ಹತ್ತು ದಶಕಗಳ ಬಳಿಕ ಬೃಹಸ್ಪತಿಯ ರಾಶಿಯಲ್ಲಿ 4 ಮಹಾಯೋಗಗಳ ನಿರ್ಮಾಣ, ಈ ರಾಶಿಗಳ ಜನರಿಗೆ ಬಂಪರ್ ಧನಲಾಭ!

Thu, 23 Mar 2023-8:38 pm,

ಮಿಥುನ ರಾಶಿ- ನಿಮ್ಮ ಜಾತಕದ ಕರ್ಮ ಭಾವದಲ್ಲಿ ಗಜಕೇಸರಿ, ನೀಚ್ ಭಂಗ್, ಬುಧಾದಿತ್ಯ ಮತ್ತು ಹಂಸ ರಾಜಯೋಗಗಳು ರೂಪುಗೊಳ್ಳುತ್ತಿವೆ. ಹೀಗಾಗಿ ನೀವು ಕೆಲಸ-ವ್ಯವಹಾರದಲ್ಲಿ ಅಪಾರ ಯಶಸ್ಸನ್ನು ಪಡೆಯಬಹುದು. ಅಲ್ಲದೆ, ನಿರುದ್ಯೋಗಿಗಳು ಈ ಅವಧಿಯಲ್ಲಿ  ಹೊಸ ಉದ್ಯೋಗಾವಕಾಶ ಪಡೆಯಲಿದ್ದಾರೆ. ಅಲ್ಲದೆ, ಸೇವೆಯಲ್ಲಿರುವವರಿಗೆ ಮಾರ್ಚ್ ನಂತರ ಬಡ್ತಿ ಸಿಗಬಹುದು. ಬಯಸಿದ ಸ್ಥಳಕ್ಕೆ ವರ್ಗಾವಣೆ ಭಾಗ್ಯ ಸಿಗಬಹುದು. ಇದರೊಂದಿಗೆ, ವೃತ್ತಿ ವ್ಯವಹಾರದಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ ಇರಲಿದೆ. ಇದರೊಂದಿಗೆ ಲಾಭ, ನಿರ್ವಹಣೆ ಮತ್ತು ಆಡಳಿತದ ವಿಷಯಗಳು ನಿಮ್ಮ ಪರವಾಗಿರಲಿವೆ. ತಂದೆಯೊಂದಿಗಿನ ಬಾಂಧವ್ಯ ಉತ್ತಮವಾಗಿರುತ್ತದೆ. ಅಲ್ಲದೆ, ಈ ಸಮಯದಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು. ನೀವು ನಿಮ್ಮ ವ್ಯಾಪಾರವನ್ನು ವಿಸ್ತರಿಸಬಹುದು.  

ಕನ್ಯಾ ರಾಶಿ- ನಾಲ್ಕು ಮಹಾ ಯೋಗಗಳ ರಚನೆಯಿಂದ, ಕನ್ಯಾ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಂಡಿವೆ. ಏಕೆಂದರೆ ಈ 4 ರಾಜಯೋಗಗಳು ನಿಮ್ಮ ರಾಶಿಯಿಂದ ಸಪ್ತಮ ಭಾವದಲ್ಲಿ  ರಚನೆಯಾಗುತ್ತಿವೆ. ನಿಮ್ಮ ಲಾಭದ ಅಧಿಪತಿ ಏಳನೇ ಮನೆಯಲ್ಲಿ ವಿರಾಜಮಾನನಾಗಿದ್ದಾನೆ.  ಇದರೊಂದಿಗೆ, ಸಂತೋಷ-ಸಾಧನ ಮತ್ತು ಆಸ್ತಿಯ ಅಧಿಪತಿ ಕೂಡ ಏಳನೇ ಭಾವದಲ್ಲಿ ಕುಳಿತಿದ್ದಾನೆ. ಹೀಗಾಗಿ  ನೀವು ಈ ಸಮಯದಲ್ಲಿ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಬಹುದು. ಪಾಲುದಾರಿಕೆ ಕೆಲಸದಲ್ಲಿ ಯಶಸ್ಸು ಕಾಣಬಹುದು. ಇದೇ ವೇಳೆ, ನಿಮ್ಮ ಬಾಳಸಂಗಾತಿಯ ಬೆಂಬಲವನ್ನು ನೀವು ಪಡೆಯುವಿರಿ. ಅಲ್ಲದೆ, ಬಾಳಸಂಗಾತಿಯ ಪ್ರಗತಿಯನ್ನು ಕೂಡ ನೀವು ಕಾಣಬಹುದು. ಪ್ರೇಮ  ಜೀವನವೂ ಚೆನ್ನಾಗಿರುತ್ತದೆ. ಅಲ್ಲದೆ, ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಬಹುದು.  

