ಚಿನ್ನಾರಿ ಮುತ್ತನ ಮುತ್ತಿನಂತಾ ಮಡದಿ `ಸ್ಪಂದನಾ`

Mon, 07 Aug 2023-12:57 pm,

ಚಂದನವನದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿದ್ದಾರೆ. 2007 ಆಗಸ್ಟ್‌ 26ರಂದು ವಿಜಯ್ ಕೈ ಹಿಡಿದಿದ್ದ ಸ್ಪಂದನಾ ತಮ್ಮ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಇನ್ನೂ ಕೇವಲ 19ದಿನಗಳು ಬಾಕಿ ಇರುವಾಗಲೇ ಅವರನ್ನಗಲಿದ್ದಾರೆ.  Photo Credit: Instagram@raagu.vijay

ಮೊದಲಿಗೆ 2004ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಾಫಿ ಡೇನಲ್ಲಿ ಬಿ.ಕೆ. ಶಿವರಾಮ್ ಪುತ್ರಿ ಸ್ಪಂದನಾ ಅವರನ್ನು ಭೇಟಿಯಾಗಿದ್ದ ವಿಜಯ್ ರಾಘವೇಂದ್ರ ಮೊದಲ ಭೇಟಿಯಲ್ಲೇ ಫಿದಾ ಆಗಿದ್ರಂತೆ.  Photo Credit: Instagram@raagu.vijay

ಮೂರು ವರ್ಷಗಳ ಬಳಿಕ ಮತ್ತೆ ಅದೇ ಕಾಫಿ ಡೇನಲ್ಲಿ ಸ್ಪಂದನಾ ಅವರನ್ನು ಭೇಟಿಯಾದಾಗ ಈ ಚಾನ್ಸ್ ಮಿಸ್ ಮಾಡಬಾರದೆಂದು ಧೈರ್ಯವಾಗಿ ಹೋಗಿ ಮಾತನಾಡಿಸಿದ್ದರಂತೆ ಚಿನ್ನಾರಿ ಮುತ್ತ. ಅಂದಿನಿಂದ ಒಳ್ಳೆಯ ಸ್ನೇಹಿತರಾಗಿದ್ದ ಇಬ್ಬರ ನಡುವೆ ಬಳಿಕ ಪ್ರೇಮಾಂಕುರವಾಗಿತ್ತು. ತಮ್ಮ ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿ ಮನೆಯವರನ್ನೂ ಒಪ್ಪಿಸಿದ್ದರು.  

Photo Credit: Instagram@raagu.vijay

ಈ ಜೋಡಿ 2007ರ ಏಪ್ರಿಲ್ 20ರಂದು ನಿಶ್ಚಿತಾರ್ಥವಾಗಿತ್ತು.  ಅದೇ ವರ್ಷ 2007 ಆಗಸ್ಟ್‌ 26ರಂದು ವಿಜಯ್ ರಾಘವೇಂದ್ರ- ಸ್ಪಂದನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  Photo Credit: Instagram@raagu.vijay

ಕಳೆದ ವರ್ಷ ತಮ್ಮ ನಿಶ್ಚಿತಾರ್ಥದ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಮ್ಮ ENGAGEMENT ಆದ ದಿನ… ಇಂದಿಗೆ ಹದಿನೈದು ವರ್ಷಗಳು ಎಂದು ಬರೆದು "ಬೇರೆ ಎಉ ಬೇಕು ನೀನು ಇರುವಾಗ" ಎಂದು  ವಿಜಯ್ ರಾಘವೇಂದ್ರ  ಈ ಫೋಟೋ ಶೇರ್ ಮಾಡಿದ್ದರು.  Photo Credit: Instagram@raagu.vijay

ಈ ಜೋಡಿಗೆ ಶೌರ್ಯ ಎಂಬ ಮುದ್ದಾದ ಮಗನೂ ಇದ್ದಾನೆ. 

Photo Credit: Instagram@raagu.vijay

ಚಿನ್ನಾರಿ ಮುತ್ತನ ಮುತ್ತಿನಂತಾ ಮಡದಿ "ಸ್ಪಂದನಾ" 

Photo Credit: Instagram@raagu.vijay

ತಮ್ಮ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಇನ್ನೂ ಕೇವಲ 19ದಿನಗಳು ಬಾಕಿ ಇರುವಾಗಲೇ ಚಿನ್ನಾರಿ ಮುತ್ತನ ಮುತ್ತಿನಂತಾ ಮಡದಿ "ಸ್ಪಂದನಾ"  ಅವರನ್ನು ಅಗಲಿದ್ದಾರೆ. 

Photo Credit: Instagram@raagu.vijay

ನನ್ನ ಬದುಕಿಗೆ ನಿನ್ನ ನಗೆಯೇ ಭೂಷಣ… ಚಿನ್ನ… ನೀನನ್ನ ನಗುವಿಗೆ ಕಾರಣ 😍❤️😇 HAPPY WEDDING ANNIVERSARY… I LOVE YOU CHINNA!  ಎಂದು ವಿಜಯ್ ರಾಘವೇಂದ್ರ ಆಗಸ್ಟ್  26, 2021ರಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಈ ಫೋಟೋ ಹಂಚಿಕೊಂಡಿದ್ದರು. 

Photo Credit: Instagram@raagu.vijay

ಹಲವು ಸಂದರ್ಶನಗಳಲ್ಲಿ ತಮ್ಮ ಪತ್ನಿ ಸ್ಪಂದನಾ ಬಗ್ಗೆ ಹೇಳಿಕೊಂಡಿದ್ದ ವಿಜಯ್ ಅವರು ತುಂಬಾ ಸೌಮ್ಯ ಸ್ವಭಾವದವರು ಎಂದಿದ್ದರು.   

Photo Credit: Instagram@raagu.vijay

ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ವಿಜಯ ರಾಘವೇಂದ್ರ ಆ ಸಂದರ್ಭದಲ್ಲಿ  ತಮ್ಮ ಪತ್ನಿ ಸ್ಪಂದನಾ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದರು ಎಂಬ ಬಗ್ಗೆ ಇಡೀ ಕರುನಾಡಿಗೆ ತಿಳಿದಿತ್ತು.  

Photo Credit: Instagram@raagu.vijay

ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ ಜೀವನ... ಸಾಗದು..! ಎನ್ನುತ್ತಿದ್ದ ಜೋಡಿಯ ಜೀವನದಲ್ಲಿ ವಿಧಿ ಬೇರೆಯದ್ದೇ ಆಟವಾಡಿದೆ. ಮುದ್ದಿನ ಮಡದಿ ಸ್ಪಂದನಾ ಅವರ ಆಗಳಿಕೆಯನ್ನು ಭರಿಸುವ ಶಕ್ತಿಯನ್ನು ಆ ದೇವರು ವಿಜಯ್ ರಾಘವೇಂದ್ರ ಮತ್ತು ಅವರ ಕುಟುಂಬಕ್ಕೆ ನೀಡಲಿ. 

Photo Credit: Instagram@raagu.vijay

ZEENEWS TRENDING STORIES

By continuing to use the site, you agree to the use of cookies. You can find out more by Tapping this link