Jaggery Tips: ಬೆಲ್ಲದ ಈ ಉಪಾಯಗಳನ್ನು ಅನುಸರಿಸಿದರೆ, ಹಣಕಾಸಿನ ಮುಗ್ಗಟ್ಟು ತಕ್ಷಣ ದೂರಾಗುತ್ತದೆ

Tue, 25 Jan 2022-4:04 pm,

1. ಹಣಕಾಸಿನ ಮುಗ್ಗಟ್ಟು ನಿವಾರಿಸುತ್ತದೆ - ತುಣುಕು ಬೆಲ್ಲ ಮತ್ತು ಒಂದು ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ದೇವಿ ಲಕ್ಷ್ಮಿಯ ಚರಣಗಳಲ್ಲಿ ಅರ್ಪಿಸಿ. ಈ ಗಂಟಿಗೆ ಧೂಪ-ದೀಪ ಬೆಳಗಿ ತಿಜೋರಿ ಅಥವಾ ಬೀರುವಿನಲ್ಲಿ ಅಥವಾ ಹಣವಿಡುವ ಯಾವುದೇ ಜಾಗದಲ್ಲಿ ಇರಿಸಿ. ಇದರಿಂದ ಜೀವನದಲ್ಲಿನ ಹಣಕಾಸಿನ ಮುಗ್ಗಟ್ಟು ದೂರವಾಗುತ್ತದೆ.

2. ಸಾಲಬಾಧೆ ರೂರಾಗಿಸುತ್ತದೆ - ಬೆಲ್ಲದಿಂದ ತಯಾರಿಸಿದ ಸಿಹಿಯನ್ನು ಮಾಡಿ ಮಂಗಳವಾರ ಹನುಮಂತನಿಗೆ ಅರ್ಪಿಸಿ. ನೀವು ಬಯಸಿದರೆ, ಬೆಲ್ಲ ಮತ್ತು ಬೇಳೆಯನ್ನು ಸಹ ನೀಡಬಹುದು. ಈ ರೀತಿ ಮಾಡುವುದರಿಂದ ಮಂಗಳದ ಅಶುಭ ಪರಿಣಾಮವನ್ನು ಕೊನೆಗೊಳಿಸುತ್ತದೆ ಮತ್ತು ಜೀವನದಲ್ಲಿ ಸ್ಥಿರತೆ ಬರುತ್ತದೆ. ಅಲ್ಲದೆ, ಇದು ಹಣಕಾಸಿನ ತೊಂದರೆಗಳನ್ನು ನಿವಾರಿಸಿ, ಸಾಲದ ಹೊರಯನ್ನು ಕಡಿಮೆ ಮಾಡುತ್ತದೆ.

3. ಕುಟುಂಬ ಸದಸ್ಯರ ನಡುವಿನ ವೈಮನಸ್ಯ ಅಂತ್ಯ ಮಾಡುತ್ತದೆ - ಕುಟುಂಬದ ಸದಸ್ಯರ ನಡುವೆ ವೈಮನಸ್ಯ ಅಥವಾ ಯಾವುದೇ ರೀತಿಯ ವಿವಾದಗಳಿದ್ದರೆ, ಅದನ್ನು ತೆಗೆದುಹಾಕಲು, ಮಂಗಳವಾರ ಅಥವಾ ಶನಿವಾರದಂದು, ಒಂದೂವರೆ ಕಿಲೋಗ್ರಾಂಗಳಷ್ಟು ಬೆಲ್ಲವನ್ನು ನೆಲದಲ್ಲಿ ಹೂತುಹಾಕಿ. ಕೌಟುಂಬಿಕ ಕಲಹಗಳು ಮತ್ತು ವಿವಾದಗಳು ಬೆಲ್ಲದ ಈ ಉಪಾಯದಿಂದ  ಕೊನೆಗೊಳ್ಳುತ್ತವೆ.

4. ಶೀಘ್ರ ಕಂಕಣಬಲ ಕೂಡಿ ಬರಲು ಈ ಉಪಾಯ ಅನುಸರಿಸಿ - ಬೇಗನೆ ಕಂಕಣ ಬಲ ಕೂಡಿ ಬರಲು ಹಾಗೂ ದಾಂಪತ್ಯ ಜೀವನದಲ್ಲಿ ಬರುವ ಅಡೆತಡೆಗಳನ್ನೂ ನಿವಾರಿಸಲು ಬೆಲ್ಲ ತುಂಬಾ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಹಸುವಿಗೆ ಬೆಲ್ಲ ಮತ್ತು ಕಾಳು ತಿನ್ನಿಸಿ. ಇದಲ್ಲದೆ, ಹಿಟ್ಟಿನಲ್ಲಿ ಬೆಲ್ಲವನ್ನು ಬೆರೆಸಿ ಪೇಡಾ ಮಾಡಿ, ನಂತರ ಅದರ ಮೇಲೆ ಸ್ವಲ್ಪ ಅರಿಶಿನವನ್ನು ಹಚ್ಚಿ ಮತ್ತು ಅದನ್ನು ಹಸುವಿಗೆ ತಿನ್ನಿಸಿ.

5. ನೌಕರಿಗಾಗಿ ಈ ಉಪಾಯ ಅನುಸರಿಸಿ - ನೀವು ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮತ್ತು ಹಲವಾರು ಸಂದರ್ಶನದ ನಂತರವೂ ನಿಮಗೆ ಕೆಲಸದಲ್ಲಿ ಯಶಸ್ಸು ಸಿಗದಿದ್ದರೆ, ಕೆಲಸ ಹುಡುಕುವ ಮೊದಲು, ರೊಟ್ಟಿಯಲ್ಲಿ ಬೆಲ್ಲವನ್ನು ಬೆರೆಸಿ ಹಸುವಿಗೆ ತಿನ್ನಿಸಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link