Saturn Rise In Aquarius 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ಅಸ್ತಮಿಸುತ್ತವೆ ಮತ್ತು ಉದಯಿಸುತ್ತವೆ ಹಾಗೂ ಅನೇಕ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಇದರ ಪರಿಣಾಮ ಮಾನವ ಜೀವನದ ಮೇಲೆ ಮತ್ತು ಭೂಮಿಯ ಮೇಲೆ ಕಂಡುಬರುತ್ತದೆ. ಮಾರ್ಚ್ 9 ರಂದು ಶನಿದೇವನು ಉದಯಿಸಲಿದ್ದಾನೆ.ಇದರಿಂದ ಶಶ ಮಹಾಪುರುಷರು ರಾಜಯೋಗ ರೂಪುಗೊಳ್ಳಲಿದೆ. ಈ ರಾಜಯೋಗದ ಪರಿಣಾಮವು ಎಲ್ಲಾ ದ್ವಾದಶ ರಾಶಿಗಳ ಸ್ಥಳೀಯರ ಮೇಲೆ ಕಂಡುಬರಲಿದೆ. ಆದರೆ 3 ರಾಶಿಗಳ ಜನರಿಗೆ ಈ ರಾಜಯೋಗವು ಸಾಕಷ್ಟು ಧನ ಸಂಪತ್ತು ಮತ್ತು ಭಾಗ್ಯವನ್ನು ಕರುಣಿಸಲಿದೆ. ಈ ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಮೇಷ ರಾಶಿ
ಶಶ ಮಹಾಪುರುಷ ರಾಜಯೋಗದ ರಚನೆಯಿಂದಾಗಿ, ಮೇಷ ರಾಶಿಯ ಜನರ ಆದಾಯದಲ್ಲಿ ಅಗಾಧವಾದ ಹೆಚ್ಚಳವಾಗಲಿದೆ. ಏಕೆಂದರೆ ಶನಿ ದೇವನು ನಿಮ್ಮ ರಾಶಿಯ ಆದಾಯದ ಸ್ಥಳದಲ್ಲಿ ಇರಲಿದ್ದಾನೆ. ಆದ್ದರಿಂದಲೇ ಈ ಸಮಯದಲ್ಲಿ ಆರ್ಥಿಕ ಸುಧಾರಣೆಗಾಗಿ ಮಾಡಿದ ಯೋಜನೆಯೂ ಯಶಸ್ವಿಯಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ವೇತನ ಹೆಚ್ಚಳದ ಅವಕಾಶಗಳಿವೆ. ಇದರೊಂದಿಗೆ ಉದ್ಯಮಿಗಳ ಆದಾಯದಲ್ಲಿ ಭಾರಿ ಏರಿಕೆಯಾಗಬಹುದು. ಈ ಅವಧಿಯಲ್ಲಿ ನೀವು ಷೇರುಗಳು, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು.


ಇದನ್ನೂ ಓದಿ-Gajlakshmi Rajyog: 12 ವರ್ಷಗಳ ಬಳಿಕ ಜಾತಕದಲ್ಲಿ 'ಗಜಲಕ್ಷ್ಮಿ ರಾಜಯೋಗ', 3 ರಾಶಿಗಳಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಯೋಗ!

