ಶನಿ ಸಾಡೇ ಸಾತಿ ಪ್ರಭಾವದಿಂದ ಪರಿಹಾರ ಪಡೆಯಲು ಸರಳ ಉಪಾಯ :  ಶನಿ ಗ್ರಹವನ್ನು ಕರ್ಮಫಲ ದಾಯಕ, ನ್ಯಾಯದ ದೇವರು ಎಂದು ಹೇಳಲಾಗುತ್ತದೆ. ಶನಿ ರಾಶಿ ಬದಲಾವಣೆಯು ಕೆಲವು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡಿದರೆ, ಇನ್ನೂ ಕೆಲವು ರಾಶಿಯವರಿಗೆ ಅಶುಭ ಫಲಿತಾಂಶಗಳನ್ನು ನೀಡುತ್ತಿದೆ.  ಶನಿ ಗ್ರಹದ ರಾಶಿ ಪರಿವರ್ತನೆಯಿಂದಾಗಿ ಕೆಲವು ರಾಶಿಗಳ ಮೇಲೆ ಶನಿ ಸಾಡೇ ಸಾತಿ ಮತ್ತು ಶನಿ ಧೈಯಾ ಪ್ರಾರಂಭವಾಗುತ್ತದೆ. 29 ಏಪ್ರಿಲ್ 2022 ರಂದು, ಶನಿಯು ಎರಡೂವರೆ ವರ್ಷಗಳ ನಂತರ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಇದು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ ಶನಿ ಸಾಡೇ ಸಾತಿ ಮತ್ತು ಧೈಯಾ ಪ್ರಭಾವ ಹೊಂದಿರುವ ರಾಶಿಗಳ ಮೇಲೆ ಗರಿಷ್ಠ ಪರಿಣಾಮ ಬೀರುತ್ತದೆ. ಅಂತಹ ರಾಶಿಯಗಳು ಯಾವುವು ಹಾಗೂ ಸಾಡೇ ಸಾತಿ ಶನಿಯ ಪ್ರಭಾವದಿಂದ ಮುಕ್ತಿ ಪಡೆಯುವುದು ಹೇಗೆ ಎಂಬುದನ್ನು ತಿಳಿಯೋಣ...


COMMERCIAL BREAK
SCROLL TO CONTINUE READING

ಈ ರಾಶಿ ಚಕ್ರಗಳ ಮೇಲೆ ಸಾಡೇ ಸಾತಿ ಶನಿ ಪ್ರಭಾವ:
ಶನಿಯು ತನ್ನ ಸ್ವಂತ ರಾಶಿಯಾದ ಕುಂಭ ರಾಶಿಗೆ ಪ್ರವೇಶಿಸಿದ ಕೂಡಲೇ ಮೀನ ರಾಶಿಯ ಜನರಿಗೆ ಶನಿಯ ಸಾಡೇ ಸಾತಿ ಪ್ರಾರಂಭವಾಗಲಿದೆ ಮತ್ತು ಧನು ರಾಶಿಯವರು ಇದರಿಂದ ಮುಕ್ತಿ ಹೊಂದುತ್ತಾರೆ. ಹೀಗಿರುವಾಗ ಸಾಡೇ ಸಾತಿ ಏಳೂವರೆ ವರ್ಷಗಳ ಕಾಲ ನಡೆಯುವುದರಿಂದ ಮೀನ ರಾಶಿಯವರಿಗೆ ಚಿಂತೆ ಕಾಡುವುದು ಸಹಜ. ಇಂತಹ ಪರಿಸ್ಥಿತಿಯಲ್ಲಿ ಸಾಡೇ ಸಾತಿ ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಲು ಈಗಿನಿಂದಲೇ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಈ ಜನರಿಗೆ ಪರಿಹಾರವನ್ನು ನೀಡಬಹುದು. 


