ಮದುವೆಯೇ ಆಗಿಲ್ಲ, ಆದ್ರೆ ತನ್ನ ʼಮಗನ ಸಾವಿನ ರಹಸ್ಯʼ ಬಿಚ್ಚಿಟ್ಟ ಬಿಗ್‌ ಬಾಸ್‌ ಸ್ಪರ್ಧಿ..! ಸುದ್ದಿ ಕೇಳಿ ಫ್ಯಾನ್ಸ್‌ ಶಾಕ್‌

Fri, 02 Aug 2024-5:35 pm,

ಬಿಗ್ ಬಾಸ್ ಶೋ ಮೂಲಕ ಜನಪ್ರಿಯತೆ ಗಳಿಸಿದವರಲ್ಲಿ ಗೀತು ರಾಯಲ್ ಕೂಡ ಒಬ್ಬರು. ಸಾಮಾಜಿಕ ಮಾಧ್ಯಮದಲ್ಲಿ ಸಂಪೂರ್ಣ ಜನಪ್ರಿಯತೆಯನ್ನು ಪಡೆದ ನಂತರ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಪ್ರವೇಶಿಸಿದರು.  

ಬಿಗ್‌ಬಾಸ್ ಸೀಸನ್ 6 ಗೆ ಸ್ಪರ್ಧಿಯಾಗಿ ಪ್ರವೇಶಿಸಿದ ಗೀತು ರಾಯಲ್ ಆರಂಭದಲ್ಲಿ ನಟನೆ ಮತ್ತು ಭಾಷಾ ಶೈಲಿಯಿಂದ ಪ್ರೇಕ್ಷರ ಗಮನಸೆಳೆದರು. ಅದೇ ಸಮಯದಲ್ಲಿ ನಾಗಾರ್ಜುನ ಕೂಡ ಅವರ ಆಟದ ಶೈಲಿಯನ್ನು ಮೆಚ್ಚಿಕೊಂಡರು.  

ಆದರೆ ಕ್ರಮೇಣ.. ಗೀತು ರಾಯಲ್ ಮಾತನ್ನು ಹಿಡಿತದಲ್ಲಿಟ್ಟುಕೊಳ್ಳದೆ ಮಾತನಾಡಿದ್ದು, ಬಿಗ್‌ಬಾಸ್‌ ಪ್ರೇಕ್ಷಕರಿಗೆ ಬೇಸರ ತರಿಸಿತ್ತು. ಹಾಗಾಗಿ 9ನೇ ವಾರಕ್ಕೆ ಗೀತು ಎಲಿಮಿನೇಟ್ ಆದರು.  

ಎಲಿಮಿನೇಷನ್ ಸಹಿಸಲಾಗದೆ, ಗೀತು ನಾಗಾರ್ಜುನ್ ಅವರನ್ನು ಕಳುಹಿಸಬೇಡಿ ಎಂದು ವಿನಂತಿಸಿದರು. ಆದರೆ ನಿಯಮಗಳನ್ನು ಮುರಿಯಲು ಸಾಧ್ಯವಾಗದ ಕಾರಣ.. ನಾಗಾರ್ಜುನ ಗೀತುವನ್ನು ಕಳುಹಿಸಿದರು.  

ಗೀತು ರಾಯಲ್ ಬಿಗ್ ಬಾಸ್ ಬಜ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ನಡುವೆ ತನ್ನ ಮಗನ ಸಾವಿಗೆ ಕಾರಣರಾದವರು ಕುರಿತು ತಿಳಿಸಿ ಕಣ್ಣೀರು ಹಾಕಿದರು.. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..   

ಗೀತು ರಾಯಲ್‌ಗೆ ಇನ್ನೂ ಮದುವೆಯಾಗಿಲ್ಲ, ಮಗು ಎಲ್ಲಿಂದ ಬರ್ಬೇಕು ಅಲ್ವಾ... ಮಗ ಅಂದ್ರೆ ಅವರ ಪೆಟ್. ಗೀಟೂ ರಾಯಲ್ ಒರಿಯೊ ಎಂಬ ಸಾಕು ನಾಯಿಯನ್ನು ಹೊಂದಿದ್ದರು. ಇದು ತಮಗೆ ಮಗನಿಗಿಂತ ಹೆಚ್ಚು ಎಂದು ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು.. ಇತ್ತೀಚೆಗೆ ಆ ಸಾಕು ನಾಯಿ ಸಾವನ್ನಪ್ಪಿತು.  

ಮಗನ ಸಾವಿಗೆ ಭದ್ರತಾ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಗೀತು ರಾಯಲ್ ಮನನೊಂದಿದ್ದರು. ಬೀದಿ ನಾಯಿಗಳು ಅವರು ತಂಗಿದ್ದ ಸ್ಥಳದ ಬಳಿ ಬಂದು ಓರಿಯೊ ಮೇಲೆ ದಾಳಿ ಮಾಡಿ ಕೊಂದಿವೆ ಎಂದು ಅವರು ಹೇಳಿಕೊಂಡರು..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link