Fathers dayಗೆ ದರ್ಶನ್‌ ಮಗ ವಿನೀಶ್ ಪೋಸ್ಟ್‌... ಸ್ಟಾರ್‌ ನಟನಾದ್ರೆನೂ, ಆರೋಪಿಯಾದ್ರೆನೂ ಅಪ್ಪ ಎಂದಿಗೂ ಮಕ್ಕಳ ಪಾಲಿನ ʻಹೀರೋʼ ಅಲ್ವೇ!?

Sun, 16 Jun 2024-11:24 am,

ನಟ ದರ್ಶನ್‌ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ ವಿನೀಶ್.‌ ದರ್ಶನ್‌ ಸದ್ಯ ರೇಣುಕಾಸ್ವಾಮಿ ಕೊಲೆ ಆರೋಪದಡಿ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. 

ಇದು ವಿನೀಶ್‌ ಮನಸ್ಸಿಗೂ ಆಘಾತ ನೀಡಿದೆ. ಈ ಹಿಂದೆ ಕೂಡ ಅಪ್ಪ ಜೈಲು ಸೇರಿದ ವಿಚಾರಕ್ಕೆ ಸಂಬಂಧಪಟ್ಟಂತೆ ವಿನೀಶ್‌ ಒಂದು ಪೋಸ್ಟ್‌ ಹಾಕಿದ್ದರು. ಅಪ್ಪನನ್ನು ನಿಂದಿಸಿದ್ದಕ್ಕೆ ಬೇಸರ ಹೊರಹಾಕಿದ್ದರು.

ವಿನೀಶ್ ಗೆ ಇನ್ನು 15 ವರ್ಷ. ಹೈಸ್ಕೂಲ್‌ ನಲ್ಲಿ ಓದುತ್ತಿದ್ದಾನೆ. ವಿಶ್ವ ತಂದೆಯ ದಿನದಂದು ವಿನೀಶ್ ಸೋಶಿಯಲ್ ಮೀಡಿಯಾದ ಮೂಲಕ ಅಪ್ಪ ದರ್ಶನ್‌ ಅವರಿಗೆ ಶುಭ ಕೋರಿದ್ದಾರೆ.

ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ "ಹ್ಯಾಪಿ ಫಾದರ್ಸ್ ಡೇ ಅಪ್ಪ. ನಾನು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವೆ. ಐ ಲವ್ ಯು" ಎಂದು ವಿನೀಶ್‌ ಬರೆದಿದ್ದಾರೆ.

"ಯಾವಾಗಲೂ ನೀವೇ ನನ್ನ ಹೀರೊ" ಎಂದು ವಿನೀಶ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದು, ದರ್ಶನ್‌ ಮೇಲೆ ಪುತ್ರ ಇಟ್ಟ ಪ್ರೀತಿ ಎಂಥದ್ದು ಎಂಬುದನ್ನು ಅರಿಯಬಹುದು.

ಅಪ್ಪ ಅಂದ್ರೆ ಹಾಗೇ... ಆತ ಏನೇ ಕೆಲಸ ಮಾಡಲಿ, ಎಷ್ಟೇ ಕೆಟ್ಟವನಾಗಿರಲಿ ಅಥವಾ ಒಳ್ಳೆಯ ಮನುಷ್ಯನೇ ಆಗಿರಲಿ ಮಕ್ಕಳಿಗೆ ಅದೆಲ್ಲ ಅರಿವಿಗೆ ಬರೋದಿಲ್ಲ. ಅಪ್ಪ ಅಂದ್ರೆ ಆತ ಎಂದಿಗೂ ಮಕ್ಕಳ ಕಣ್ಣಲ್ಲಿ ʻಹೀರೋʼ.

ಅಪ್ಪನನ್ನು ಬೇರೆಯವರು ನಿಂದಿಸಿದರೆ ಅದು ಮಕ್ಕಳ ಮನಸ್ಸಿಗೆ ತಡೆಯಲಾಗದ ನೋವು ನೀಡುತ್ತೆ. ತಂದೆಯ ಮೇಲೆ ಸಾವಿರ ಆರೋಪ ಬಂದರೂ ಆತನೇ ಗ್ರೇಟ್‌ ಎಂದು ಮಕ್ಕಳ ಮನಸ್ಸು ನಂಬಿರುತ್ತೆ. ಇದೇ ಕಾರಣಕ್ಕೆ ಇರಬಹುದೇನೋ, ವಿನೀಶ್‌ ಕೂಡ ದರ್ಶನ್‌ ಅವರನ್ನು ಎದೆ ತುಂಬಿ ಪ್ರೀತಿಸುತ್ತಾನೆ.

ದರ್ಶನ್‌ ಮೇಲೆ ಹತ್ತಾರು ಆರೋಪ, ವಿವಾದಗಳಿದ್ದರೂ ವಿನೀಶ್‌ಗೆ ಅವರು ತಂದೆ. ವಿನೀಶ್‌ ಕಣ್ಣಲ್ಲಿ ದರ್ಶನ್‌ ರಿಯಲ್‌ ಹೀರೋ. ಅಪ್ಪನನ್ನು ಪ್ರೀತಿಸೋದು ತಪ್ಪಲ್ಲ ಅಲ್ವೇ!?

ZEENEWS TRENDING STORIES

By continuing to use the site, you agree to the use of cookies. You can find out more by Tapping this link