ಬೆಂಗಳೂರು : Rahu Lines in Palmistry : ಪ್ರತಿಯೊಬ್ಬನೂ ಜೀವನದಲ್ಲಿ ಸಿರಿವಂತನಾಗಲು ಬಯಸುತ್ತಾನೆ. ಆದರೆ ಕೆಲವರು ಎಷ್ಯೇ ಕಷ್ಟಪಟ್ಟರೂ, ಶ್ರಮಪಟ್ಟರೂ ಗುರಿ ಸಾಧಿಸುವುದು ಕಷ್ಟವಾಗುತ್ತದೆ. ಕೆಲವರು ಮಾತ್ರ ಜೀವನದಲ್ಲಿ ಅಪಾರ ಸಂಪತ್ತಿನ ಮಾಲೀಕರಾಗುವುದು ಸಾಧ್ಯವಾಗುತ್ತದೆ. ಅವರ ಸಾಮರ್ಥ್ಯದ ಹೊರತಾಗಿ, ಅವರ ಅದೃಷ್ಟವೂ ಇದಕ್ಕೆ ಕಾರಣವಾಗಿರುತ್ತದೆ. ಜ್ಯೋತಿಷ್ಯದ ಮೂಲಕ, ಒಬ್ಬ ವ್ಯಕ್ತಿಯು ಎಷ್ಟು ಅದೃಷ್ಟಶಾಲಿ ಮತ್ತು ಅವನು ಎಷ್ಟರ ಮಟ್ಟಿಗೆ ಜೀವನದಲ್ಲಿ ಯಶಸ್ವಿಯಾಗುತ್ತಾನೆ ಎನ್ನುವುದನ್ನು ತಿಳಿಯಬಹುದು. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಕೆಲವು ರೇಖೆಗಳು, ಗುರುತುಗಳು, ಚಿಹ್ನೆಗಳನ್ನು ಬಹಳ ಮಂಗಳಕರ ಅಥವಾ ಹೆಚ್ಚು ಮುಖ್ಯವೆಂದು ಹೇಳಲಾಗುತ್ತದೆ. ಇವುಗಳಲ್ಲಿ ರಾಹು ರೇಖೆ ಕೂಡ ಒಂದು. ರಾಹು ರೇಖೆ ಕೈಯಲ್ಲಿ ಮಂಗಳಕರ ಸ್ಥಾನದಲ್ಲಿದ್ದರೆ  ವ್ಯಕ್ತಿಯೂ ಆಗಸದೆತ್ತರಕ್ಕೆ ಏರುತ್ತಾನೆ ಎಂದು ಹೇಳಲಾಗುತ್ತದೆ. ವ್ಯಕ್ತಿ ಅಪಾರ ಸಂಪತ್ತಿನ ಒಡೆಯನಾಗುತ್ತಾನೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಅಪಾರ ಸಂಪತ್ತು, ಐಶ್ವರ್ಯ ತರುತ್ತದೆ  ರಾಹು ರೇಖೆ : 
ರಾಹು ರೇಖೆ ಕೈಯಲ್ಲಿ ಉತ್ತಮ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಜೀವನವೇ  ಬದಲಾಗುತ್ತದೆ. ಆದರೆ, ಎಲ್ಲರ ಕೈಯಲ್ಲಿ ರಾಹು ರೇಖೆ ಇರುವುದಿಲ್ಲ. ಅಂಗೈಯಲ್ಲಿರುವ ರೇಖೆಗಳು ಮಂಗಳ ಪ್ರದೇಶವನ್ನು ಬಿಟ್ಟು ಜೀವನ ರೇಖೆ ಮತ್ತು ಅದೃಷ್ಟ ರೇಖೆಯನ್ನು ದಾಟಿ  ಮಸ್ತಿಷ್ಕ ರೇಖೆಯನ್ನು ತಲುಪುತ್ತವೆಯೋ  ಇವುಗಳನ್ನು ರಾಹು ರೇಖೆಗಳು ಎಂದು ಕರೆಯಲಾಗುತ್ತದೆ. ಈ  ರೇಖೆಗಳು ಹಸ್ತದ ಮಧ್ಯದಲ್ಲಿರುತ್ತವೆ. 


ಇದನ್ನೂ ಓದಿ : ಈ ಅಕ್ಷರದಿಂದ ಹೆಸರು ಆರಂಭವಾಗುವವರ ಮೇಲೆ ಜೀವನ ಪೂರ್ತಿ ಇರುತ್ತದೆ ಕುಬೇರನ ಆಶೀರ್ವಾದ


ಆದಾಗ್ಯೂ, ರಾಹು ರೇಖೆಗಳು ದಪ್ಪ ಮತ್ತು  ಗಾಢವಾಗಿದ್ದಾಗ ಮಾತ್ರ ಸರಿಯಾದ ಪರಿಣಾಮವನ್ನು ತೋರಿಸುತ್ತವೆ. ರಾಹು ರೇಖೆಗಳು ದುರ್ಬಲವಾಗಿದ್ದರೆ ಅವು ಯಾವುದೇ ಫಲವನ್ನು ನೀಡುವುದಿಲ್ಲ. 


ಕೈಯಲ್ಲಿ ರಾಹು ರೇಖೆಗಳ ಸಂಖ್ಯೆ ಒಂದಕ್ಕಿಂತ ಹೆಚ್ಚು ಇದ್ದರೆ ಅಂಥಹ ಜನರು ಬಹಳ ದೊಡ್ಡ ನಾಯಕರಾಗುತ್ತಾರೆ. ಈ ಜನರು ರಾಜಕೀಯ ಅಥವಾ ಆಡಳಿತದಲ್ಲಿ ದೊಡ್ಡ ಸ್ಥಾನವನ್ನು ಪಡೆಯುತ್ತಾರೆ. ಅವರಿಗೆ ರಾಜತಾಂತ್ರಿಕರಾಗುವ ಸಾಮರ್ಥ್ಯವೂ ಇರುತ್ತದೆ. ಅವರು ತಮ್ಮ ನಾಯಕತ್ವದ ಸಾಮರ್ಥ್ಯ ಮತ್ತು ಕೆಲಸದಿಂದಾಗಿ ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ಪಡೆಯುತ್ತಾರೆ. 


ಇದನ್ನೂ ಓದಿ : ಮನೆಯಿಂದ ಹೊರಬಂದ ತಕ್ಷಣ ಬೆಕ್ಕು ಅಡ್ಡಬಂದರೆ ಯಾವುದರ ಸಂಕೇತ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.