ನವದೆಹಲಿ : ಫೆಬ್ರವರಿ 27ರ ಸುಮಾರಿಗೆ ಮಕರ ರಾಶಿಯಲ್ಲಿ 5 ಗ್ರಹಗಳು ಜೊತೆಯಾಗಲಿವೆ. ಜ್ಯೋತಿಷಿಗಳ ಪ್ರಕಾರ (Astrology), ಮಕರ ರಾಶಿಗೆ ಶನಿಗ್ರಹದ (Saturn)ಪ್ರವೇಶ ದೊಂದಿಗೆ ಪಂಚ ಗ್ರಹಿ ಯೋಗವು ರೂಪುಗೊಳ್ಳಲಿದೆ. ಈ ಪಂಚ ಗ್ರಹಿ ಯೋಗವು (Panchagrahi yoga)ದೇಶದ ಸ್ಥಿತಿ ಮತ್ತು ದಿಕ್ಕನ್ನು ಬದಲಾಯಿಸುವಲ್ಲಿ ನಿರ್ಣಾಯಕವಾಗಿರುತ್ತದೆ. ಈ ಹಿಂದೆ 1962ರಲ್ಲಿ ಅಷ್ಟಗ್ರಹಿ ಯೋಗ ರೂಪುಗೊಂಡಾಗ ಚೀನಾ ಭಾರತದ ಮೇಲೆ ದಾಳಿ ನಡೆಸಿತ್ತು. 


COMMERCIAL BREAK
SCROLL TO CONTINUE READING

ಇಂತಹ ಯೋಗಗಳು ಗಡಿ ವಿವಾದಗಳನ್ನು ಸೃಷ್ಟಿ ಮಾಡುತ್ತವೆ : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Astrology), ಕೆಲವು ಗ್ರಹಗಳು ನಿರ್ದಿಷ್ಟ ರಾಶಿಚಕ್ರದಲ್ಲಿ ಒಟ್ಟಿಗೆ ಸೇರಿದಾಗ,  ದೇಶ, ಕಾಲದ ಪ್ರಕಾರ, ಕೆಲವು ದೊಡ್ಡ ಬದಲಾವಣೆಗಳಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಹೆಚ್ಚಾಗಿ ಗಡಿ ವಿವಾದಗಳು ಸೃಷ್ಟಿಯಾಗುತ್ತವೆ. ಈ ದಿನಗಳಲ್ಲಿ ಪಂಚ ಗ್ರಹಿ ಯೋಗದಿಂದ ರಷ್ಯಾ ಮತ್ತು ಉಕ್ರೇನ್ (Russia Ukraine war) ನಡುವಿನ ಗಡಿ ವಿವಾದ ಹೆಚ್ಚಾಗಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕಕಾರಿ ಸನ್ನಿವೇಶ ಉಂಟಾಗಲಿದೆ. 


ಇದನ್ನೂ ಓದಿ : ಕೈ ತಪ್ಪಿದ ಕೆಲಸ ಕೂಡಾ ಕೈಗೂಡುವಂತೆ ಮಾಡುತ್ತದೆ ಚಿಟಿಕೆ ಅರಶಿನ


ಗದ್ದುಗೆ ಕಳೆದುಕೊಳ್ಳಲಿದೆಯೇ ಆಡಳಿತ ಪಕ್ಷ :
ಜ್ಯೋತಿಷಿಯ ಪ್ರಕಾರ, ಈ ಖಗೋಳ ಘಟನೆಯ ಪರಿಣಾಮವು ಭಾರತದಲ್ಲಿ ನಡೆಯುವ ಚುನಾವಣೆಯ ಮೇಲೂ ಬೀಳುತ್ತದೆ. ಇದು ಕೆಲವು ಅನಿರೀಕ್ಷಿತ ಫಲಿತಾಂಶಗಳಿಗೆ ಕಾರಣವಾಗಬಹುದು. ಈ ಪಂಚ ಗ್ರಹಿ ಯೋಗದಿಂದ ಕೆಲವು ಆಡಳಿತ ಪಕ್ಷಗಳು ಅಧಿಕಾರ ಕಳೆದುಕೊಂಡರೆ ಮತ್ತೆ ಕೆಲವರಿಗೆ ತೀವ್ರ ನಷ್ಟ ಎದುರಾಗಬಹುದು. ಈ ಪಂಚ ಗ್ರಾಹಿ ಯೋಗವು 27 ಫೆಬ್ರವರಿ 2022 ರಿಂದ 10 ಮಾರ್ಚ್ 2022 ರವರೆಗೆ ಇರಲಿದೆ. ಮಾರ್ಚ್ 10 ರಂದು 5 ರಾಜ್ಯಗಳ ಚುನಾವಣಾ ಫಲಿತಾಂಶಗಳು (Five state election result) ಬರಲಿದೆ. ಇಷ್ಟೇ ಅಲ್ಲ, ಈ ಅವಧಿಯಲ್ಲಿ ಕಾಳ  ಸರ್ಪ ಯೋಗ ಕೂಡ ಪರಿಣಾಮಕಾರಿಯಾಗಲಿದೆ. ಇದು ಅನಿರೀಕ್ಷಿತ ಘಟನೆಗಳಿಗೆ ಕಾರಣವಾಗಬಹುದು. 


