ಗಾಂಭೀರ್ಯವಾಗಿ ನಡು ರಸ್ತೆಯಲ್ಲಿ ಕಾಡಾನೆ ವಾಕ್, ಹಿಂದಿರುಗುವಾಗ ಆನೆ ನಡೆ ಕಂಡು ಹೌಹಾರಿದ ಜನ: ವಿಡಿಯೋ ವೈರಲ್

Elephant Viral Video: ರಸ್ತೆಗಿಳಿದು ಕಾಡಾನೆ ದಾಂಧಲೆ... ನಡುರಸ್ತೆಯಲ್ಲಿ ಗಾಂಭೀರ್ಯವಾಗಿ ಹೆಜ್ಜೆ ಇಡುತ್ತಿದ್ದ ಗಜರಾಜನನ್ನು ಕಂಡು ಹೌಹಾರಿದ ಜನ. 

Written by - Yashaswini V | Last Updated : Sep 18, 2024, 01:30 PM IST
  • ರಸ್ತೆಗಿಳಿದ ಗಜರಾಜ, ಸಂಚಾರ ಅಸ್ತವ್ಯಸ್ತ
  • ಚಾಮರಾಜನಗರದ ಗಡಿಭಾಗದ ತಾಳವಾಡಿ ರಸ್ತೆಯಲ್ಲಿ ಸಲಗ
  • ರಸ್ತೆಯಲ್ಲಿ‌ ಒಂದು ಗಂಟೆಗೂ ಹೆಚ್ಚು‌ ಕಾಲ ಗಜರಾಜನ ಗದ್ದಲ.
ಗಾಂಭೀರ್ಯವಾಗಿ ನಡು ರಸ್ತೆಯಲ್ಲಿ ಕಾಡಾನೆ ವಾಕ್, ಹಿಂದಿರುಗುವಾಗ ಆನೆ ನಡೆ ಕಂಡು ಹೌಹಾರಿದ ಜನ: ವಿಡಿಯೋ ವೈರಲ್  title=

ಚಾಮರಾಜನಗರ: ಕಾಡಿನ ಹಾದಿಯಲ್ಲಿ ಸಾಗುವಾಗ ಕಾಡು ಪ್ರಾಣಿಗಳ ದರ್ಶನ ಸರ್ವೇ ಸಾಮಾನ್ಯ. ಆದರೆ, ದೈತ್ಯ ಆನೆಯೊಂದು ನಿಮ್ಮ ಸನಿಹ ಬಂದು ನಿಂತರೆ ಹೇಗಿರುತ್ತೆ. ಅಬ್ಬಬ್ಬಾ... ನೆನೆಸಿಕೊಂಡರೂ ಕೂಡ ಎದೆ ನಡುಗುತ್ತದೆ. ಅಂತಹುದೇ ಒಂದು ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ‌ ತಾಳವಾಡಿ ಸಮೀಪ ಮಂಗಳವಾರ (ಸೆ. 17) ಸಂಜೆ ನಡೆದಿದ್ದು ಇದೀಗ ಈ ಕಣ್ಮನ ಸೆಳೆಯುವ ಗಾಂಭೀರ್ಯ ನಡೆಯ ಗಜನ ವಿಡಿಯೋ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಮುಂದೆ ಒಂದು ಬಸ್ ನಲ್ಲಿ ಜನರಿದ್ದಾರೆ. ಬಹುಶಃ ಆ ಬಸ್ ನಲ್ಲಿದ್ದವರೇ ವಿಡಿಯೋ ಮಾಡಿರಬಹುದು. ರಸ್ತೆಯ ಇಕ್ಕೆಲಗಳಲ್ಲಿ ದ್ವಿಚಕ್ರ ವಾಹನಗಳು ಸೇರಿದಂತೆ ಕೆಲ ವಾಹನಗಳು ಕಂಡು ಬರುತ್ತವೆ.  ಈ ಸಂದರ್ಭದಲ್ಲಿ ನಡು ರಸ್ತೆಯಲ್ಲಿ ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದಲೇ ನಡೆದು ಬರುವ ಆನೆ ಇನ್ನೇನು ಹತ್ತಿರ ಬಂದೇಬಿಡ್ತು ಎಂದು ಜನ ಹೌಹಾರುತ್ತಿರುವ ವೇಳೆ ರಸ್ತೆಗೆ ಅಡ್ಡಲಾಗಿ ನಿಲ್ಲುತ್ತದೆ. ಬಳಿಕ ಹಿಂದೆಯಿಂದ ಲಾರಿ ಬರುತ್ತಿದ್ದನ್ನು ಕಂಡು ವೇಗವಾಗಿ ಸಾಗಿ ಲಾರಿಯನ್ನು ಅಟ್ಯಾಕ್ ಮಾಡಿ, ಅದರಲ್ಲಿದ್ದ ಕಬ್ಬಿನ ಜಲ್ಲೆಯನ್ನು ತಿನ್ನಲಾರಂಭಿಸುತ್ತದೆ. 

