ಸಾವಿನಂಚಿನಿಂದ ಹಿಡಿದು ವಿಶ್ವಕಪ್‌ ಗೆಲ್ಲುವ ತನಕ, ಎಲ್ಲವೂ ಆತನೊಬ್ಬನದ್ದೆ ಆಟ ಎಂದ ರಿಷಬ್‌ ಪಂತ್‌..!

Wed, 03 Jul 2024-10:44 am,

ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ 2024 ರ ಟಿ 20 ವಿಶ್ವಕಪ್ ಗೆದ್ದ ನಂತರ ಭಾವುಕರಾಗಿದ್ದಾರೆ. ಎಲ್ಲವೂ ದೇವರ ಬರಹ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಕಪ್ ಪಯಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 16 ತಿಂಗಳ ಹಿಂದೆ ರಿಷಬ್ ಪಂತ್ ಗಂಭೀರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು ಸಾವಿನ ಹಂಚಿನಿಂದ ತಪ್ಪಿಸಿಕೊಂಡು ಬಂದು ಮರಳಿ ಟಿಂ ಇಂಡಿಯಾ ತಂಡ ಸೇರಿದ್ದರು.

ಕುಟುಂಬ ಸದಸ್ಯರಿಗೆ ಸರ್ಪ್ರೈಸ್ ನೀಡುವುದಕ್ಕಾಗಿ ಕುಟುಂಬ ಸದಸ್ಯರಿಗೆ ತಿಳಿಸದೆ ದೆಹಲಿಯಿಂದ ರೂರ್ಕಿಗೆ ತನ್ನ ಸ್ವಂತ ಕಾರಿನಲ್ಲಿ ಹೊರಟಿದ್ದ ರಿಷಬ್ ಪಂತ್ ಗಂಭೀರವಾದ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ತನ್ನ ಬಿಎಂಡಬ್ಲ್ಯು ಕಾರನ್ನು ಅತಿವೇಗದಲ್ಲಿ ಚಲಾಯಿಸಿ ಕುಡಿದ ಅಮಲಿನಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದ ಕಾರಣ, ಕಾರಿಗೆ ಬೆಂಕಿ ಹೊತ್ತಿಕೊಂಡು ಗಂಬೀರವಾಗಿ ಗಾಯಗೊಂಡಿದ್ದರು.  

ಅಪಘಾತದ ತೀವ್ರತೆಯನ್ನು ನೋಡಿ ಎಲ್ಲರೂ ರಿಷಬ್ ಪಂತ್ ಅವರ ವೃತ್ತಿಜೀವನ ಮುಗಿದಿದೆ ಎಂದು ಊಹಿಸಿದ್ದರು, ಸಾವಿನಿಂದ ಹೋರಾಡಿ ಗೆದ್ದ ರಿಷಬ್‌, ಹಲವು ಸರ್ಜರಿಗಳ ನಂತರ ಮತ್ತೆ ಆಡಲು ಆರಂಭಿಸಿದ್ದಾರೆ. ಪಂತ್ ಕಠಿಣ ಪರಿಶ್ರಮದಿಂದ ಟೀಂ ಇಂಡಿಯಾಗೆ ರೀ ಎಂಟ್ರಿ ಕೊಟ್ಟಿದ್ದಾರೆ.   

T20 ವಿಶ್ವಕಪ್ 2024ಗೆ ಮುಖ್ಯ ವಿಕೆಟ್ ಕೀಪರ್ ಆಗಿ ರಿಷಬ್‌ ಪಂತ್‌ ಎಂಟ್ರಿ ಕೊಟ್ಟಿದ್ರು. ಈ ಮೆಗಾ ಟೂರ್ನಿಯ ಫಸ್ಟ್ ಡೌನ್ ನಲ್ಲಿ ಬ್ಯಾಟ್ ಬೀಸಿದ ರಿಷಬ್ ಪಂತ್ ಕೆಲವು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು.   

ಫೈನಲ್‌ನಲ್ಲಿ ಡಕ್ ಆಗಿದ್ದರೂ ತಮ್ಮ ಬುದ್ಧಿವಂತಿಕೆಯಿಂದ ಟೀಂ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉದ್ದೇಶಪೂರ್ವಕವಾಗಿ ವೈದ್ಯಕೀಯ ವಿರಾಮ ತೆಗೆದುಕೊಂಡಿರುವ ರಿಷಬ್ ಪಂತ್‌ಗೆ ನೆಟಿಜನ್‌ಗಳು ಪ್ರಶಂಸೆಗಳ ಸುರಿಮಳೆಗೈಯುತ್ತಿದ್ದಾರೆ. ಈ ಉದ್ದೇಶಕ್ಕಾಗಿಯೇ ರಿಷಬ್ ಪಂತ್ ಅವರನ್ನು ಟೀಂ ಇಂಡಿಯಾಗೆ ದೇವರು ಕಳುಹಿಸಿರಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.   

ರಿಷಬ್ ಪಂತ್ ಅವರು ವಿಶ್ವಕಪ್ ಗೆಲುವಿಗಾಗಿ ತಮ್ಮ ಅಭ್ಯಾಸದ ಎಡಿಟ್ ಮಾಡಿದ ವೀಡಿಯೊವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 'ಆಶೀರ್ವಾದ, ನಮ್ರತೆ, ಕೃತಜ್ಞತೆ... ಎಲ್ಲವೂ ದೇವರಿಂದ ಬರೆಯಲ್ಪಟ್ಟಿದೆ' ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.  

Blessed, Humbled & Grateful. 🏆God has its own plan 🔥😇#RP17 pic.twitter.com/6JnKQ2V9LT

— Rishabh Pant (@RishabhPant17) July 2, 2024  

ZEENEWS TRENDING STORIES

By continuing to use the site, you agree to the use of cookies. You can find out more by Tapping this link