ಇದನ್ನೂ ಓದಿ- Shani Gochar: ಎರಡೂವರೆ ವರ್ಷಗಳ ಕಷ್ಟದ ನಂತರ ಶನಿ ಕಾಟದಿಂದ ಮುಕ್ತಿ ಪಡೆಯಲಿದ್ದಾರೆ ಈ ರಾಶಿಯ ಜನ


ಶನಿಯ ಸಾಡೇ ಸಾತಿ ಪ್ರಭಾವದಿಂದ ಪರಿಹಾರ ಪಡೆಯಲು ಸರಳ ಉಪಾಯಗಳು:
ಶನಿಯು ಕರ್ಮಕ್ಕೆ ಅನುಗುಣವಾಗಿ ಫಲವನ್ನು ನೀಡುವ ದೇವರು. ಆದ್ದರಿಂದ ಅವನ ಕೋಪದಿಂದ ದೂರವಿರಲು ಒಳ್ಳೆಯ ಕಾರ್ಯವನ್ನು ಮಾಡುವುದು ಉತ್ತಮ ಮಾರ್ಗವಾಗಿದೆ. ಇದಕ್ಕಾಗಿ, ದಾನ ಮಾಡುವುದು ಮತ್ತು ಅಸಹಾಯಕ, ದುಡಿಯುವ ಜನರಿಗೆ ಸಹಾಯ ಮಾಡುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಇಂತಹ ಕಾರ್ಯಗಳಿಂದ ಶನಿದೇವನು ಯಾವಾಗಲೂ ಸಂತೋಷವಾಗಿರುತ್ತಾನೆ ಎಂದು ನಂಬಲಾಗಿದೆ. 


- ಶನಿಯ ಸಾಡೇ ಸಾತಿ ಅಥವಾ ಶನಿಯ ಧೈಯಾ ಪ್ರಭಾವಕ್ಕೆ ಒಳಗಾಗಿರುವವರು ಶನಿವಾರದಂದು ಬಡವರಿಗೆ ಕಪ್ಪು ಬಟ್ಟೆ, ಕಪ್ಪು ಎಳ್ಳು ಮತ್ತು ಕಾಳುಗಳನ್ನು ದಾನ ಮಾಡಬೇಕು. 


- ಕಾರ್ಮಿಕರು, ಮಹಿಳೆಯರು, ಅಂಗವಿಕಲರಿಗೆ ಸಹಾಯ ಮಾಡಿ. ಅಪ್ಪಿತಪ್ಪಿಯೂ ಅವರನ್ನು ಅವಮಾನಿಸಬೇಡಿ ಅಥವಾ ಅಂತಹವರ ಮೇಲೆ ಅಥವಾ ಅಸಹಾಯಕರ ಮೇಲೆ ದಬ್ಬಾಳಿಕೆ ಮಾಡಬೇಡಿ. 


- ಶನಿ ಸಾಡೇ ಸಾತಿ- ಶನಿ ಧೈಯಾದಿಂದ ಪರಿಹಾರವನ್ನು ಪಡೆಯಲು, ಪ್ರತಿ ಶನಿವಾರದಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಇದು ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Shani Gochar 2022: ಶನಿಯ ರಾಶಿ ಪರಿವರ್ತನೆಯಿಂದ ಈ ಮೂರು ರಾಶಿಯವರ ಎಲ್ಲಾ ಕಷ್ಟಗಳಿಗೂ ಕೊನೆ


- ಶನಿವಾರದಂದು 'ಓಂ ಪ್ರಾಂ ಪ್ರಿಂ ಪ್ರೌನ್ ಸಹ ಶನೀಶ್ವಚರಾಯ ನಮಃ' ಮತ್ತು 'ಓಂ ಶನೀಶ್ವರಾಯೈ ನಮಃ' ಎಂಬ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮಲ್ಲಿ ಸಕಾರಾತ್ಮಕತೆ ತುಂಬುತ್ತದೆ. ಹಾಗೆಯೇ ಶನಿದೇವನ ಕೃಪೆಯಿಂದ ಪ್ರತಿಯೊಂದು ಕೆಲಸವೂ ಸುಲಭವಾಗಿ ನೆರವೇರುತ್ತದೆ. 


- ಶನಿದೇವನ ಕೋಪದಿಂದ ಮುಕ್ತಿ ಪಡೆಯಲು ಉತ್ತಮ ಮಾರ್ಗವೆಂದರೆ ದೋಷನಿವಾರಕ ಹನುಮಂತನ ಮಂದಿರಕ್ಕೆ ಹೋಗುವುದು. ಇದಕ್ಕಾಗಿ, ಶನಿವಾರದಂದು ಹನುಮಾನ್ ಚಾಲೀಸಾ ಅಥವಾ ಸುಂದರಕಾಂಡವನ್ನು ಓದಿ. ಇದಲ್ಲದೆ ಕೈಲಾಗದವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡುವುದರಿಂದಲೂ ದೇವರ ಕೃಪೆಗೆ ಪಾತ್ರರಾಗಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.