ಬಿಗ್‌ಬಾಸ್‌ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಗೆ ಮತ್ತೊಂದು ಸಂಕಷ್ಟ!

Tue, 25 Jun 2024-6:45 pm,

ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಬಿಗ್‌ಬಾಸ್‌ನಿಂದ ದೊಡ್ಡ ಖ್ಯಾತಿ ಗಳಿಸಿದರು.. ದೊಡ್ಮಣೆಯಲ್ಲಿದ್ದಾಗಲೇ ಇವರ ವಿರುದ್ಧ ಹುಲಿ ಉಗುರು ಪೆಂಡೆಂಟ್ ಬಳಕೆ ನಿಷೇಧ ಕೇಸ್‌ ದಾಖಲಾಗಿತ್ತು.. ಇದೀಗ ಇವರಿಗೆ ಮತ್ತೊಂದು ಸಂಕಷ್ಟ ಬಂದೊದಗಿದೆ..  

ಹೌದು ವರ್ತೂರು ಸಂತೋಷ್ ಅವರಿಂದ  ಪ್ರಾಣಿಗಳ ಸಾಗಾಣಿಕೆ ನಿಯಮ ಉಲ್ಲಂಘನೆ..? ಮಾಡಲಾಗಿದೆ ಎಂದು ವರ್ತೂರು ಠಾಣೆಯಲ್ಲಿ ಎನ್​ಸಿಆರ್​ ದಾಖಲಾಗಿದ್ದು, ​ಸದ್ಯ ಒಂದು ಸುತ್ತಿನ ವಿಚಾರಣೆ ಎದುರಿಸಿದ್ದಾರೆ ಎನ್ನಲಾಗಿದೆ.. ಏನಿದು ನಿಯಮ ಉಲ್ಲಂಘಣೆ? ಅಂತೀರಾ ಇಲ್ಲಿದೆ ಉತ್ತರ   

 ಹಳ್ಳಿಕಾರ್ ರೇಸ್ ಗೆ ವರ್ತೂರಿಂದ ಸಿದ್ಧತೆಯಾಗುತ್ತಿದೆ,, ಈ ವೇಳೆ ಹಳ್ಳಿಕಾರ್ ಹಸುಗಳ ಸಾಗಾಣಿಕೆ ವೇಳೆ ರೂಲ್ಸ್ ಬ್ರೇಕ್ ಮಾಡಲಾಗಿದೆ.. ಒಂದೇ ಟ್ರಕ್ ನಲ್ಲಿ ಬರೋಬ್ಬರಿ 9 ಹೋರಿಗಳ ಸಾಗಾಟ, ಜೊತೆಗೆ ಲಗೇಜ್ ನ್ನ ಕೂಡ ಇಟ್ಟು ಸಾಗಾಟ ಆರೋಪ ಕೇಳಿಬಂದಿದೆ..  

ಇದು ಪ್ರಾಣಿ ಹಿಂಸೆ, ಪ್ರಾಣಿಗಳ ಸಾಗಾಟ ನಿಯಮ ಬ್ರೇಕ್ ಆಗಿದೆ ಎಂದು SPCA ANIMAL WELFARE OFFICER ಹರೀಶ್ ದೂರು ನೀಡಿದ್ದಾರೆ..  

ಇನ್ನು ವರ್ತೂರು ಸಂತೋಷ್ ಈಗಾಗಲೇ ವಿಚಾರಣೆಗೆ ಹಾಜಾರಾಗಿ ಮಾಹಿತಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಎನ್​ಸಿಆರ್​ ಮಾಡಿ ಪ್ರಕರಣ ಮುಚ್ಚೋದು ಬೇಡ.. FIR ಮಾಡ್ಬೇಕೆಂದು ಕೋರ್ಟ್​​ ಮೆಟ್ಟಿಲೇರಲು ಹರೀಶ್ ಸಿದ್ದರಾಗಿದ್ದಾರೆ ಎನ್ನಲಾಗುತ್ತಿದೆ.. ಈ ಸಂಬಂಧಪಟ್ಟಂತೆ ಒಂದು ವೇಳೆ ಎಫ್ ಐ ಆರ್ ದಾಖಲಾದ್ರೆ ವರ್ತೂರು ಸಂತೋಷ್ ಗೆ ಸಂಕಷ್ಟ ಫಿಕ್ಸ್.. ಎಂದು ಹೇಳಲಾಗುತ್ತಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link