ಕುಬೇರನ ಅತಿಯಾದ ಆಶೀರ್ವಾದ ಈ ರಾಶಿಯ ಮೇಲಿರಲಿದೆ: 2025ರವರೆಗೆ ಸಂಪತ್ತಿಗಿರಲ್ಲ ಕೊರತೆ, ಹೆಜ್ಜೆಯಿಟ್ಟಲ್ಲೆಲ್ಲಾ ವಿಜಯವೇ..!

Thu, 17 Aug 2023-1:16 pm,

ಕುಬೇರರ ಆಶೀರ್ವಾದ ಪಡೆದವರು ತಮ್ಮ ಜೀವನದುದ್ದಕ್ಕೂ ಹಣದ ಕೊರತೆಯನ್ನು ಎದುರಿಸುವುದಿಲ್ಲ ಎಂಬುದು ಪ್ರತೀತಿ. ಈ ಕಾರಣದಿಂದಲೇ ಅನೇಕರು ಕುಬೇರದೇವನ ಮೂರ್ತಿಯನ್ನು ಮನೆ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ,

ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ರಾಶಿಯ ಜನರು ವಿಭಿನ್ನ ವಿಶೇಷತೆಗಳನ್ನು ಹೊಂದಿರುತ್ತಾರೆ. ಅದರಲ್ಲೂ ಕುಬೇರ ದೇವನಿಗೆ ರಾಶಿಚಕ್ರದಲ್ಲಿರುವ 3 ರಾಶಿಗಳೆಂದರೆ ತುಂಬಾ ಇಷ್ಟವಂತೆ. ಈ ಜನರ ಮೇಲೆ ಎಂದೆಂದೂ ವಿಶೇಷ ಕೃಪೆಯನ್ನು ಹರಿಸುತ್ತಾನೆ ಎಂದು ಹೇಳಲಾಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ.

ಕರ್ಕಾಟಕ ರಾಶಿ: ಕುಬೇರ ದೇವನ ಕೃಪೆಯು ಕರ್ಕಾಟಕ ರಾಶಿಯ ಜನರ ಮೇಲೆ ಎಂದೆಂದೂ ಇರುತ್ತದೆ. ಇದೇ ಕಾರಣದಿಂದ ಕೈ ಹಾಕಿದ ಪರ್ತೀ ಕಾರ್ಯದಲ್ಲಿ ಈ ರಾಶಿಯವರು ಯಶಸ್ಸನ್ನು ಸಾಧಿಸುತ್ತಾರೆ. ಅದೃಷ್ಟವು ಯಾವಾಗಲೂ ಈ ಜನರಿಗೆ ಅನುಕೂಲಕರವಾಗಿರುತ್ತದೆ ಮತ್ತು ಜೀವನದಲ್ಲಿ ಎಂದಿಗೂ ಹಣದ ಕೊರತೆಯಿರಲ್ಲ.

ತುಲಾ ರಾಶಿ: ಕುಬೇರ ದೇವ ಯಾವಾಗಲೂ ತುಲಾ ರಾಶಿಯವರಿಗೆ ದಯೆ ತೋರುತ್ತಾನೆ. ಅನುಗ್ರಹದಿಂದ, ಈ ರಾಶಿಯ ಜನರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಭಗವಂತ ಕುಬೇರನ ಕೃಪೆಯಿಂದ ಈ ಜನರ ಮೇಲೆ ಯಾವಾಗಲೂ ಹಣದ ಮಳೆಯಾಗುತ್ತದೆ ಮತ್ತು ಬೊಕ್ಕಸವು ಹಣದಿಂದ ತುಂಬಿರುತ್ತದೆ. ಆಸ್ತಿ ವೃದ್ಧಿ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ.

ವೃಶ್ಚಿಕ ರಾಶಿ: ಕುಬೇರ ದೇವ ಯಾವಾಗಲೂ ವೃಶ್ಚಿಕ ರಾಶಿಯವರಿಗೆ ದಯೆ ತೋರುತ್ತಾನೆ. ಇವರ ಕೃಪೆಯಿಂದ ವೃಶ್ಚಿಕ ರಾಶಿಯವರಿಗೆ ಸಮಾಜದಲ್ಲಿ ಸ್ಥಾನಮಾನ, ಪ್ರತಿಷ್ಠೆ ದೊರೆಯುತ್ತದೆ ಹಾಗೂ ಗೌರವ ಹೆಚ್ಚುತ್ತದೆ. ಈ ಜನರ ಮನೆಯಲ್ಲಿ ಹಣದ ಆಗಮನವು ಯಾವಾಗಲೂ ಇರುತ್ತದೆ.

 (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link