ನವದೆಹಲಿ: ತುಳಸಿಯನ್ನು ಹಿಂದೂ ಧರ್ಮದಲ್ಲಿ ಬಹಳ ಪೂಜ್ಯವೆಂದು ಪರಿಗಣಿಸಲಾಗಿದೆ. ಯಾವ ಮನೆಯಲ್ಲಿ ತುಳಸಿ ಗಿಡವಿದೆಯೋ ಆ ಮನೆಯಲ್ಲಿ ದೇವಾನುದೇವತೆಗಳ ಕೃಪೆ ಇರುತ್ತದೆ. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ಇರುತ್ತದೆ ಎಂದು ಹೇಳಲಾಗುತ್ತದೆ. ತುಳಸಿಯಲ್ಲಿ ಲಕ್ಷ್ಮಿದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ತುಳಸಿಯು ವಿಷ್ಣುವಿಗೆ ತುಂಬಾ ಪ್ರಿಯ. ತುಳಸಿ ನೆಲೆಸಿರುವ ಮನೆಯಲ್ಲಿ ಯಾವಾಗಲೂ ಧನಾತ್ಮಕ ಶಕ್ತಿಯ ಹರಿವು ಇರುತ್ತದೆ ಮತ್ತು ದುಷ್ಟ ಶಕ್ತಿಗಳು ಅಲೆದಾಡುವುದಿಲ್ಲ.


COMMERCIAL BREAK
SCROLL TO CONTINUE READING

ತುಳಸಿ ಗಿಡದಲ್ಲಿ ಲಕ್ಷ್ಮಿದೇವಿ ನೆಲೆಸಿದ್ದಾಳೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ತುಳಸಿ ಗಿಡ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿದೇವಿ ಖಾಯಂ ನೆಲೆಸಿರುತ್ತಾಳೆ. ತುಳಸಿ ಗಿಡವು ಮನೆಯಲ್ಲಿ ಧನಾತ್ಮಕತೆಯನ್ನು ತರುತ್ತದೆ. ಎಲ್ಲಿ ಧನಾತ್ಮಕತೆ ಇರುತ್ತದೋ ಅಲ್ಲಿ ಲಕ್ಷ್ಮಿದೇವಿ ನೆಲೆಸುತ್ತಾಳೆಂದು ಹೇಳಲಾಗುತ್ತದೆ. ತುಳಸಿ ಗಿಡಕ್ಕೆ ಸಂಬಂಧಿಸಿದಂತೆ ಜ್ಯೋತಿಷ್ಯದಲ್ಲಿ ಕೆಲವು ಕ್ರಮಗಳನ್ನು ಹೇಳಲಾಗಿದೆ. ತುಳಸಿ ಎಲೆಗಳ ಕೆಲವು ಪರಿಹಾರಗಳು ವ್ಯಕ್ತಿಯ ದುರಾದೃಷ್ಟವನ್ನು ಅದೃಷ್ಟವಾಗಿ ಪರಿವರ್ತಿಸುತ್ತವೆ. ತುಳಸಿಯ ಅದ್ಭುತ ಪರಿಹಾರಗಳ ಬಗ್ಗೆ ತಿಳಿಯಿರಿ.


ಇದನ್ನೂ ಓದಿ: Lucky Sign On Palm: ಅಂಗೈಯಲ್ಲಿ ಈ ಚಿಹ್ನೆ ಇದ್ರೆ 35 ವರ್ಷದ ನಂತರ ಕೋಟಿಗಟ್ಟಲೆ ಆಸ್ತಿಯ ಮಾಲೀಕರಾಗ್ತಾರೆ!


ತುಳಸಿ ಎಲೆಗಳ ಈ ಪರಿಹಾರ ಮಾಡಿ


- ದುರಾದೃಷ್ಟವನ್ನು ಹೋಗಲಾಡಿಸಲು ಏಕಾದಶಿಯ ದಿನದಂದು ಭಗವಾನ್ ವಿಷ್ಣುವಿನ ವಿಶೇಷ ಪೂಜೆಯೊಂದಿಗೆ ತುಳಸಿಯನ್ನು ಪೂಜಿಸಿ. ತುಳಸಿ ಪೂಜೆಯಲ್ಲಿ ದೀಪವನ್ನು ಹಚ್ಚಿ ಮತ್ತು ಜೇನುತುಪ್ಪವನ್ನು ಅರ್ಪಿಸಿ. ಈಗ ಹಸಿ ಹಾಲು ಮತ್ತು ಸಿಹಿತಿಂಡಿಗಳನ್ನು ನೀಡಿ. ಪೂಜೆಯ ನಂತರ ಬಡ ವಿವಾಹಿತ ಮಹಿಳೆಗೆ ಈ ವಸ್ತುಗಳನ್ನು ದಾನ ಮಾಡಿ. ಈ ಪರಿಹಾರದಿಂದ ನಿಮ್ಮ ದುರಾದೃಷ್ಟವು ದೂರವಾಗುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಇದರೊಂದಿಗೆ ತುಳಸಿ ಗಿಡಕ್ಕೆ ಬೆಲ್ಲವನ್ನು ಅರ್ಪಿಸುವುದರಿಂದ ದುರಾದೃಷ್ಟ ದೂರವಾಗಿ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ.


