ಭರಣಿ -ಕೃತಿಕಾ ನಕ್ಷತ್ರದೊಂದಿಗೆ ಗಜಕೇಸರಿ ಯೋಗ, ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಬೆಳಗಲಿದೆ ಭಾಗ್ಯ ಜ್ಯೋತಿ

Thu, 25 Jul 2024-7:07 am,

ಇನ್ನೂ ನಾಲ್ಕು ದಿನಗಳಲ್ಲಿ ಎಂದರೆ ಜುಲೈ 29ರಂದು ಚಂದ್ರನು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈಗಾಗಲೇ ದೇವಗುರು ಬೃಹಸ್ಪತಿ ವೃಷಭ ರಾಶಿಯಲ್ಲಿರುವುದರಿಂದ ಗುರು-ಚಂದ್ರರ ಸಂಯೋಗ ಏರ್ಪಡಲಿದೆ. 

ಗಜ- ಆನೆ ಮತ್ತು ಕೇಸರಿ- ಸಿಂಹ ಅರ್ಥಾತ್ ಆನೆ ಮತ್ತು ಸಿಂಹದ ಸಂಯೋಜನೆಯಿಂದ ಈ ಶುಭಕರ ಶಕ್ತಿಯುತವಾದ ಗಜಕೇಸರಿ ಯೋಗವು ನಿರ್ಮಾಣವಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರ ಮತ್ತು ಗುರು ಕೇಂದ್ರದಲ್ಲಿ ಮುಖಾಮುಖಿಯಾದಾಗ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿರುವ ಗಜಕೇಸರಿ ಯೋಗ ರೂಪುಗೊಳ್ಳುತ್ತದೆ. ಇದೀಗ ಜುಲೈ 29ರಂದು ಈ ಯೋಗ ನಿರ್ಮಾಣವಾಗುತ್ತಿದ್ದು, ಕೆಲವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. 

ಮೇಷ ರಾಶಿ:  ಶುಭಕರ ಗಜಕೇಸರಿ ಯೋಗಾದ ಫಲವಾಗಿ ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳು ಸರಿದು, ಆತ್ಮವಿಶ್ವಾಸ, ಗೌರವ ಹೆಚ್ಚಾಗಲಿದೆ. 

ವೃಷಭ ರಾಶಿ :  ಲಗ್ನ ಮನೆಯಲ್ಲಿ ಗಜಕೇಸರಿ ಯೋಗವು ಈ ಜಯರಿಗೆ ಹಲವು ಆಯಾಮಗಳಲ್ಲಿ ಪ್ರಯೋಜನಕಾರಿ ಆಗಿದೆ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗ ರಂಗದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ವಾಹನ, ಆಸ್ತಿ ಖರೀದಿ ಯೋಗವೂ ಇದೆ. 

ಮಕರ ರಾಶಿ:  ಬಾಕಿ ಉಳಿದಿರುವ ಕೆಲಸಗಳು ವೇಗ ಪಡೆಯಲಿವೆ. ಕುಟುಂಬಸ್ಥರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಕೆಲಸದಲ್ಲಿ ಕೊಂಚ ಏರಿಳಿತಗಳಿದ್ದರೂ ವೈಯಕ್ತಿಕ ಜೀವನದಲ್ಲಿ ಶಾಂತಿ-ನೆಮ್ಮದಿಯನ್ನು ಕಾಣಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link