ಧನು ರಾಶಿ
ಶಶ ಮಹಾಪುರುಷ ರಾಜಯೋಗದ ರಚನೆ ಧನು ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದೆ. ಏಕೆಂದರೆ ಶನಿದೇವನು ನಿಮ್ಮ ರಾಶಿಯಿಂದ ತೃತೀಯ ಭಾವದಲ್ಲಿ ಉದಯಿಸಲಿದ್ದಾನೆ. ಇದನ್ನು ಧೈರ್ಯ ಮತ್ತು ಶಕ್ತಿಯ ಸ್ಥಳವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸುವಿರಿ. ಅಲ್ಲದೆ, ಯಾರ ಕೆಲಸವು ಪ್ರವಾಸೋದ್ಯಮ, ಕಬ್ಬಿಣ ಅಥವಾ ವಿದೇಶಗಳಿಗೆ ಸಂಬಂಧಿಸಿದೆಯೋ ಅವರಿಗೆ ಲಾಭ ಸಿಗುವ ಬಲವಾದ ಅವಕಾಶಗಳಿವೆ. ಇದೇ ವೇಳೆ ಈ ಅವಧಿಯು ನಿಮಗೆ ಭಾರಿ ಅದೃಷ್ಟಶಾಲಿ ಸಾಬೀತಾಗಲಿದೆ. ಕಲೆ, ಗಾಯಕ ಅಥವಾ ಕಲಾವಿದರಾಗಿರುವ ಜನರಿಗೆ ಈ ಅವಧಿಯಲ್ಲಿ  ಸಹೋದರ ಸಹೋದರಿಯರ ಬೆಂಬಲ ಸಿಗಲಿದೆ. ಇದರೊಂದಿಗೆ ಸಾಡೇಸಾತಿಯಿಂದ ಮುಕ್ತಿ ಪಡೆದು ನಿಮ್ಮೆಲ್ಲ ಕೆಲಸಗಳೂ ಪೂರ್ಣಗೊಳ್ಳಲಿವೆ.


ಇದನ್ನೂ ಓದಿ-Mahashivratri 2023: ಇಂದು ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗ, ಶಿವನ ಆರಾಧನೆಗೆ ಮುಹೂರ್ತಗಳ ಪಟ್ಟಿ ಇಲ್ಲಿದೆ


ಕುಂಭ ರಾಶಿ
ಶಶ ರಾಜಯೋಗವು ನಿಮಗೆ ಮಂಗಳಕರ ಮತ್ತು ಫಲಪ್ರದವಾಗಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಲಗ್ನ ಭಾವದಲ್ಲಿ ಶನಿದೇವನು ಉದಯಿಸಲಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಆರೋಗ್ಯವು ಸುಧಾರಿಸುತ್ತದೆ. ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದಾರೆ ಅದರಿಂದ ನಿಮಗೆ ಮುಕ್ತಿ ಸಿಗಲಿದೆ. ನೀವು ಮೊದಲಿಗಿಂತ ಹೆಚ್ಚು ಶಕ್ತಿಯನ್ನು ನಿಮ್ಮೊಳಗೆ ಕಾಣುವಿರಿ. ಇದರೊಂದಿಗೆ, ಈ ಸಮಯದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಮತ್ತೊಂದೆಡೆ, ರಾಜಕೀಯದೊಂದಿಗೆ ಸಂಬಂಧ ಹೊಂದಿರುವರಿಗೆ ಅಧಿಕಾರ ಹುದ್ದೆ ಸಿಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಶನಿದೇವನ ಉದಯದಿಂದಾಗಿ, ಈ ರಾಶಿಯ ಉದ್ಯೋಗಿಗಳಿಗೆ ಬಡ್ತಿ ಅಥವಾ ಇನ್ಕ್ರಿಮೆಂಟ್ ಸಿಗಬಹುದು. ಮತ್ತೊಂದೆಡೆ, ಅವಿವಾಹಿತರಿಗೆ ಮದುವೆಯ ಪ್ರಸ್ತಾವ ಸಿಗುವ ಸಾಧ್ಯತೆ ಇದೆ.


ಇದನ್ನೂ ಓದಿ-Mahashivratri 2023: ಕುಂಭ ಸೇರಿದಂತೆ ಈ ರಾಶಿಗಳ ಜನರ ಮೇಲೆ ಶಿವನ ಅಪಾರ ಕೃಪಾವೃಷ್ಠಿ, ಒಳ್ಳೆಯ ದಿನಗಳು ಆರಂಭ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಟಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.