- ಯಾವುದೇ ಒಬ್ಬ ವ್ಯಕ್ತಿಯು ಕೆಟ್ಟ ಸಂದರ್ಭ ಎದುರಿಸುತ್ತಿದ್ದರೆ, ಬೆಳಗ್ಗೆ ತುಳಸಿಗೆ ನೀರನ್ನು ಅರ್ಪಿಸಿ. ಸಂಜೆ ತುಳಸಿಯ ಬಳಿ ದೀಪ ಹಚ್ಚಿ, ಕೆಟ್ಟ ಕಾಲ ದೂರವಾಗುತ್ತದೆ. ವ್ಯಕ್ತಿಗೆ ಒಳ್ಳೆಯ ದಿನಗಳು ಬರುತ್ತವೆ.


- ಹಣದ ಸಮಸ್ಯೆ ಪರಿಹರಿಸಲು ಹಿತ್ತಾಳೆಯ ಪಾತ್ರೆಯಲ್ಲಿ ನೀರು ತೆಗೆದುಕೊಳ್ಳಿ, ಈಗ ಅದರಲ್ಲಿ 4 ತುಳಸಿ ಎಲೆಗಳನ್ನು ಹಾಕಿ. ಇಡೀದಿನ ಈ ನೀರನ್ನು ಹಾಗೆಯೇ ಬಿಡಿ. ಮರುದಿನ ಬೆಳಗ್ಗೆ ಈ ನೀರನ್ನು ಇಡೀ ಮನೆಗೆ ಸಿಂಪಡಿಸಿ. ಇದರಿಂದ ಹಣದ ಸಮಸ್ಯೆ ಬೇಗ ದೂರವಾಗಲಿದೆ.


ಮತ್ತೊಂದೆಡೆ ಯಾರಾದರೂ ಮದುವೆಯಾಗದಿದ್ದರೆ, ಅವರು ಪ್ರತಿದಿನ ತುಳಸಿಗೆ ನೀರನ್ನು ಅರ್ಪಿಸಬೇಕು. ಇದರೊಂದಿಗೆ ನಿಮ್ಮ ಇಚ್ಛೆಗಳನ್ನು ಹೇಳುವ ಮೂಲಕ ಮದುವೆಯ ಸಾಧ್ಯತೆಗಳು ಶೀಘ್ರದಲ್ಲೇ ಈಡೇರಲು ಪ್ರಾರಂಭಿಸುತ್ತವೆ.


ಇದನ್ನೂ ಓದಿ: Honeymoon: ಮದುವೆಯ ನಂತರ ಟ್ರಿಪ್‌ ಹೋಗೋದನ್ನ 'ಹನಿಮೂನ್' ಅಂತ ಯಾಕೆ ಕರೆಯುತ್ತಾರೆ ಗೊತ್ತಾ?


- ಯಾವುದೇ ಗುರುವಾರ ತುಳಸಿ ಎಲೆಗಳನ್ನು ಕಿತ್ತು ಭಗವಾನ್ ವಿಷ್ಣುವಿಗೆ ಅರ್ಪಿಸಿ. ಇದರ ನಂತರ ಅದನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಕಟ್ಟಿಕೊಳ್ಳಿ ಮತ್ತು ಅದನ್ನು ವಾಲ್ಟ್‍ನಲ್ಲಿರಿಸಿ. ಇದರಿಂದ ತಾಯಿ ಲಕ್ಷ್ಮಿದೇವಿಯ ಅನುಗ್ರಹ ದೊರೆಯುತ್ತದೆ ಮತ್ತು ಹಣದ ಕೊರತೆ ಇರುವುದಿಲ್ಲ.


ಮನಿ ಪ್ಲಾಂಟ್: ಮನೆಯಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಲಕ್ಷ್ಮಿದೇವಿ ಓಡಿ ಬರುತ್ತಾಳೆ, ವ್ಯಕ್ತಿಯು ಬಹಳಷ್ಟು ಪ್ರಗತಿ ಹೊಂದಲು ಪ್ರಾರಂಭಿಸುತ್ತಾನೆ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.