ದೀಪಾವಳಿಗೂ ಮುನ್ನವೇ ಲಕ್ಷ್ಮೀ ಕಟಾಕ್ಷ !ಒಂದೇ ಸಮನೆ ಏರುತ್ತಲೇ ಹೋಗುವುದು ಈ ರಾಶಿಯವರ ಸಂಪತ್ತು, ಸ್ಥಾನಮಾನ, ಗೌರವ!

Tue, 15 Oct 2024-8:47 am,

ಚಂದ್ರ ಮತ್ತು ಗುರು ಸಂಯೋಗದಿಂದ ಅಂದರೆ ಈ ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ ಗಜಕೇಸರಿ ಯೋಗ ನಿರ್ಮಾಣವಾಗುತ್ತದೆ.ದೀಪಾವಳಿಗೂ ಮುನ್ನ ರೂಪುಗೊಳ್ಳುವ ಈ ರಾಜಯೋಗ ಅನೇಕ ರಾಶಿಗಳ ಅದೃಷ್ಟವನ್ನು ಬೆಳಗಿಸುತ್ತದೆ. 

ಮೇಷ ರಾಶಿ :ಈ ರಾಶಿಯ ಸಂಪತ್ತಿನ ಮನೆಯಲ್ಲಿಯೇ ಗಜಕೇಸರಿ ಯೋಗ  ರೂಪುಗೊಳ್ಳುತ್ತಿದೆ.ಹೀಗಾಗಿ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಈ ರಾಶಿಯವರ ಮೇಲೆ ಇರಲಿದೆ.ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಯಶಸ್ಸು ನಿಮ್ಮದೇ.ಅತಿಯಾಗಿ ಆರ್ಥಿಕ ಲಾಭ ಪಡೆಯುವ ಸಮಯವಿದು.    

ತುಲಾ ರಾಶಿ :ನಿಮ್ಮ ಜೀವನದಲ್ಲಿ ಒಳ್ಳೆಯ ದಿನ ಇಲ್ಲಿಂದಲೇ ಆರಂಭ.ಮಾಡುವ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುವುದು. ಉದ್ಯೋಗದಲ್ಲಿ ಕಾಯುತ್ತಿದ್ದ ಉತ್ತಮ ಅವಕಾಶ ಈಗ ಸಿಗುವುದು. ಸಾಲದಿಂದ ಮುಕ್ತಿ ಸಿಗುವುದು. ಸ್ವಂತ ಮನೆಯ ಕನಸು ನನಸಾಗುವುದು.     

ಕನ್ಯಾ ರಾಶಿ :ಈ ರಾಶಿಯ ಅದೃಷ್ಟದ ಮನೆಯಲ್ಲಿಯೇ ಗಜಕೇಸರಿ ಯೋಗ ರೂಪುಗೊಳ್ಳುತ್ತಿದೆ.ಹೀಗಾಗಿ ಅದೃಷ್ಟ ನಿಮ್ಮ ಬೆನ್ನಿಗಿರಲಿದೆ. ಜೀವನದಲ್ಲಿ ಸಿರಿ ಸಂಪತ್ತು, ಸಂತೋಷ ನೆಮ್ಮದಿ ಹತ್ತು ಪಾಲು ಹೆಚ್ಚುವುದು. ವಾಹನ, ಜಮೀನು ಖರೀದಿ ಭಾಗ್ಯ ಇದೆ.  

ಸೂಚನೆ: ಈ ಲೇಖನವು  ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು  ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link