ಧನು ರಾಶಿ- ಗಜಕೇಸರಿ, ನೀಚಭಂಗ, ಬುಧಾದಿತ್ಯ ಮತ್ತು ಹಂಸ ರಾಜಯೋಗದ ರಚನೆಯು ನಿಮಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಈ ಯೋಗವು ನಿಮ್ಮ ರಾಶಿಯ ಚತುರ್ಥ ಭಾವದಲ್ಲಿ ರೂಪಗೊಳ್ಳುತ್ತಿದೆ.  ಇದು ಸಂತೋಷ ಮತ್ತು ಸಂಪತ್ತಿನ ಸ್ಥಾನವೆಂದು ಪರಿಗಣಿಸಲಾಗಿದೆ. ಹೀಗಾಗ ನೀವು ಈ ಸಮಯದಲ್ಲಿ ಯಾವುದೇ ಭೂಮಿ-ಆಸ್ತಿಯನ್ನು ಖರೀದಿಸಬಹುದು. ಇದರೊಂದಿಗೆ ಪಿತ್ರಾರ್ಜಿತ ಆಸ್ತಿಯಿಂದಲೂ ನೆಮ್ಮದಿ ಸಿಗಬಹುದು. ಇದೇ ವೇಳೆ, ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಇದರೊಂದಿಗೆ ಅದೃಷ್ಟ ಕೂಡ ನಿಮ್ಮೊಂದಿಗೆ ಇರಲಿದೆ. ಈ ಸಮಯದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಜನರು ಉತ್ತಮ ಯಶಸ್ಸನ್ನು ಪಡೆಯಬಹುದು.  

ವೃಷಭ ರಾಶಿ- 4 ಮಹಾ ರಾಜಯೋಗಗಳು ನಿಮ್ಮ ಪಾಲಿಗೆ ಮಂಗಳಕರ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯ ಲಾಭದ ಸ್ಥಳದಲ್ಲಿ ಈ 4 ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದೇ ವೇಳೆ, ನಿಮ್ಮ ಸಂಪತ್ತಿನ ಅಧಿಪತಿ ಲಾಭದಾಯಕ ಸ್ಥಳದಲ್ಲಿ ಸ್ಥಿತನಿದ್ದಾರೆ, ನಿಮ್ಮ ಪ್ರಗತಿ, ಬುದ್ಧಿವಂತಿಕೆ, ಆಕಸ್ಮಿಕ ಧನಲಾಭದ ಅಧಿಪತಿ ಲಾಭದಾಯಕ ಸ್ಥಳದಲ್ಲಿ ಸ್ಥಿತನಾಗಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವವು ಸುಧಾರಿಸುತ್ತದೆ. ಈ ಅವಧಿಯಲ್ಲಿ ಆದಾಯ ಹೆಚ್ಚಾಗುತ್ತದೆ. ಇದರೊಂದಿಗೆ, ಹೊಸ ಆದಾಯದ ಮೂಲಗಳು ನಿರ್ಮಾಣಗೊಳ್ಳಲಿವೆ. ಇನ್ನೊಂದೆಡೆ ನೀವು ಹಳೆಯ ಹೂಡಿಕೆಗಳಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ಮಗುವಿನ ಕಡೆಯಿಂದ ಯಾವುದೇ ಒಳ್ಳೆಯ ಸಮಾಚಾರ ಪಡೆಯಬಹುದು. ಇದರೊಂದಿಗೆ ಹಠಾತ್ ಧನಲಾಭದ ಸಾಧ್ಯತೆಗಳೂ ಸೃಷ್ಟಿಯಾಗುತ್ತಿವೆ. ಈ ಅವಧಿಯು ವಿದ್ಯಾರ್ಥಿಗಳಿಗೆ ಮಂಗಳಕರವೆಂದು ಸಾಬೀತಾಗಲಿದೆ.  

ಕುಂಭ ರಾಶಿ- ನಾಲ್ಕು ರಾಜಯೋಗಗಳ ರಚನೆಯೊಂದಿಗೆ, ಕುಂಭ ರಾಶಿಯವರಿಗೆ ಒಳ್ಳೆಯ ದಿನಗಳು ಅಂಭಗೊಂಡಿವೆ. ಏಕೆಂದರೆ ಈ 4 ರಾಜಯೋಗಗಳು ನಿಮ್ಮ ಸಂಕ್ರಮಣ ಜಾತಕದ ಅದೃಷ್ಟದ ಭಾವದಲ್ಲಿ ರೂಪುಗೊಂಡಿವೆ. ಹೀಗಾಗಿ ಈ ಸಮಯದಲ್ಲಿ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ಇದರೊಂದಿಗೆ ಆಗದೇ ಇದ್ದ ಕಾಮಗಾರಿಗಳು ಆರಂಭವಾಗಲಿವೆ. ಈ ಅವಧಿಯಲ್ಲಿ, ಉಳಿತಾಯ ಬ್ಯಾಂಕಿಂಗ್ ಕೆಲಸಗಳು ಪೂರ್ಣಗೊಳ್ಳಲಿವೆ. ಕಾರ್ಯಕ್ಷೇತ್ರದಲ್ಲಿ ಅಪೇಕ್ಷಿತ ಪ್ರಸ್ತಾವನೆಗಳು ಬರಲಿವೆ. ಇದರೊಂದಿಗೆ, ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಈ ಅವಧಿಯಲ್ಲಿ, ನೀವು ವಿದೇಶಕ್ಕೆ ಪ್ರಯಾಣಿಸಬಹುದು, ಅದು ನಿಮಗೆ ಮಂಗಳಕರವಾಗಿರುತ್ತದೆ. ಅಲ್ಲದೆ, ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯವು ಮಂಗಳಕರವಾಗಿರುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link