ಈ ನಟನೊಂದಿಗೆ ಮಂಗಳೂರಿನ ಈ ಜಾಗದಲ್ಲಿ ಸಮಯ ಕಳೆಯುವುದು ಇಷ್ಟ ! ಗೆಳೆಯನ ಒಡನಾಟದ ಬಗ್ಗೆ ತುಟಿ ಬಿಚ್ಚಿದ ಅನುಶ್ರೀ

Mon, 21 Oct 2024-10:53 am,

ಯಾವ ಗಾಡ್ ಫಾದರ್ ಕೂಡಾ ಇಲ್ಲದೆ ಟಿವಿ ಜಗತ್ತನ್ನು ಪ್ರವೇಶಿಸಿ ಇಂದು ತನಗೆ ಸರಿಸಾಟಿ ಯಾರೂ ಇಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತ  ಪ್ರತಿಭೆ ಅನುಶ್ರೀ.      

ಸೊನ್ನೆಯಿಂದ ಮಾಯಾನಗರಿಗೆ ಬಂದ ಅನುಶ್ರೀ ಬಳಿ ಇಂದು ಹೆಸರು, ಕೀರ್ತಿ,  ಹಣ, ಯಶಸ್ಸು, ಎಲ್ಲವೂ ಇದೆ.ಎಲ್ಲವೂ ಅವರ ಪರಿಶ್ರಮದ ಫಲ. 

ಸದಾ ಕಾಲ ತನ್ನ ತಾಯಿ ಬಗ್ಗೆ ಮಾತನಾಡುವ ಅನುಶ್ರೀ ತನ್ನ ಗೆಳೆಯರ ಬಗ್ಗೆ ಮಾತು ಬಿಚ್ಚುವುದು ಬಹಳ ವಿರಳ. ಮದುವೆ ಬಗ್ಗೆ ಯಾರಾದರೂ ಮಾತನಾಡಿದರೂ ನಕ್ಕು ಸುಮ್ಮನಾಗುವ ಸುಂದರಿ

ಇವೆಲ್ಲದರ ನಡುವೆ ರಾಜ್ ಬಿ ಶೆಟ್ಟಿ ತನ್ನ ಬದುಕಿನ ಯೋಚನೆಯನ್ನೇ ಬದಲಿಸಿದ ವ್ಯಕ್ತಿ ಎನ್ನುತ್ತಾರೆ ಅನುಶ್ರೀ. ರಾಜ್ ಬಿ ಶೆಟ್ಟಿ ತನ್ನ ಆಧ್ಯಾತ್ಮ ಗುರು  ಎಂದು ಹೇಳುತ್ತಾರೆ.

ಮಂಗಳೂರಿಗೆ ಬಂದಾಗ ರಾಜ್ ಬಿ ಶೆಟ್ಟಿಯೊಂದಿಗೆ ಮೀನೂಟದ ಹೋಟೆಲ್ ಗೆ ಹೋಗುವುದು, ಅಲ್ಲಿಯ ಖಾದ್ಯಗಳನ್ನು ಟ್ರೈ ಮಾಡುವುದು ಅನುಶ್ರೀಗೆ ತುಂಬಾ ಇಷ್ಟವಂತೆ. 

ತಾನೊಬ್ಬ ಸೆಲೆಬ್ರಿಟಿ. ಹಾಗಾಗಿ ದೊಡ್ಡ ಹೊಟೇಲ್ ಗೇ ಹೋಗಬೇಕು ಎಂದೇನಿಲ್ಲ ಈ ಚೆಲುವೆಗೆ. ರಸ್ತೆ ಬದಿಯ ಸಣ್ಣ ಪುಟ್ಟ  ಹೋಟೆಲ್ ಗಳಲ್ಲಿಯೂ ರುಚಿಕರ ಊಟ ಸಿಕ್ಕಿದರೆ ಅದಕ್ಕೂ ಸೈ. 

ನನಗೆ ಅಲ್ಲಿ ಸಿಗುವ ಪ್ರೀತಿ, ಆತಿಥ್ಯ ನೆಮ್ಮದಿ ಬಹಳ ಇಷ್ಟ ಎಂದು ಅನುಶ್ರೀ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಮಂಗಳೂರಿನ ಕೆಪಿಟಿ ಬಳಿಯ ಸಣ್ಣ ಹೋಟೆಲ್ ಬಗ್ಗೆಯೂ ಅನುಶ್ರೀ ಮಾತನಾಡಿದ್ದಾರೆ.ಈ ಜಾಗವನ್ನು ಕೂಡಾ ಅನುಶ್ರೀಗೆ ಪರಿಚಯಿಸಿದ್ದು ರಾಜ್ ಅಂತೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link