ಈ ರಾಶಿಯವರ ಭಾಗ್ಯೋದಯ !ಕಷ್ಟ ಕಳೆದು ಒಲಿಯುವುದು ಸುಖದ ಸುಪ್ಪತ್ತಿಗೆ! ಉಕ್ಕಿಬರುವುದು ಧನ

Wed, 27 Sep 2023-10:54 am,

ಅಕ್ಟೋಬರ್ 30 ರಂದು ಗುರು ಮತ್ತು ರಾಹುವಿನ ಸಂಯೋಗ ಕೊನೆಗೊಳ್ಳಲಿದೆ. ಜ್ಯೋತಿಷ್ಯದ ಪ್ರಕಾರ ರಾಹು-ಗುರು ಸಂಯೋಗವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಎರಡು ಗ್ರಹಗಳ  ಸಂಯೋಗ ಕೊನೆಯಾಗುತ್ತಿದ್ದಂತೆಯೇ ಕೆಲವು ರಾಶಿಯವರ ಜೀವನದ ಕಷ್ಟಗಳು ಕೂಡಾ ಕೊನೆಯಾಗುವುದು. ಎದುರಾಗಿದ್ದ ಅಡೆತಡೆಗಳೆಲ್ಲಾ ನಿವಾರಣೆಯಾಗಿ ಅದೃಷ್ಟ ಜೊತೆ ಜೊತೆಗೆ ಹೆಜ್ಜೆ ಹಾಕುವುದು. 

ಕಳೆದ ಹಲವು ತಿಂಗಳುಗಳಿಂದ ಎದುರಾಗಿದ್ದ ಸಮಸ್ಯೆಗಳು ಕೊನೆಗೊಳ್ಳಲಿವೆ. ಆರ್ಥಿಕ ಲಾಭದ ಅವಕಾಶಗಳು ಹೆಚ್ಚಾಗುತ್ತವೆ. ಶನಿಯ ಮೂರನೇ ಅಂಶವು ಮೇಷ ರಾಶಿಯ ಜನರಿಗೆ ಕೆಲವು ದೊಡ್ಡ ಲಾಭ ಅಥವಾ ಅವಕಾಶವನ್ನು ಒದಗಿಸುತ್ತದೆ. ಅವಿವಾಹಿತರಿಗೆ ಉತ್ತಮ ವಿವಾಹ ಪ್ರಸ್ತಾಪಗಳು ಬರಬಹುದು.  ಮತ್ತು ವಿದೇಶ ಪ್ರಯಾಣವೂ ಸಾಧ್ಯ.   

ಗುರು-ರಾಹುವಿನ ಸಂಯೋಗದಿಂದ ರೂಪುಗೊಂಡ ಚಂಡಾಲ ಯೋಗದ ಅಂತ್ಯದ ನಂತರ, ಸಿಂಹ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ. ಹಠಾತ್ ಆರ್ಥಿಕ ಲಾಭಕ್ಕೆ ಅವಕಾಶವಿರುತ್ತದೆ. ಕಾರ್ಯಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋಗಸ್ಥರಿಗೆ ಉದ್ಯೋಗ ಬಡ್ತಿ ಮತ್ತು ಆರ್ಥಿಕ ಲಾಭದ ಅವಕಾಶಗಳು ದೊರೆಯುತ್ತವೆ.

ಧನು ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳು ಮರಳುವ ಉತ್ತಮ ಲಕ್ಷಣಗಳಿವೆ. ಅದೃಷ್ಟದ ಬಲವಾದ ಸಾಧ್ಯತೆಯಿದೆ. ಭೂಮಿ, ಆಸ್ತಿ, ಮನೆ ಖರೀದಿಯ ಕನಸು ನನಸಾಗಬಹುದು. ಉದ್ಯೋಗಿಗಳಿಗೆ ಲಾಭದ ಅವಕಾಶಗಳು ಸಿಗುತ್ತವೆ. ಇದರಿಂದಾಗಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಅಕ್ಟೋಬರ್ 30 ರ ನಂತರ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಕಾಣುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ

ZEENEWS TRENDING STORIES

By continuing to use the site, you agree to the use of cookies. You can find out more by Tapping this link