ಆಗಸ್ಟ್ 31 ರೊಳಗೆ ಈ ಕೆಲಸವನ್ನು ಪೂರೈಸಿಕೊಳ್ಳಿ ..! ಇಲ್ಲವಾದರೆ ಜೇಬಿಗೆ ನಷ್ಟ ಗ್ಯಾರಂಟಿ

Mon, 29 Aug 2022-3:22 pm,

ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಯಾಗಿದ್ದರೆ, ಆಗಸ್ಟ್ 31 ರೊಳಗೆ ಇಕೆವೈಸಿ ಕೆಲಸವನ್ನು ಪೂರ್ಣಗೊಳಿಸಬೇಕು. eKYC ಅನ್ನು ಪೂರ್ಣಗೊಳಿಸಲು ಸರ್ಕಾರವು ಕೊನೆಯ ಅವಕಾಶವನ್ನು ನೀಡುತ್ತಿದೆ. eKYC ಮಾಡದಿದ್ದರೆ ನಿಮ್ಮ ಮುಂದಿನ ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತನ್ನು ತಡೆಹಿಡಿಯಲಾಗುತ್ತದೆ.

ಈ ಹಿಂದೆ, ಸರ್ಕಾರದಿಂದ eKYC ಮಾಡಿಸಲು  ಕೊನೆಯ ದಿನಾಂಕ ಜುಲೈ 31 ಆಗಿತ್ತು. ನಂತರ ಇದನ್ನೂ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿತ್ತು. ಸೆಪ್ಟೆಂಬರ್ ಮೊದಲ ವಾರದಲ್ಲಿ ಪಿಎಂ ಕಿಸಾನ್ ನ 12ನೇ ಕಂತು ರೈತರ ಖಾತೆಗೆ ವರ್ಗಾವಣೆಯಾಗುವ ನಿರೀಕ್ಷೆ ಇದೆ. ಈ ಯೋಜನೆಯಡಿ ನೋಂದಾಯಿತ ರೈತರಿಗೆ ವಾರ್ಷಿಕ 6 ಸಾವಿರ ರೂ.ಯನ್ನು ವರ್ಗಾವಣೆ ಮಾಡಲಾಗುವುದು. 

PNBಯಲ್ಲಿ ನಿಮ್ಮ ಖಾತೆ ಇದ್ದರೆ, ಆಗಸ್ಟ್ 31 ರೊಳಗೆ KYCಯನ್ನು   ಪೂರ್ಣಗೊಳಿಸಿ. ಕೆವೈಸಿಯನ್ನು ಗಡುವಿನೊಳಗೆ ಪೂರ್ಣಗೊಳಿಸದಿದ್ದರೆ, ಖಾತೆಯನ್ನು ತಡೆಹಿಡಿಯಬಹುದು ಎಂದು ಬ್ಯಾಂಕ್ ಸ್ಪಷ್ಟವಾಗಿ ಹೇಳಿದೆ. PNB ಟ್ವೀಟ್‌ ಮೂಲಕ ಗ್ರಾಹಕರಿಗೆ ಈ ಮಾಹಿತಿ ನೀಡಿದೆ. 

ತೆರಿಗೆದಾರರು ಜುಲೈ 31 ರ ನಂತರ ITR ಅನ್ನು ಸಲ್ಲಿಸುತ್ತಿದ್ದರೆ, ಪರಿಶೀಲನೆಗಾಗಿ ಅವರು 30 ದಿನಗಳಅವಕಾಶ ಪಡೆಯುತ್ತಾರೆ. ಜುಲೈ 31 ರೊಳಗೆ ರಿಟರ್ನ್ಸ್ ಸಲ್ಲಿಸುವವರಿಗೆ ಪರಿಶೀಲನೆಗಾಗಿ 120 ದಿನಗಳು ಸಿಗುತ್ತವೆ. ತೆರಿಗೆದಾರರು ಆಗಸ್ಟ್ 1 ರಂದು ತಮ್ಮ ರಿಟರ್ನ್ ಅನ್ನು ಸಲ್ಲಿಸಿದ್ದರೆ, ಅವರ ಪರಿಶೀಲನೆಯ ಗಡುವು ಆಗಸ್ಟ್ 31 ರಂದು ಕೊನೆಗೊಳ್ಳುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link