ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸುತ್ತಿದೆ ದೇಶದ ಪ್ರಮುಖ ಕಟ್ಟಡಗಳು ಸ್ಮಾರಕಗಳು

Fri, 12 Aug 2022-3:46 pm,

ಇದು ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ವಿಧಾನ ಭವನ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ‘ಆಜಾದಿ ಕಾ ಅಮೃತ್ ಮಹೋತ್ಸವ’ ಕಾರ್ಯಕ್ರಮದಡಿ ದೀಪಾಲಂಕಾರವನ್ನು ಉದ್ಘಾಟಿಸಿದರು. (ಫೋಟೋ - ಎಎನ್‌ಐ)

ಈ ಫೋಟೋ ಜಮ್ಮು ಮುಬಾರಕ್ ಮಂಡಿಯ ಸಾಂಪ್ರದಾಯಿಕ ಸ್ಮಾರಕದ್ದಾಗಿದೆ. ಜಮ್ಮು ಜಿಲ್ಲಾಧಿಕಾರಿ ಗುರುವಾರ ಈ ಮಾಹಿತಿ ನೀಡಿದ್ದಾರೆ. 

ದೇಶದ ರಾಜಧಾನಿ ದೆಹಲಿಯಲ್ಲಿ, ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್ ಅನ್ನು ತ್ರಿವರ್ಣ ಧ್ವಜದ  ಬಣ್ಣಗಳ ದೀಪಗಳಿಂದ ಅಲಂಕರಿಸಲಾಗಿದೆ. ರಾತ್ರಿ ಹೊತ್ತಿನಲ್ಲಿ ಇದು ಜಗಮಗಿಸುವ ಬೆಳಕಿನಿಂದ ಕಂಗೊಳಿಸುತ್ತಿದೆ. (ಫೋಟೋ - ಎಎನ್‌ಐ)

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಇಂಡಿಯಾ ಗೇಟ್ ರಾತ್ರಿಯಲ್ಲಿ ತ್ರಿವರ್ಣ ಬೆಳಕಿನಿಂದ ಬೆಳಗುತ್ತಿತ್ತು. ಅದರ ಕ್ಯಾಂಪಸ್‌ನಲ್ಲಿ ಉತ್ತಮ ದೀಪಾಲಂಕಾರವನ್ನೂ ಮಾಡಲಾಗಿದೆ. (ಫೋಟೋ - ಎಎನ್‌ಐ)  

ದೇಶದ ಸಂಸತ್ ಭವನವನ್ನೂ ದೀಪಗಳಿಂದ ಅಲಂಕರಿಸಲಾಗಿದೆ. ಜಗ ಮಗಿಸುವ ಬೆಳಕಿನಲ್ಲಿ ಇದರ ಸೌಂದರ್ಯ ಇನ್ನಷ್ಟು ಹೆಚ್ಚಿದೆ.  (ಫೋಟೋ - ಎಎನ್‌ಐ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link