ಈ ರಾಶಿಗಳ ಬದುಕಿನ ದಿಕ್ಕು ಬದಲಿಸಲಿದೆ ಗಣೇಶ ಚತುರ್ಥಿ.. ರಾಜವೈಭೋಗ, ಸಂಪತ್ತಿನ ಸುರಿಮಳೆ.. ವಿಘ್ನ ಕಳೆದು ಪ್ರತಿ ಕೆಲಸದಲ್ಲಿಯೂ ಜಯ !

Wed, 04 Sep 2024-4:03 pm,

ಗಣೇಶ ಚತುರ್ಥಿಯ ದಿನ ಹಲವು ಶುಭ ಯೋಗಗಳು ಕೂಡ ರೂಪುಗೊಳ್ಳಲಿವೆ. ರವಿ ಮತ್ತು ಸರ್ವಾರ್ಥ ಸಿದ್ಧಿ ಯೋಗವಿದ್ದು, ಇದರೊಂದಿಗೆ ಬ್ರಹ್ಮಯೋಗವೂ ದಿನವಿಡೀ ಇರುತ್ತದೆ. ಈ ಮೂರು ಯೋಗಗಳ ರಚನೆಯಿಂದ ಕೆಲವು ರಾಶಿಗಳ ಜನರು ಲಾಭವನ್ನು ಪಡೆಯಲಿದ್ದಾರೆ. ಹಣದ ಮಳೆಯಾಗಲಿದೆ.

ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಶುಭ ಕಾರ್ಯ ಗಣೇಶನ ಪೂಜೆಯಿಂದಲೇ ಆರಂಭವಾಗುವುದು. ಗಣೇಶನ ಆಶೀರ್ವಾದ ಇದ್ದರೆ ಸಂಪತ್ತು ಮತ್ತು ಸಂತೋಷದ ಕೊರತೆ ಇರುವುದಿಲ್ಲ. ಗಣೇಶನಿಗೆ ನಾಲ್ಕು ರಾಶಿಗಳೆಂದರೆ ತುಂಬಾ ಪ್ರಿಯ, ಇವರನ್ನು ಕೃಪೆಯಿಟ್ಟು ಕಾಯುತ್ತಾನೆ. ಹೀಗಾಗಿ ಈ ಬಾರಿ ಗಣೇಶ ಚತುರ್ಥಿಯಿಂದ ಈ 4 ರಾಶಿಗಳ ಗೋಲ್ಡನ್‌‌ ಟೈಮ್ ಶುರುವಾಗಲಿದೆ. 

ಕನ್ಯಾ ರಾಶಿಯ ಜನರಿಗೆ ಗಣಪತಿಯ ಆಶೀರ್ವಾದ ಸದಾ ಇರುತ್ತದೆ.  ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ವೃತ್ತಿಜೀವನದಲ್ಲಿನ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಪ್ರತಿ ಕೆಲಸದಲ್ಲೂ ಜಯಗಳಿಸುತ್ತಾರೆ.

ಮಿಥುನ ರಾಶಿಯವರ ಸುವರ್ಣ ಸಮಯ ಶುರುವಾಗಲಿದೆ. ಗಣೇಶ ಚತುರ್ಥಿಯ ಬಳಿಕ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಹಣದ ಜೊತೆಗೆ ಸಮಾಜದಲ್ಲಿ ಗೌರವ ಕೂಡ ವೃದ್ಧಿಯಾಗಲಿದೆ.

ಮಕರ ರಾಶಿಯ ಜನರ ಉದ್ಯೋಗದಲ್ಲಿ ಬಡ್ತಿ ದೊರೆಯಬಹುದು.  ಕಡಿಮೆ ಶ್ರಮದಿಂದ ಹೆಚ್ಚು ಲಾಭ ಪಡೆಯುತ್ತೀರಿ. ಆದಾಯದ ಮೂಲಗಳು ಹೆಚ್ಚಾಗಲಿವೆ. ವ್ಯಾಪರದಲ್ಲಿ ಮಹತ್ತರ ಏಳ್ಗೆ ಕಾಣುವಿರಿ. ಹಣದ ಹರಿವು ಹೆಚ್ಚಾಗಲಿದೆ.

ಮೇಷ ರಾಶಿಯ ಜನರಿಗೆ ಗಣೇಶ ಚತುರ್ಥಿ ಮಂಗಳಕರವಾಗಿದೆ. ಜೀವನದ ಎಲ್ಲ ಕಷ್ಟಗಳು ಕಳೆದು ಸುಖ ನೆಮ್ಮದಿ ನಿಮ್ಮದಾಗಲಿದೆ. ಗಣೇಶನ ವಿಶೇಷ ಆಶೀರ್ವಾದಿಂದ ವಿಘ್ನಗಳೆಲ್ಲ ಕಳೆದು ಆರ್ಥಿಕವಾಗಿ ಸಬಲರಾಗುವಿರಿ.   

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link