Karnataka CM Race: ಎಐಸಿಸಿ ಅಧ್ಯಕ್ಷ ಖರ್ಗೆ ನಿವಾಸದಲ್ಲಿ ಒಗ್ಗಟ್ಟು ಪ್ರದರ್ಶಿಸಿದ `ಸಿದ್ದು-ಡಿಕೆಶಿ`

Thu, 18 May 2023-11:51 am,

Karnataka CM Race: ಕ್ಲೈಮ್ಯಾಕ್ಸ್‌ ಹಂತ ತಲುಪಿದ ಕೈ ಸಿಎಂ ಕಗ್ಗಂಟು - ಸಿಎಂ ಆಗಿ ಸಿದ್ದರಾಮಯ್ಯ ಆಯ್ಕೆ ಮಾಡಿದ ಹೈಕಮಾಂಡ್ - ಡಿ.ಕೆ.ಶಿವಕುಮಾರ್‌ಗೆ ಡಿಸಿಎಂ ಪಟ್ಟ ನೀಡಿದ ಕಾಂಗ್ರೆಸ್. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒಗ್ಗಟ್ಟು ಪ್ರದರ್ಶಿಸಿದ್ದಾರೆ. 

ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಮುಖಾಮುಖಿಯಾದ ಇಬ್ಬರು ನಾಯಕರು

ದೆಹಲಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮುಖಾಮುಖಿ ಆಗಿದ್ದಾರೆ. 

ಇಬ್ಬರನ್ನ ಕೂರಿಸಿ ಸಂಧಾನ ಮಾಡಲಿರೋ ಕೆಸಿ ವೇಣುಗೋಪಾಲ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ

ಈ ಬ್ರೇಕ್ ಫಾಸ್ಟ್ ಮೀಟಿಂಗ್  ಬಹಳ ಕುತೂಹಲಕಾರಿ ಆಗಿದ್ದು ಕೆ.ಸಿ. ವೇಣುಗೋಪಾಲ್ ಇಬ್ಬರ ಸಮ್ಮುಖದಲ್ಲಿ ಹೈಕಮಾಂಡ್ ಸಂದೇಶ ತಿಳಿಸಲಿದ್ದಾರೆ. ಈ ಸಭೆಯ ನಂತರ ಎಲ್ಲಾ ನಾಯಕರು ಸೇರಿ ರಾಹುಲ್ ಗಾಂಧಿ ಭೇಟಿಗೆ ತೆರಳುವ ಸಾಧ್ಯತೆ ಇದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link