Aditya Mangal Rajyog 2024: ಶೀಘ್ರದಲ್ಲಿಯೇ ಸೂರ್ಯ-ಮಂಗಳರ ಮೈತ್ರಿಯಿಂದ ಈ ರಾಶಿಗಳ ಜನರ ಜೀವನದಲ್ಲಿ ಹಣವೋ ಹಣ ಹರಿದುಬರಲಿದೆ!

Sat, 06 Jan 2024-3:28 pm,

Aditya Mangal Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರುವರಿ ತಿಂಗಳ ಆರಂಭದಲ್ಲಿ ಮಕರ ರಾಶಿಯಲ್ಲಿ ಸೂರ್ಯ ಹಾಗೂ ಮಂಗಳರ ಮೈತ್ರಿಯಿಂದ ಆದಿತ್ಯ ಮಂಗಳ ರಾಜಯೋಗ ರಚನೆಯಾಗುತ್ತಿದೆ. ಈ ರಾಜಯೋಗ ಕೆಲ ರಾಶಿಗಳ ಜನರ ಪಾಲಿಗೆ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. (Spiritual News In Kannada)

ಮೇಷ ರಾಶಿ: ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದ್ದು, ನಿಮಗೆ ವಿಶೇಷ ಲಾಭಗಳನ್ನು ತಂದುಕೊಡಲಿದೆ. ಈ ಮೈತ್ರಿ ನಿಮ್ಮ ಪಾಲಿಗೆ ವರದಾನ ಎಂದರೆ ತಪ್ಪಾಗಲಾರದು, ಇದು ನಿಮಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸಿನ ಜೊತೆಗೆ ಅಪಾರ ಧನ ಸಂಪತ್ತು ಕರುಣಿಸಲಿದೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ. ಮಕರ ರಾಶಿಯಲ್ಲಿ ಸೂರ್ಯ-ಮಂಗಳರ ಈ ಮೈತ್ರಿ ಮೇಷ ರಾಶಿಯವರನ್ನು ಯಶಸ್ಸಿನ ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ನೌಕರ ವರ್ಗದ ಜನರಿಗೆ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗಲಿದೆ. ಸರ್ಕಾರಿ ನೌಕರಿಯಲ್ಲಿರುವವರಿಗೂ ಕೂಡ ಲಾಭ ಉಂಟಾಗಲಿದೆ. ವಿದೇಶ ಯಾತ್ರೆಗೆ ಅವಕಾಶ ಒದಗಿ ಬರಲಿದೆ ಬಿಸ್ನೆಸ್ ಕುರಿತು ಹೇಳುವುದಾದರೆ, ನಿಮ್ಮ ಹೂಡಿಕೆಯ ಹಲವು ಪಟ್ಟು ಲಾಭ ನೀವು ಗಳಿಸುವಿರಿ. 

ಸಿಂಹ ರಾಶಿ: ಸೂರ್ಯ ನಿಮ್ಮ ಗೋಚರ ಜಾತಕದ ಪ್ರಥಮ ಹಾಗೂ ಚತುರ್ಥ ಭಾವದ ಅಧಿಯತಿಯಾಗಿದ್ದಾನೆ. ಮಕರ ರಾಶಿಯಲ್ಲಿ ಮಂಗಳನ ಪ್ರವೇಶದಿಂದ ನಿಮ್ಮ ಜಾತಕದ ಪಂಚಮ ಭಾವದಲ್ಲಿ ಸೂರ್ಯ ಮಂಗಳರ ಮೈತ್ರಿ ನೆರವೇರುತ್ತಿದೆ. ಇದರಿಂದ ನೀವು ಸ್ವಲ್ಪ ಪರಿಶ್ರಮ ಪಟ್ಟರೂ ಸಾಕು ನಿಮಗೆ ಸಂಪೂರ್ಣ ಯಶಸ್ಸು ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಜನರಿಗೆ ಯಶಸ್ಸು ಸಿಗುವ ಪ್ರಬಲ ಯೋಗವಿದೆ.  ನೌಕರ ವರ್ಗದ ಕುರಿತು ಹೇಳುವುದಾದರೆ, ನಿಮ್ಮ ಪ್ರಯತ್ನ ನಿಮಗೆ ಪದೋನ್ನತಿ ಭಾಗ್ಯ ನೀಡಲಿದ್ದು. ಪ್ರೋತ್ಸಾಹನ ಕೂಡ ಸಿಗಲಿದೆ. ಹಿರಿಯರ ಮಧ್ಯೆ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ ಬಿಸ್ನೆಸ್ನಲ್ಲಿಯೂ ಕೂಡ ಯಶಸ್ಸು ನಿಮ್ಮದಾಗಲಿದೆ. 

ಸಿಂಹ ರಾಶಿ: ಸೂರ್ಯ ನಿಮ್ಮ ಗೋಚರ ಜಾತಕದ ಪ್ರಥಮ ಹಾಗೂ ಚತುರ್ಥ ಭಾವದ ಅಧಿಯತಿಯಾಗಿದ್ದಾನೆ. ಮಕರ ರಾಶಿಯಲ್ಲಿ ಮಂಗಳನ ಪ್ರವೇಶದಿಂದ ನಿಮ್ಮ ಜಾತಕದ ಪಂಚಮ ಭಾವದಲ್ಲಿ ಸೂರ್ಯ ಮಂಗಳರ ಮೈತ್ರಿ ನೆರವೇರುತ್ತಿದೆ. ಇದರಿಂದ ನೀವು ಸ್ವಲ್ಪ ಪರಿಶ್ರಮ ಪಟ್ಟರೂ ಸಾಕು ನಿಮಗೆ ಸಂಪೂರ್ಣ ಯಶಸ್ಸು ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಜನರಿಗೆ ಯಶಸ್ಸು ಸಿಗುವ ಪ್ರಬಲ ಯೋಗವಿದೆ.  ನೌಕರ ವರ್ಗದ ಕುರಿತು ಹೇಳುವುದಾದರೆ, ನಿಮ್ಮ ಪ್ರಯತ್ನ ನಿಮಗೆ ಪದೋನ್ನತಿ ಭಾಗ್ಯ ನೀಡಲಿದ್ದು. ಪ್ರೋತ್ಸಾಹನ ಕೂಡ ಸಿಗಲಿದೆ. ಹಿರಿಯರ ಮಧ್ಯೆ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ ಬಿಸ್ನೆಸ್ನಲ್ಲಿಯೂ ಕೂಡ ಯಶಸ್ಸು ನಿಮ್ಮದಾಗಲಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link