Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?

Tue, 11 Jun 2024-2:45 pm,

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಸೇರಿ ಒಟ್ಟು 10 ಮಂದಿಯನ್ನು  ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. 

ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಕೆಟ್ಟ ಕೆಟ್ಟ ಸಂದೇಶ ಕಳುಹಿಸಿದ ಕಾರಣಕ್ಕಾಗಿ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 

ರೇಣುಕಾಸ್ವಾಮಿಯವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ದರ್ಶನ್ ಸೂಚನೆ ಮೇಲೆ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಬಾಯಿಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. 

ರೇಣುಕಾ ಸ್ವಾಮಿ ಮೇಲೆ ಹಲ್ಲೆ ನಡೆಸುವಾಗ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸ್ಥಳದಲ್ಲೇ ಇದ್ದರು ಎಂದು ಹೇಳಲಾಗುತ್ತಿದೆ. 

ಈ ಕೊಲೆಗೆ ಸಂಬಂಧಿಸಿದಂತೆ ನಟ ದರ್ಶನ್‌ ಅವರನ್ನು ಪೊಲೀಸರು ಬಂಧಿಸಿದ್ದು, ಡಿಸಿಪಿ ಗಿರೀಶ್ ಈಗಾಗಲೇ ಒಂದು ಸುತ್ತು  ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ. 

ಪೊಲೀಸರ ಬಳಿ ಈ ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದ ನಟ ದರ್ಶನ್‌ ಡಿಸಿಪಿ ವಿಚಾರಣೆ ಬಳಿಕ‌ ಆತಂಕದಲ್ಲಿ ಕುಳಿತಿದ್ದಾರೆ ಎಂದು ತಿಳಿದುಬಂದಿದೆ. 

ಆರೋಪಿಗಳ ಜೊತೆ ದರ್ಶನ್ ಸಂಪರ್ಕದಲ್ಲಿರುವ ಬಗ್ಗೆ ಬಹುದೊಡ್ಡ ಸಾಕ್ಷ್ಯವನ್ನು ತೋರಿಸಲಾಗಿದೆ ಎನ್ನಲಾಗಿದೆ. ಸಿಡಿಆರ್ ದಾಖಲೆ ಮುಂದಿಟ್ಟು ಡಿಸಿಪಿ ತನಿಖೆ ಮಾಡಿದ ಬಳಿಕ ದರ್ಶನ್‌ ಆತಂಕಗೊಂಡಿದ್ದಾರಂತೆ ಎನ್ನಲಾಗಿದೆ.

ಬಂಧಿತ ಆರೋಪಿಗಳ ಹೇಳಿಕೆ ಕೂಡ ದರ್ಶನ್ ಮುಂದಿಟ್ಟಿದ್ದು, ಪೊಲೀಸರ ಮುಂದೆ ಏನೂ ಮಾತನಾಡದೇ ದರ್ಶನ್‌ ಸೈಲೆಂಟ್ ಆಗಿದ್ದಾರೆ ಎಂದು ವರದಿ ಆಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link