13 ವರ್ಷಗಳ ನಂತರ ದೆಹಲಿಗೆ ತೆರಳಿದ ನಟ ಸುದೀಪ್‌.. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ

Sat, 16 Jul 2022-11:16 am,

ನಟ ಸುದೀಪ್‌ ದೆಹಲಿಗೆ ತೆರಳಿದ್ದಾರೆ. ʻಈಗʼ ಸಿನಿಮಾ ಮಾಡುವಾಗ ದೆಹಲಿಗೆ ಹೋಗಿದ್ದರು. 

13 ವರ್ಷಗಳ ನಂತರ ನಟ ಸುದೀಪ್‌ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿದ್ದಾರೆ. 

ಪ್ರಹ್ಲಾದ್ ಜೋಶಿ ಜೊತೆ ನಟ ಸುದೀಪ್ ಬೆಳಗಿನ ಉಪಹಾರ ಸವಿದಿದ್ದಾರೆ. ʻಈಗʼ ಸಿನಿಮಾ ಮಾಡುವಾಗ ದೆಹಲಿಗೆ ಸುದೀಪ್ ಹೋಗಿದ್ದರು.

ವಿಕ್ರಾಂತ್ ರೋಣ ಸಿನಿಮಾದ ಪ್ರಚಾರಕ್ಕೆಂದು ನಟ ಸುದೀಪ್‌ ದೆಹಲಿಗೆ ತೆರಳಿದ್ದಾರೆ. ನವದೆಹಲಿ ಪ್ರವಾಸದ ವೇಳೆ ಇಂಡಿಯಾ ಗೇಟ್‌ಗೂ ಭೇಟಿ ಕೊಟ್ಟಿದ್ದಾರೆ. 

ಇಂದಿನಿಂದ ಉತ್ತರ ಭಾರತದಾದ್ಯಂತ ವಿಕ್ರಾಂತ್ ರೋಣ ಸಿನಿಮಾ ಪ್ರಚಾರದಲ್ಲಿ ಸುದೀಪ್‌ ಬ್ಯುಸಿಯಾಗಲಿದ್ದಾರೆ. ಜುಲೈ 28 ಕ್ಕೆ ವಿಶ್ವದಾದ್ಯಂತ ವಿಕ್ರಾಂತ್ ರೋಣ ಸಿನಿಮಾ ತೆರೆ ಕಾಣುತ್ತಿದೆ. 

ವಿಕ್ರಾಂತ್ ರೋಣ ಸಿನಿಮಾವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದು, ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ಶ್ರೀಲಂಕಾ ಬೆಡಗಿ ಬಾಳಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ ಈ ಸಿನಿಮಾ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link