Shani Gochar: ಎರಡೂವರೆ ವರ್ಷಗಳ ಕಷ್ಟದ ನಂತರ ಶನಿ ಕಾಟದಿಂದ ಮುಕ್ತಿ ಪಡೆಯಲಿದ್ದಾರೆ ಈ ರಾಶಿಯ ಜನ

ಜ್ಯೋತಿಷ್ಯದಲ್ಲಿ, ಶನಿದೇವನನ್ನು ಕರ್ಮ ಫಲ ದಾತ ಎಂದು ಕರೆಯಲಾಗುತ್ತದೆ. ಏಪ್ರಿಲ್ 29 ರಂದು ಶನಿದೇವನು ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಶನಿಯ ಈ ಬದಲಾವಣೆಯಿಂದ ಕೆಲವು ರಾಶಿಯವರ ಜೀವನದಲ್ಲಿ ವಿಶೇಷ ಬದಲಾವಣೆ ಉಂಟಾಗುತ್ತದೆ ಎಂದು ನಂಬಲಾಗಿದೆ.

Written by - Yashaswini V | Last Updated : Apr 15, 2022, 02:56 PM IST
  • 29 ಏಪ್ರಿಲ್ 2022 ರಂದು ಶನಿದೇವನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.
  • ಶನಿದೇವನ ಈ ರಾಶಿ ಬದಲಾವಣೆಯು ಎಲ್ಲಾ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ
  • 3 ರಾಶಿಯ ಜನರು ಶನಿಯ ಕೋಪದಿಂದ ಮುಕ್ತರಾಗುತ್ತಾರೆ.
Shani Gochar: ಎರಡೂವರೆ ವರ್ಷಗಳ ಕಷ್ಟದ ನಂತರ ಶನಿ ಕಾಟದಿಂದ  ಮುಕ್ತಿ ಪಡೆಯಲಿದ್ದಾರೆ ಈ ರಾಶಿಯ ಜನ  title=
Shani rashi parivartan effect

ಶನಿ ಗೋಚಾರ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೈಯ ಮತ್ತು ಸಾಡೆ ಸತಿಯಿಂದ ಬಳಲುತ್ತಿರುವ ಜನರಿಗೆ ಏಪ್ರಿಲ್ ತಿಂಗಳು ವಿಶೇಷವಾಗಿದೆ. ವಾಸ್ತವವಾಗಿ, ಎರಡೂವರೆ ವರ್ಷಗಳ ಕಾಲ ಶನಿಯ ಧೈಯಾದಿಂದ ಪ್ರಭಾವಿತರಾದವರಿಗೆ, ಶನಿಯ ರಾಶಿ ಬದಲಾವಣೆಯು ವಿಶೇಷವೆಂದು ಸಾಬೀತುಪಡಿಸಲಿದೆ. ಶನಿಯ ಸಂಕ್ರಮಣದೊಂದಿಗೆ  ಕೆಲವು ರಾಶಿಚಕ್ರ ಚಿಹ್ನೆಗಳ ಅದೃಷ್ಟವು ಬದಲಾಗಲಿದೆ. ಆ ರಾಶಿಚಕ್ರದ ಚಿಹ್ನೆಗಳ ಬಗ್ಗೆ ತಿಳಿಯೋಣ. 

ಮೂರು ರಾಶಿಯವರಿಗೆ ಶನಿಯ ಕೋಪದಿಂದ ಮುಕ್ತಿ:
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಸಮಯದಲ್ಲಿ ಮಿಥುನ ಮತ್ತು ತುಲಾ ರಾಶಿಯ ಜನರ ಮೇಲೆ ಶನಿಯ ಧೈಯ ಪ್ರಭಾವ ನಡೆಯುತ್ತಿದೆ. ಇದಲ್ಲದೇ ಧನು, ಮಕರ, ಕುಂಭ ರಾಶಿಯವರಿಗೆ ಶನಿಯ ಸಾಡೇ ಸಾತಿ ನಡೆಯುತ್ತಿದೆ. 29 ಏಪ್ರಿಲ್ 2022 ರಂದು ಶನಿದೇವನು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿದೇವನ ಈ ರಾಶಿ ಬದಲಾವಣೆಯು ಎಲ್ಲಾ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆಯಾದರೂ, 3 ರಾಶಿಯ ಜನರು ಶನಿಯ ಕೋಪದಿಂದ ಮುಕ್ತರಾಗುತ್ತಾರೆ. 

