಧನಹಾನಿಯ ಯೋಗ! ಕಾರಣ ಇಲ್ಲಿದೆ


ವೃಷಭ ರಾಶಿ
ಶನಿಯ ಮನೆಯಲ್ಲಿ ಬುಧನ ಗೋಚರ ವೃಷಭ ರಾಶಿಯ ಸ್ಥಳೀಯರಿಗೆ ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಬುಧನು ನಿಮ್ಮ ಜಾತಕದ ಸಂಪತ್ತು ಮತ್ತು ಮಕ್ಕಳ ಭಾವದ ಅಧಿಪತಿ, ಪ್ರಗತಿ. ನಿಮ್ಮ ಖ್ಯಾತಿ, ಘನತೆ-ಗೌಅರವಕ್ಕು ಕೂಡ ಬುಧ ಒಡೆಯ. ಇದರಲ್ಲಿ ಬುಧನು ಶನಿಯೊಂದಿಗೆ ಕರ್ಮ ಭಾವದಲ್ಲಿ ವಿರಾಜಮಾನನಾಗಿದ್ದಾನೆ ಮತ್ತು ಶನಿಯು ಸ್ವತಃ ಕೇಂದ್ರ ತ್ರಿಕೋನ ರಾಜ ಯೋಗದಲ್ಲಿ ವಿರಾಜಮಾನನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೀವು ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಎಲ್ಲಾ ಸಾಧ್ಯತೆಗಳು ಇವೆ. ಇದರೊಂದಿಗೆ, ಉದ್ಯೋಗಿಗಳಿಗೆ ಬಡ್ತಿ ಮತ್ತು ಇನ್ಕ್ರಿಮೆಂಟ್ ಯೋಗವಿದೆ. ಅಲ್ಲದೆ, ಈ ಅವಧಿಯಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು.


ಇದನ್ನೂ ಓದಿ-Budh Gochar: ಬುಧ ಗೋಚರ, ವಿಪರೀತ ರಾಜಯೋಗ ನಿರ್ಮಾಣ, 4 ರಾಶಿಗಳ ಜನರಿಗೆ ಅಪಾರ ಧನಲಾಭ ಜೊತೆಗೆ ಭಾಗ್ಯೋದಯ ಪ್ರಾಪ್ತಿ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