KCC-2023 ಪಂದ್ಯಾವಳಿಗೆ ಸಿಎಂ ಚಾಲನೆ-ಕನ್ನಡಾಂಬೆಗೆ ತಲೆಬಾಗಿದ ಗಣ್ಯರು: ಅಮೋಘ ಕ್ಷಣಗಳ ಫೋಟೋ ಇಲ್ಲಿವೆ

Fri, 24 Feb 2023-8:04 pm,

ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್‌ 2023ರ ಮೂರನೇ ಆವೃತ್ತಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.

ಕನ್ನಡ ಚಲನಚಿತ್ರ ಕಪ್‌ ಎಂಬುದು ಸ್ಯಾಂಡಲ್‌ವುಡ್‌’ನ ತಾರೆಯರು, ತಂತ್ರಜ್ಞರು, ಚಲನಚಿತ್ರ ನಿರ್ಮಾಪಕರು ಮುಂತಾದವರನ್ನು ಒಳಗೊಂಡ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಎರಡು ದಿನಗಳ ಈವೆಂಟ್ ನಲ್ಲಿ ಸಿನಿಮಾ ಕ್ಷೇತ್ರದ ಆರು ತಂಡಗಳು ಭಾಗವಹಿಸಲಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ 2023 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾದ ಡಾ. ಸುಧಾಕರ್ ಹಾಗೂ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟರು ಹಾಜರಿದ್ದರು.

ಪಂದ್ಯಾವಳಿಯ ಪೂರ್ವಭಾವಿಯಾಗಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಟ ಕಿಚ್ಚ ಸುದೀಪ್, “ಪಂದ್ಯಾವಳಿಯ ಆಯೋಜನೆ ಕಾರ್ಯದಲ್ಲಿದ್ದು, ಆಡುತ್ತಿರುವ ವಿವಿಧ ನಟರ ಅಭಿಮಾನಿಗಳು ಆಟವನ್ನು ಶಾಂತಿಯುತವಾಗಿ ಆನಂದಿಸಿ ಮತ್ತು ಯಾವುದೇ ಗಲಾಟೆ ಸೃಷ್ಟಿಸಬೇಡಿ” ಎಂದು ವಿನಂತಿಸಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link