ಇದನ್ನೂ ಓದಿ- Shani Sadhe Sati Remedies: ಸಾಡೇಸಾತಿಯಲ್ಲಿಯೂ ಶನಿಯ ಕೃಪೆಗೆ ಪಾತ್ರರಾಗಲು ಶನಿವಾರದಂದು ತಪ್ಪದೇ ಈ ಕೆಲಸ ಮಾಡಿ

ಮಿಥುನ ರಾಶಿ: ಕುಂಭ ರಾಶಿಯಲ್ಲಿ ಶನಿ ಸಂಕ್ರಮಿಸಿದ ಕೂಡಲೇ ಮಿಥುನ ರಾಶಿಯವರಿಗೆ ಶನಿಯ ಬಾಧೆಯಿಂದ ಮುಕ್ತಿ ದೊರೆಯುತ್ತದೆ. ಧೈಯಾ ಪರಿಣಾಮವು ಕೊನೆಗೊಂಡ ತಕ್ಷಣ, ಈ ರಾಶಿಚಕ್ರದ ಜನರ ಜೀವನದ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ. 

ತುಲಾ ರಾಶಿ: ಏಪ್ರಿಲ್ 29 ರಂದು ಶನಿಯ ಸಂಕ್ರಮಣದ ನಂತರ, ತುಲಾ ರಾಶಿಯಿಂದ ಶನಿಯ ಧೈಯಾವು ತಕ್ಷಣವೇ ಕೊನೆಗೊಳ್ಳುತ್ತದೆ. ಅದರ ನಂತರ ಈ ರಾಶಿಚಕ್ರದ ಜನರ ಜೀವನದಲ್ಲಿ ಸುವರ್ಣ ಸಮಯ ಬರುತ್ತದೆ. ಜೀವನದಲ್ಲಿ ಬರುವ ಅಡೆತಡೆಗಳು ಕ್ರಮೇಣ ಕೊನೆಗೊಳ್ಳುತ್ತವೆ. ಇದರೊಂದಿಗೆ ಆರ್ಥಿಕ ಪ್ರಗತಿಯೂ ಇರುತ್ತದೆ. ಇದಲ್ಲದೇ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಇದಲ್ಲದೇ ಕಾನೂನು ವಿವಾದಗಳಿಂದ ಮುಕ್ತಿ ಪಡೆಯಬಹುದು. 

ಇದನ್ನೂ ಓದಿ- Shani Gochar: 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ಪ್ರವೇಶ, ಬೆಳಗಲಿದೆ ಈ ರಾಶಿಯವರ ಭಾಗ್ಯ

ಧನು ರಾಶಿ: ಪ್ರಸ್ತುತ ಧನು ರಾಶಿಯವರಿಗೆ ಶನಿ ಸಾಡೇ ಸಾತಿ ಪ್ರಭಾವ ನಡೆಯುತ್ತಿದೆ. ಆದರೆ, ಏಪ್ರಿಲ್ 29 ರಂದು ಶನಿಯು ರಾಶಿಯನ್ನು ಬದಲಾಯಿಸಿದ ತಕ್ಷಣ, ಈ ರಾಶಿಯ ಜನರು ಶನಿ ಸಾಡೇ ಸಾತಿಯಿಂದ ಮುಕ್ತರಾಗುತ್ತಾರೆ. ಇದರ ಫಲವಾಗಿ ಈ ರಾಶಿಯ ಜನರ ಜೀವನದಲ್ಲಿ ಸಂತೋಷ ಇರುತ್ತದೆ. ಆರ್ಥಿಕ ಪ್ರಗತಿಯ ಜತೆಗೆ ಪ್ರತಿಷ್ಠೆಯೂ ಹೆಚ್ಚಲಿದೆ. ಉದ್ಯೋಗ-ವ್ಯವಹಾರದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News