ಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲ
ಇಂದು ಶುಕ್ರನ ನಡೆಯಲ್ಲಿ ಬಹು ದೊಡ್ಡ ಬದಲಾವಣೆಯಾಗಿದೆ.ಮುಂಜಾನೆ 05.20 ಕ್ಕೆ ಶುಕ್ರನು ಹಸ್ತಾ ನಕ್ಷತ್ರದಲ್ಲಿ ಸಂಕ್ರಮಿಸಿದ್ದಾನೆ.27 ನಕ್ಷತ್ರಗಳಲ್ಲಿ ಹಸ್ತಾ ನಕ್ಷತ್ರ ಬಹಳ ವಿಶೇಷವಾದದ್ದು.
ಇದೀಗ ಶುಕ್ರ ಹಸ್ತ ನಕ್ಷತ್ರವನ್ನು ಪ್ರವೇಶಿಸಿರುವುದರಿಂದ ಮೂರೂ ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲು ಕೂಡಾ ತೆರೆದಿದೆ.ಇಂದಿನಿಂದ ಈ ರಾಶಿಯವರ ಸುಖ ಸಂಪತ್ತು ವೃದ್ದಿಯಾಗಲಿದೆ.
ಸಿಂಹ ರಾಶಿ : ಆದಾಯದಲ್ಲಿ ನಿರೀಕ್ಷೆಗೂ ಮೀರಿದ ಏರಿಕೆ ಕಂಡುಬರುತ್ತದೆ.ಹಣದ ಹರಿವು ಹೆಚ್ಚಾಗುತ್ತದೆ.ಹಣ ಕೂಡಿಡುವುದು ಈಗ ನಿಮಗೆ ಸಾಧ್ಯವಾಗುವುದು.ಹೊಸ ಕೆಲಸ ಆರಂಭಿಸಬೇಕೆಂದಿದ್ದರೆ ಇದೇ ಸಮಯ.ಇಂದಿನಿಂದ ಎಲ್ಲವೂ ಒಳಿತೇ ಆಗುವುದು.
ಕನ್ಯಾ ರಾಶಿ :ಮಾಡುವ ಪ್ರತಿ ಕೆಲಸದಲ್ಲಿ ಯಶಸ್ಸು ನಿಮ್ಮದಾಗುವುದು.ವ್ಯಾಪಾರದಲ್ಲಿ ಸುಧಾರಣೆ ಕಂಡುಬರಲಿದೆ. ಏನೇ ಸಮಸ್ಯೆಗಳಿದ್ದರೂ ಎಲ್ಲವೂ ನಿವಾರಣೆಯಾಗುವುದು. ಇಡುವ ಹೆಜ್ಜೆ ಗೆಲುವಿನೆಡೆಗೆ ಸಾಗುವುದು.
ಮಕರ ರಾಶಿ : ಅದೃಷ್ಟ ನಿಮ್ಮ ಹಿಂದೆಯೇ ಇರುವುದು.ಕೆಲಸದಲ್ಲಿ ಬಡ್ತಿ ಸಿಗಬಹುದು. ಹಠಾತ್ ಆರ್ಥಿಕ ಲಾಭವಾಗುವುದು. ಮನೆ ನಿರ್ಮಾಣ ಅಥವಾ ಖರೀದಿ ಕೆಲಸಕ್ಕೆ ಕೈ ಹಾಕಬಹುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ZEE NEWS ಇದನ್ನು ಖಚಿತಪಡಿಸುವುದಿಲ್ಲ.