ಈ ರಾಶಿಯವರು ಕೈಗೆ ಕಪ್ಪು ದಾರ ಕಟ್ಟಿದರೆ ಸಾಕ್ಷಾತ್‌ ಮಹಾಲಕ್ಷ್ಮೀಯೇ ಜೊತೆ ನಡೆದಂತೆ: ಕಟ್ಟಿದ ಕ್ಷಣದಿಂದಲೇ ಶುಕ್ರದೆಸೆಯತ್ತ ತಿರುಗುವುದು ಹಣೆಬರಹ

Wed, 11 Sep 2024-3:20 pm,

ಅನೇಕರು ಕೈ ಮತ್ತು ಕಾಲುಗಳುಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ಇದು ಕೆಲವರ ಪ್ರಕಾರ ಫ್ಯಾಶನ್‌ ಎಂತಲೂ, ಇನ್ನೂ ಕೆಲವರ ಪ್ರಕಾರ ಧಾರ್ಮಿಕ ದೃಷ್ಟಿಕೋನದಿಂದ ನೋಡಲ್ಪಡುತ್ತದೆ. ಆದರೆ ಇವೆಲ್ಲದರ ಹೊರತಾಗಿ ಜೋತಿಷ್ಯದ ಪ್ರಕಾರ ಕೆಲ ರಾಶಿಯವರಿಗೆ ಕಪ್ಪು ದಾರ ಶ್ರೀರಕ್ಷೆಯಂತಾಗುತ್ತದೆ. ಇದನ್ನು ಧರಿಸುವುದರಿಂದ ಅಪಾರ ಪ್ರಯೋಜನ ಸಿಗುತ್ತದೆ.

 

ವೈದಿಕ ಜ್ಯೋತಿಷ್ಯದ ಪ್ರಕಾರ, ದಾರದ ಕಪ್ಪು ಬಣ್ಣವು ಶನಿ ಗ್ರಹಕ್ಕೆ ಸಂಬಂಧಿಸಿದೆ. ಆದ್ದರಿಂದ, ಕೈಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಿದರೆ ಶನಿದೇವನ ಕೃಪಾದೃಷ್ಟಿ ಅವರ ಮೇಲಿರುತ್ತದೆ. ಜೊತೆಗೆ ಮಹಾಲಕ್ಷ್ಮೀ ಒಲಿಯುವ ಮೂಲಕ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗುತ್ತದೆ.

 

ಇದರ ಜೊತೆ ಛಾಯಾಗ್ರಹಗಳಾದ ರಾಹು ಮತ್ತು ಕೇತುಗಳು ಹೆಚ್ಚಾಗಿ ಅಶುಭ ಪರಿಣಾಮಗಳನ್ನು ನೀಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಎಡ ಪಾದಕ್ಕೆ ಕಪ್ಪು ದಾರವನ್ನು ಧರಿಸುವುದರಿಂದ ಎರಡೂ ಗ್ರಹಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ಇದರೊಂದಿಗೆ ಆರ್ಥಿಕ ಮುಗ್ಗಟ್ಟಿನಿಂದಲೂ ಮುಕ್ತಿ ಸಿಗುತ್ತದೆ.

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾಲಿಗೆ ಕಪ್ಪು ದಾರವನ್ನು ಧರಿಸುವುದರಿಂದ ಕೆಟ್ಟ ಕಣ್ಣುಗಳು ಬೀಳುವುದಿಲ್ಲ.ನಕಾರಾತ್ಮಕ ಶಕ್ತಿಯು ದೂರವಾಗತ್ತದೆ.  ಇದು ಆರೋಗ್ಯ ಮತ್ತು ಪ್ರಗತಿಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ.

 

ಶಾಸ್ತ್ರಗಳ ಪ್ರಕಾರ, ಮಂಗಳವಾರದಂದು ಎಡ ಪಾದಕ್ಕೆ ಕಪ್ಪು ದಾರವನ್ನು ಧರಿಸುವುದರಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ಇದರೊಂದಿಗೆ ಶನಿದೇವನ ವಿಶೇಷ ಅನುಗ್ರಹವನ್ನು ಪಡೆಯಬಹುದು. ಅಂದಹಾಗೆ ಮಾರುಕಟ್ಟೆಯಿಂದ ಕಪ್ಪು ದಾರವನ್ನು ತರುವ ಬದಲು, ಭೈರವನಾಥ ದೇವಾಲಯದಿಂದ ದಾರವನ್ನು ತಂದು ಕಟ್ಟಿದರೆ ಒಳಿತು.

 

ಇನ್ನು ವೃಶ್ಚಿಕ ರಾಶಿಯವರು ಕೈ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟುವುದು ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿ. ಇಷ್ಟೇ ಅಲ್ಲದೆ, ಕಪ್ಪು ದಾರ ಕಟ್ಟಿದರೆ ವ್ಯಕ್ತಿಯ ಆರ್ಥಿಕ ಜೀವನವು ಸಂತೋಷವಾಗುತ್ತದೆ. ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂದು ಹೇಳಲಾಗುತ್ತದೆ.

 

 ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link