Coriander Remedy: ಮನೆಯಲ್ಲಿರುವ ಕೊತ್ತಂಬರಿ ಬೀಜಕ್ಕೆ ನಿಮ್ಮ ಅದೃಷ್ಟನ್ನೇ ಬದಲಾಯಿಸುವ ತಾಕತ್ತಿದೆ

Sat, 10 Dec 2022-4:04 pm,

1. ದೀರ್ಘ ಕಾಲದಿಂದ ನಿಮಗೆ ಬರಬೇಕಿದ್ದ ಹಣ, ಎಲ್ಲಿಯೋ ಸಿಲುಕಿಕೊಂಡಿದ್ದರೆ, ನೀವು ಕೊತ್ತಂಬರಿ ಸೊಪ್ಪಿನ ಪರಿಹಾರವನ್ನು ಅನುಸರಿಸಬಹುದು. ಶುಕ್ರವಾರದಂದು ನಿಮಗೆ ಯಾರಿಂದ ಹಣ ಬರಬೇಕಾಗಿದೆಯೋ ಅವರ ಹೆಸರನ್ನು ಕಾಗದದ ಮೇಲೆ ಬರೆದು, ಅದರಲ್ಲಿ  ಒಣ ಕೊತ್ತಂಬರಿ ಬೀಜಗಳನ್ನು ಹಾಕಿ ಅದನ್ನು ಹರಿಯುವ ನೀರಿನಲ್ಲಿ ಬಿಡಿ. ಇದರಿಂದ ನಿಮಗೆ ಬರಬೇಕಾಗಿದ್ದ ಹಣ ನಿಮ್ಮ ಬಳಿ ಮರಳುತ್ತದೆ.  

2. ಧನಾಗಮನವನ್ನು ಹೆಚ್ಚಿಸಲು, ಯಾವುದೇ ತಿಂಗಳ ಶುಕ್ಲ ಪಕ್ಷದಂದು ಒಣ ಕೊತ್ತಂಬರಿ ಬೀಜಗಳನ್ನು ಮಣ್ಣಿನ ಪಾತ್ರೆಯಲ್ಲಿ ಇರಿಸಿ. ಅದರಲ್ಲಿ ಕೆಲವು ನಾಣ್ಯಗಳನ್ನು ಹಾಕಿ ಉತ್ತರ ದಿಕ್ಕಿನಲ್ಲಿಡಿ. ಮಡಕೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯಲು ಪ್ರಾರಂಭಿಸಿದಾಗ, ಅದರಲ್ಲಿ ಇರಿಸಲಾದ ನಾಣ್ಯಗಳನ್ನು ಹೊರತೆಗೆದು ಅದನ್ನು ತಿಜೋರಿ ಅಥವಾ ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗತೊಡಗುತ್ತದೆ.  

3. ಮನೆಯಲ್ಲಿ ಆಗಾಗ ಮನಸ್ತಾಪ ಉಂಟಾಗಿ ಕುಟುಂಬ ಸದಸ್ಯರಲ್ಲಿ ಯಾವಾಗಲು ವೈಮನಸ್ಯದ ವಾತಾವರಣವಿದ್ದರೆ, ಸ್ವಲ್ಪ ಒಣ ಕೊತ್ತಂಬರಿ ಬೀಜಗಳನ್ನು ಮನೆಯ ಪೂರ್ವ ದಿಕ್ಕಿಗೆ ಇಡಿ. ಇದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ ಹಾಗೂ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ.  

4. ಕೆಂಪು ಬಟ್ಟೆಯಲ್ಲಿ ಕಟ್ಟಿದ ಒಣ ಕೊತ್ತಂಬರಿ ಸೊಪ್ಪನ್ನು ಹನುಮಂತನಿಗೆ ಅರ್ಪಿಸಿದರೆ ಎಲ್ಲಾ ರೀತಿಯ ತೊಂದರೆಗಳಿಂದ ಪರಿಹಾರ ಸಿಗುತ್ತದೆ. ಇದೆ ವೇಳೆ, ಈ ಪರಿಹಾರದೊಂದಿಗೆ ಹನುಮಾನ್ ಚಾಲೀಸಾವನ್ನು ಪಠಿಸಿ. ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.  

5. ಮನೆಯ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಕೊತ್ತಂಬರಿ ಸೊಪ್ಪನ್ನು ಸಹ ಬಳಸಬಹುದು. ಬುಧವಾರ ಹಸುವಿಗೆ ಹಸಿರು ಕೊತ್ತಂಬರಿ ಸೊಪ್ಪನ್ನು ತಿನ್ನಿಸುವುದರಿಂದ ಹಣದ ಬಾಧೆ ದೂರವಾಗಿ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link