ಬೆಂಗಳೂರು: ಸಾಮಾನ್ಯವಾಗಿ ಪ್ರಯಾಣ ಆರಂಭಿಸುವಾಗ ಜನರು ಮುಹೂರ್ತವನ್ನು ನೋಡಿಕೊಳ್ಳುತ್ತಾರೆ. ಶುಭ ಮುಹೂರ್ತದಲ್ಲಿ ಮಾಡುವ ಕೆಲಸವು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ, ಪ್ರಯಾಣದ ಸಮಯದಲ್ಲಿ ಯಾವುದೇ ರೀತಿಯ ತೊಂದರೆಗಳೂ ಎದುರಾಗುವುದಿಲ್ಲ ಎಂಬ ನಂಬಿಕೆಯೂ ಇದೆ. ಶಾಸ್ತ್ರೀಯ ನಂಬಿಕೆಗಳ ಪ್ರಕಾರ, ಬುಧವಾರದಂದು ಮದುವೆಯಾದ ಮಗಳನ್ನು ಅತ್ತೆಯ ಮನೆಗೆ ಕಳುಹಿಸುವುದನ್ನು ನಿಷೇಧಿಸಲಾಗಿದೆ. ಮದುವೆಯಾದ ನಂತರ ಮಗಳನ್ನು ಬುಧವಾರ ಅತ್ತೆಯ ಮನೆಗೆ ಏಕೆ ಕಳುಹಿಸುವುದಿಲ್ಲ ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಅಪಘಾತದ ಅಪಾಯ:
ಬುಧವಾರ ಹೆಣ್ಣು ಮಕ್ಕಳನ್ನು ಅತ್ತೆಯ ಮನೆಗೆ (In laws home) ಕಳುಹಿಸುವುದು ಒಳ್ಳೆಯದಲ್ಲ ಎಂದು ನಂಬಲಾಗಿದೆ. ಈ ದಿನ ಹೆಣ್ಣು ಮಗಳು ಹುಟ್ಟಿದ ಮನೆಯನ್ನು ಬಿಟ್ಟು ಹೋಗುವುದರಿಂದ ಅಪಘಾತವಾಗುವ ಸಂಭವವಿದೆ ಎಂದು ನಂಬಲಾಗಿದೆ. ಇದಲ್ಲದೇ ಮಗಳು ಅತ್ತಿಗೆಯೊಂದಿಗೆ ಸಂಬಂಧ ಹದಗೆಡಬಹುದು ಎಂಬ ನಂಬಿಕೆಯೂ ಇದೆ. 


ಇದನ್ನೂ ಓದಿ- Surya Rashi Parivartan: ಸೂರ್ಯನ ರಾಶಿ ಬದಲಾವಣೆಯಿಂದ ಯಾರ ಜೀವನ ಉಜ್ವಲಿಸಲಿದೆ? ಯಾರಿಗೆ ಕಷ್ಟ?


ಬುಧ-ಚಂದ್ರನಲ್ಲಿ ದ್ವೇಷದ ಭಾವನೆ ಇದೆ :
ಮಹಿಳೆಯರಲ್ಲಿ ಚಂದ್ರ ಗ್ರಹವು (Chandra Grah) ಪ್ರಬಲವಾಗಿದೆ ಎಂಬುದು ಪೌರಾಣಿಕ ನಂಬಿಕೆ. ಬುಧವಾರ ಬುಧ ಗ್ರಹಕ್ಕೆ ಸಂಬಂಧಿಸಿದೆ. ಬುಧ ಮತ್ತು ಚಂದ್ರನ ನಡುವೆ ದ್ವೇಷದ ಭಾವನೆ ಇದೆ. ಬುಧವಾರ ಮದುವೆಯಾದ ಹುಡುಗಿಯನ್ನು ಅತ್ತೆಯ ಮನೆಗೆ ಕಳುಹಿಸದಿರುವುದಕ್ಕೆ ಇದೂ ಒಂದು ಕಾರಣ.


ಇದನ್ನೂ ಓದಿ- Lucky woman: ಈ ವಿಶೇಷತೆ ಹೊಂದಿರುವ ಮಹಿಳೆಯರು ಅತ್ಯಂತ ಅದೃಷ್ಟಶಾಲಿಗಳು..!


ಈ ಕಾರ್ಯಗಳನ್ನು ಬುಧವಾರದಂದು ಮಂಗಳಕರವೆಂದು ಪರಿಗಣಿಸಲಾಗುತ್ತದೆ:
ಶಾಸ್ತ್ರಗಳ ಪ್ರಕಾರ, ಬುಧವಾರದ ಕೆಲವು ಕೆಲಸಗಳು ಶುಭ ಫಲಿತಾಂಶಗಳನ್ನು ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನ ಖಾತೆ ತೆರೆಯುವುದು, ವಿಮೆ ಪಡೆಯುವುದು, ಹಣದ ವಹಿವಾಟು, ಸರಕುಗಳನ್ನು ಗೋದಾಮಿನಲ್ಲಿ ಇಡುವುದು ಮಂಗಳಕರವಾಗಿದೆ. 


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.