ತಿರುವನಂತಪುರಂ: ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎನ್‌ಆರ್‌ಐ ಕೋಟಾದಲ್ಲಿ ವಲಸಿಗರಿಗೆ ಮೀಸಲಾತಿ ನೀಡಲು ಕೇರಳ ಶಾಸಕಾಂಗ ಸಭೆ ಶಿಫಾರಸುಗಳನ್ನು ಸ್ವೀಕರಿಸಿದೆ. ಕಡಿಮೆ ಆದಾಯ ಹೊಂದಿರುವ ವಲಸಿಗರು ಮೀಸಲಾತಿಗೆ ಅರ್ಹರಾಗಿರುತ್ತಾರೆ. ಅರ್ಹ ವರ್ಗದವರು ವಿದೇಶದಲ್ಲಿ ಅಧ್ಯಯನ ಮಾಡಲು ಪಡೆಯುವ ಶಿಕ್ಷಣ ಸಾಲಗಳ ಬಡ್ಡಿದರದಲ್ಲಿ ಸಡಿಲಿಕೆಯನ್ನು ಮಾಡಬೇಕೆಂದು ಅಸೆಂಬ್ಲಿ ನೇಮಿಸಿದ ವಲಸಿಗರ ಕಲ್ಯಾಣ ಸಮಿತಿ ಸಲಹೆ ನೀಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: PSI recruitment scam: ಅಮೃತ್ ಪೌಲ್ ಆಸ್ತಿ ಎಷ್ಟಿದೆ? ಇಲ್ಲಿದೆ ನೋಡಿ ಡಿಟೇಲ್ಸ್


ಇವಷ್ಟೇ ಅಲ್ಲದೆ, ವಿದೇಶದಲ್ಲಿ ಸಾವನ್ನಪ್ಪಿದ ವಲಸಿಗರ ಪಾರ್ಥೀವ ಶರೀರವನ್ನು ಯಾವುದೇ ಆರೋಪಗಳನ್ನು ಹೊರಿಸದೆ ತರಲು ಕ್ರಮ ಕೈಗೊಳ್ಳುವಂತೆ ಸಮಿತಿಯು ಮನವಿ ಮಾಡಿದೆ. ರಾಯಭಾರ ಕಚೇರಿಯ ದಾಖಲೆಗಳ ಆಧಾರದ ಮೇಲೆ, ಆರೋಗ್ಯ ಸಮಸ್ಯೆಗಳಿಂದ ಅಥವಾ ಅಪಘಾತದಿಂದ ಗಾಯಗೊಂಡು ಹಿಂದಿರುಗುವ ವಲಸಿಗರಿಗೆ ಸರ್ಕಾರವು ವಿಮಾನ ಟಿಕೆಟ್ ದರದಲ್ಲಿ ರಿಯಾಯಿತಿಯನ್ನು ನೀಡಬೇಕು ಎಂದು ತಿಳಿಸಿದೆ.


ಇದನ್ನೂ ಓದಿ: Bangalore: ರೈಲು ಬರುವ ಮುನ್ನ ಹಳಿ ಮೇಲೆ ಬಿದ್ದ ಪ್ರಯಾಣಿಕ ಜಸ್ಟ್ ಮಿಸ್


ಮಾಜಿ ಸಚಿವ ಎಸಿ ಮೊಯ್ದೀನ್ ಅಧ್ಯಕ್ಷತೆಯ ಸಮಿತಿಯು ವಿದೇಶದಲ್ಲಿ ಕೋವಿಡ್ 19ಗೆ ಬಲಿಯಾದ ವಲಸಿಗರ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ವಿತರಿಸಲು ಶಿಫಾರಸು ಮಾಡಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್‌ ಮಾಡಿ.