ಫೆಬ್ರವರಿ 27, 2022 ರಂದು ಮಕರ ರಾಶಿಯಲ್ಲಿ ವಿಶೇಷ ಪಂಚಾಯತ್ ಪ್ರಾರಂಭವಾಗುತ್ತದೆ. ಅದರಲ್ಲಿ ಬುಧ, ಮಂಗಳ ಮತ್ತು ಶನಿ ಈಗಾಗಲೇ ಇದ್ದು, ಅದೇ ದಿನ ಚಂದ್ರ ಮತ್ತು ಶುಕ್ರ (Venus)ಕೂಡ ಪ್ರವೇಶಿಸಲಿದ್ದಾರೆ. ಈ ಸ್ಥಿತಿಯು ಕೆಲವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಪಂಚ ಗ್ರಹಿ ಯೋಗದಿಂದ ಮೇಷ, ವೃಷಭ, ಕಟಕ, ತುಲಾ, ಮಕರ ರಾಶಿಯವರಿಗೆ ಚುನಾವಣೆಯಲ್ಲಿ ಲಾಭವಾಗಲಿದೆ. ಮತ್ತೊಂದೆಡೆ, ತಮ್ಮ ಜಾತಕದಲ್ಲಿ ಶುಕ್ರ, ಶನಿ, ಬುಧ, ಚಂದ್ರ ಮತ್ತು ಮಂಗಳವನ್ನು ಉತ್ತಮ ಸ್ಥಾನದಲ್ಲಿ ಹೊಂದಿರುವ ಜನರಿಗೆ, ಈ ಪಂಚಗ್ರಹಿ ಯೋಗವು ಅದೃಷ್ಟವಾಗಿ ಪರಿಣಮಿಸಲಿದೆ. 


ಇದನ್ನೂ ಓದಿ : ಇಂಥ ಜನರಿಗೆ ಸಹಾಯ ಮಾಡಿದರೆ ನಮ್ಮ ಜೀವನವನ್ನೇ ಹಾಳು ಮಾಡಿಕೊಂಡಂತೆ..!


ಅದೇ ಸಮಯದಲ್ಲಿ, ತಮ್ಮ ಜನ್ಮದಲ್ಲಿ ಸಂಪೂರ್ಣ ಕಾಳಸರ್ಪ ಯೋಗವನ್ನು (Kala sarpa yoga)ಹೊಂದಿರುವವರ ಅದೃಷ್ಟ ಈ ಸಮಯದಿಂದ ಬದಲಾಗುತ್ತದೆ. ಅವರ ಜೀವನದಲ್ಲಿ ಆಕಾಶದೆತ್ತರಕ್ಕೆ  ಬೆಳೆಯುವ ಅವಕಾಶ ಸಿಗುತ್ತದೆ. ಕೆಲವರಿಗೆ ಸರಕಾರದಿಂದ  ದಿಢೀರ್‌ ದೊಡ್ಡ ಲಾಭವಾಗಲಿದೆ. ಅವರ ಕನಸುಗಳು ನಿರೀಕ್ಷಿಸದ ಮಟ್ಟದಲ್ಲಿ  ಈಡೇರುತ್ತವೆ.  
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