ಇದನ್ನೂ ಓದಿ- ಮಕ್ಕಳಿಗೆ ನೀಡುವ ರಜೆಯ ಹೋಂ ವರ್ಕ್ ಮಕ್ಕಳಿಗೋ? ಪೋಷಕರಿಗೋ? ವಿಡಿಯೋ ವೈರಲ್

ಹೌದು, ಕಾಡಾನೆಯೊಂದು ಆಹಾರ ಅರಸಿ ರಸ್ತೆಗಿಳಿದಿತ್ತು.  ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ. ಏಕಾಏಕಿ ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಕಾಡಾನೆ ಕಬ್ಬಿನ ಲಾರಿ ಅಡ್ಡಗಟ್ಟಿದೆ. ಆನೆ ಕಂಡು ಹೌಹಾರಿರುದ ವಾಹನ ಸವಾರರು ರಸ್ತೆಯ ಎರಡೂ ಬದಿಗಳಲ್ಲೂ ವಾಹನ ನಿಲ್ಲಿಸಿ ಆನೆ ಪಕ್ಕಕ್ಕೆ ಸರಿಯುವ ತನಕ ಕಾದಿದ್ದು ಅರ್ಧ ತಾಸಿಗಿಂತಲೂ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು ಎಂದು ವರದಿಯಾಗಿದೆ. 

ಕಬ್ಬಿನ ಲಾರಿಗೆ ಟಾರ್ಪಾಲ್ ಸುತ್ತಿದ್ದರೂ ಬಿಡದ ಕಾಡಾನೆ ಟಾರ್ಪಾಲ್ ಕಿತ್ತು ಬಿಸಾಡಿ ಕಬ್ಬಿನ ಜಲ್ಲೆಗಳಲ್ಲಿ ಸವಿದಿದೆ. ಇನ್ನು ಆನೆ ಸಮೀಪವೇ ಇದ್ದರೂ ಬೈಕ್ ಸವಾರರು ಆನೆ ಬಳಿಯೇ ನಿಂತು ಹುಚ್ಚಾಟ ಮೆರೆದಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ- Viral Video: ಒಂಟಿಯಾಗಿದ್ದ ಜಿರಾಫೆ ಮೇಲೆ ಸಿಂಹಿಣಿಗಳಿಂದ ದಾಳಿ,  ಅದು ಬಚಾವ್ ಆಗಿದ್ದೇಗೆ? 

ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ತುಂಬಿಕೊಂಡು ಹೋಗುವ ಲಾರಿಗಳೇ ಕಾಡಾನೆಯ ಟಾರ್ಗೆಟ್ ಆಗಿದ್ದು ಆಗಾಗ್ಗೆ ರಸ್ತೆಗಿಳಿದು ಕಬ್ಬು ವಸೂಲಿ ಮಾಡಲಿದೆ. ಆನೆಗೆ ಊಟವಾದರೇ ವಾಹನ ಸವಾರರಿಗೆ ಪ್ರಾಣ ಸಂಕಟವಾಗಿದೆ. ಈ ವೈರಲ್ ವಿಡಿಯೋವನ್ನು ನೀವೂ ಒಮ್ಮೆ ನೋಡಿ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News