ಈ ರೀತಿ ಆಮೆ ಉಂಗುರ ಧರಿಸಿದ್ರೆ ಹಣದ ಕೊರತೆಯೇ ಬರಲ್ಲ.. ಕೈ ಹಾಕಿರೋ ಕೆಲಸಕ್ಕೆಂದೂ ಹಿನ್ನಡೆಯಾಗಲ್ಲ!!

Thu, 24 Oct 2024-10:03 am,

ಆಮೆಯ ಉಂಗುರವನ್ನು ಧರಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದವೂ ದೊರೆಯುತ್ತದೆ. ಆದರೆ ಈ ಆಮೆಯ ಉಂಗುರವನ್ನು ಧರಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ತಾಮ್ರ ಮತ್ತು ಹಿತ್ತಾಳೆಯ ಆಮೆ ಉಂಗುರಗಳ ಬದಲಿಗೆ.. ಬೆಳ್ಳಿಯ ಆಮೆಯ ಉಂಗುರಗಳನ್ನು ಧರಿಸಿ..  

ಈ ಉಂಗುರವನ್ನು ಮಧ್ಯದ ಬೆರಳು ಅಥವಾ ತೋರು ಬೆರಳಿಗೆ ಮಾತ್ರ ಧರಿಸಬೇಕು. ಧರಿಸುವ ಮೊದಲು ಆಮೆಯ ಉಂಗುರವನ್ನು ಹಾಲಿನಿಂದ ಸ್ವಚ್ಛಗೊಳಿಸಬೇಕು. ಅದರ ನಂತರ ಅದನ್ನು ಗಂಗಾಜಲದಿಂದ ಶುದ್ಧೀಕರಿಸಬೇಕು. ಬಳಿಕ ಈ ಅದನ್ನು ಲಕ್ಷ್ಮೀದೇವಿ ಮತ್ತು ದುರ್ಗಮ್ಮನ ಫೋಟೋಗಳ ಬಳಿ ಇಟ್ಟು ಶ್ರೀಸೂಕ್ತವನ್ನು ಪಠಿಸಬೇಕು. ಆಗ ಮಾತ್ರ ಆಮೆಯ ಉಂಗುರವನ್ನು ಧರಿಸಬೇಕು.  

ಆಮೆಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಶುಕ್ರವಾರದಂದು ಈ ಉಂಗುರವನ್ನು ಧರಿಸುವುದು ಉತ್ತಮ. ಅಲ್ಲದೆ ಒಂದು ವೇಳೆ ಆಮೆಯ ಉಂಗುರವನ್ನು ತೆಗೆದರೆ.. ಅದನ್ನು ಮತ್ತೊಮ್ಮೆ ಲಕ್ಷ್ಮಿ ದೇವಿಯ ಪಾದಕ್ಕೆ ಇಟ್ಟು ಆ ನಂತರವೇ ಧರಿಸಬೇಕು.  

ಆಮೆಯ ಉಂಗುರವನ್ನು ಧರಿಸುವುದರಿಂದ ಆರ್ಥಿಕ ತೊಂದರೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ವ್ಯಕ್ತಿಯಲ್ಲಿರುವ ನಕಾರಾತ್ಮಕ ಶಕ್ತಿಯು ಧನಾತ್ಮಕ ಶಕ್ತಿಯಿಂದ ಬದಲಾಯಿಸಲ್ಪಡುತ್ತದೆ. ಮನೆಯಲ್ಲಿ ಪ್ರಗತಿಯೂ ಹೆಚ್ಚಾಗುತ್ತದೆ. ಜೀವನದಲ್ಲಿ ಎಲ್ಲಾ ತಪ್ಪುಗಳು ದೂರವಾಗುತ್ತವೆ.   

 ಆಮೆಯ ಉಂಗುರವನ್ನು ಈ ಮೇಲೆ ತಿಳಿಸಿದ ಹಾಗೇ ಸರಿಯಾದ ರೀತಿಯಲ್ಲಿ ಧರಿಸಿದರೇ ಹಣದ ಕೊರತೆಯಂತೂ ಬರುವುದೇ ಇಲ್ಲ ಎಂದು ನಂಬಲಾಗಿದೆ.. ಅಷ್ಟೇ ಅಲ್ಲ.. ಇದರಿಂದ ನೀವು ಕೈಹಾಕಿದ ಕೆಲಸಗಳೆಲ್ಲವೂ ಸರಾಗವಾಗಿ ಸಾಗುತ್ತವೆ..   

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link