ಉಸಿರು ಇರೋವರೆಗೂ ತಂಬಾಕು ಜಾಹೀರಾತು ಪ್ರಚಾರ ಮಾಡಲ್ಲ! ಹೀಗಂತ ಈ ವ್ಯಕ್ತಿಗೆ ಪ್ರಮಾಣ ಮಾಡಿದ್ದಾರಂತೆ ಸಚಿನ್ ತೆಂಡೂಲ್ಕರ್

Thu, 30 May 2024-5:23 pm,

ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎಂದೇ ಕರೆಯಲಾಗುತ್ತದೆ. ಮೈದಾನದಲ್ಲಾಗಲಿ, ಹೊರಗಾಗಲಿ, ಅವರ ವಿಶೇಷ ನಡವಳಿಕೆ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದೆ. ಅದೇ ರೀತಿ ತಮ್ಮ ಬದ್ಧತೆಗೂ ಹೆಸರುವಾಸಿಯಾಗಿದ್ದಾರೆ.

ಅಂದಹಾಗೆ ಸಚಿನ್ ಸಂದರ್ಶನವೊಂದರಲ್ಲಿ, ತಮ್ಮ ತಂದೆಗೆ ನೀಡಿದ ಪ್ರಮಾಣವೊಂದರ ಬಗ್ಗೆ ಬಹಿರಂಗಪಡಿಸಿದ್ದಾರೆ.

ಕಪಿಲ್ ದೇವ್, ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಕ್ರಿಸ್ ಗೇಲ್ ಸೇರಿದಂತೆ ಅನೇಕ ಆಟಗಾರರು ತಂಬಾಕು ಸಂಬಂಧಿತ ಉತ್ಪನ್ನಗಳನ್ನು ಪ್ರಚಾರ ಮಾಡುವುದನ್ನು ಕಾಣಬಹುದು. ಆದರೆ ತೆಂಡೂಲ್ಕರ್ ಈ ವಿಚಾರದಿಂದ ದೂರವಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿನ್ ತೆಂಡೂಲ್ಕರ್, "ನಾನು ಭಾರತದ ಪರ ಆಡಲು ಪ್ರಾರಂಭಿಸಿದಾಗ, ನಾನು ಶಾಲೆಯಿಂದ ಹೊರಗುಳಿದಿದ್ದೆ. ನನಗೆ ಅನೇಕ ಜಾಹೀರಾತುಗಳಲ್ಲಿ ಪ್ರಚಾರ ಮಾಡಲು ಆಫರ್ ಬಂದಿದ್ದವು. ಆದರೆ ನನ್ನ ತಂದೆ ನನಗೆ ಎಂದಿಗೂ ತಂಬಾಕು ಉತ್ಪನ್ನಗಳ ಜಾಹೀರಾತು ಮಾಡಬೇಡ ಎಂದು ಹೇಳಿದರು. ನಾನು ಅಂತೆಯೇ ಪ್ರಮಾಣ ಮಾಡಿ, ಇದುವರೆಗೆ ಸಹ ಅಂತಹ ಜಾಹಿರಾತುಗಳಲ್ಲಿ ಪ್ರಚಾರ ಮಾಡಿಲ್ಲ” ಎಂದು ಹೇಳಿದ್ದಾರೆ. .

"ಇದು ನನ್ನ ತಂದೆಗೆ ನಾನು ನೀಡಿದ ಭರವಸೆಯಾಗಿದೆ. ನೀನು ರೋಲ್ ಮಾಡೆಲ್ ಮತ್ತು ಬಹಳಷ್ಟು ಜನರು ನಿನ್ನ ಕೆಲಸವನ್ನು ಅನುಸರಿಸುತ್ತಾರೆ ಎಂದು ತಂದೆ ನನಗೆ ಹೇಳಿದರು. ಹಾಗಾಗಿ ನಾನು ಎಂದಿಗೂ ತಂಬಾಕು ಉತ್ಪನ್ನಗಳು ಅಥವಾ ಮದ್ಯಸಾರವನ್ನು ಪ್ರಚಾರ ಮಾಡುವುದಿಲ್ಲ" ಎಂದರು.

"ಈ ಬ್ರ್ಯಾಂಡ್‌’ಗಳನ್ನು ಅನುಮೋದಿಸದೆ ನಾನು ನನ್ನ ತಂದೆಗೆ ಕೊಟ್ಟ ಮಾತನ್ನು ಪಾಲಿಸುತ್ತಿದ್ದೇನೆ. ಇಂತಹ ಉತ್ಪನ್ನಗಳಿಂದ ಅನೇಕ ಆಫರ್’ಗಳು ಬಂದರೂ ಸಹ ನಾನು ಒಪ್ಪಲಿಲ್ಲ, ಬದಲಾಗಿ ತಿರಸ್ಕರಿಸಿದೆ” ಎಂದಿದ್ದಾರೆ ಕ್ರಿಕೆಟ್ ಗಾಡ್.

ZEENEWS TRENDING STORIES

By continuing to use the site, you agree to the use of cookies. You can find out more by Tapping this link