Live Long Life: ಜೀವನದಲ್ಲಿ ದೀರ್ಘ ಕಾಲ ಬದುಕುವ ಆಸೆಯೇ? ಈ ತಪ್ಪುಗಳನ್ನು ಮಾಡ್ಬೇಡಿ

Fri, 02 Dec 2022-1:41 pm,

1. ಸನಾತನ ಧರ್ಮದ ಒಟ್ಟು 18 ಪುರಾಣಗಳಲ್ಲಿ ಗರುಡ ಪುರಾಣಕ್ಕೆ ತನ್ನದೇ ಆದ ಮಹತ್ವವಿದೆ. ಗರುಡ ಪುರಾಣದಲ್ಲಿ ಮೃತ್ಯು ಹಾಗೂ ಮೃತ್ಯುವಿನ ನಂತರ ಏನಾಗುತ್ತದೆ ಎಂಬುದರ ಕುರಿತು ಸುದೀರ್ಘ ವರ್ಣನೆಯನ್ನು ನೀಡಲಾಗಿದೆ. ಇದೇ ಕಾರಣದಿಂದ ಯಾವುದೇ ಓರ್ವ ವ್ಯಕ್ತಿ ಮೃತಪಟ್ಟ ಬಳಿಕ ಗರುಡ ಪುರಾಣ ಪಠಿಸಬೇಕು ಎನ್ನಲಾಗುತ್ತದೆ. ಆದರೆ, ಕೇವಲ ಮೃತ್ಯುವಿನ ಬಳಿಕ ಅಷ್ಟೇ ಅಲ್ಲ, ಮಾನವನ ಜೀವಿತಾವಧಿಯ ಹಲವು ಸಂಗತಿಗಳ ಕುರಿತು ಗರುಡ ಪುರಾಣದಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ಈ ಪುರಾಣದಲ್ಲಿ ಮನುಷ್ಯ ಮಾಡುವ ಕೆಲ ತಪ್ಪುಗಳು ಮತ್ತು ಅವುಗಳಿಂದ ಅವನ ಜೀವಿತಾವಧಿ ಹೇಗೆ ಕಡಿಮೆಯಾಗುತ್ತದೆ ಎಂಬುದನ್ನೂ ಕೂಡ ಹೇಳಲಾಗಿದೆ.  

2. ಧರ್ಮಗ್ರಂಥಗಳಿಂದ ಹಿಡಿದು ವೈದ್ಯರವರೆಗೆ, ರಾತ್ರಿ ಬೇಗನೆ ಮಲಗುವುದು ಮತ್ತು ಬೆಳಿಗ್ಗೆ ಬೇಗನೆ ಎದ್ದೇಳುವುದನ್ನು ಒತ್ತಿಹೇಳಲಾಗಿದೆ. ಇದರಿಂದ ದಿನವಿಡೀ ತಾಜಾತನದ ಅನುಭವ ಇರುತ್ತದೆ. ಅದರೂ ಕೂಡ, ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಜನರು ರಾತ್ರಿ ತಡವಾಗಿ ಮಲಗುತ್ತಾರೆ ಮತ್ತು ಬೆಳಗ್ಗೆ ತಡವಾಗಿ ಏಳುತ್ತಾರೆ. ಆದರೆ ಈ ಅಭ್ಯಾಸ ತಪ್ಪು. ಹೀಗೆ ಮಾಡುವುದರಿಂದ ಅನೇಕ ರೋಗಗಳು ಬರಬಹುದು. ಗರುಡ ಪುರಾಣದಲ್ಲೂ ಬ್ರಹ್ಮ ಮುಹೂರ್ತದಲ್ಲಿ ಏಳುವುದು ಯಾವಾಗಲು ಶ್ರೇಯಸ್ಕರ ಎಂದು ಹೇಳಲಾಗಿದೆ.  

3. ಮೊಸರು ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆಹಾರದಲ್ಲಿ ಮೊಸರು ಬಳಸುವುದರ ಬಗ್ಗೆ ವೈದ್ಯರು ಕೂಡ ಹೆಚ್ಚಾಗಿ ಮಾತನಾಡುತ್ತಾರೆ. ಇದರಿಂದ ಅನೇಕ ರೋಗಗಳಿಂದ ಮುಕ್ತಿ ದೊರೆಯುತ್ತದೆ. ಆದಾಗ್ಯೂ, ಮೊಸರನ್ನು ರಾತ್ರಿಯಲ್ಲಿ ಸೇವಿಸಬಾರದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಶುರುವಾಗುತ್ತವೆ.  

4. ನೆರೆಹೊರೆಯವರು, ಸ್ನೇಹಿತ ಅಥವಾ ಸಂಬಂಧಿಕರು ಸತ್ತಾಗ, ಜನರು ಸ್ಮಶಾನದಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಮೃತದೇಹ ಸುಡುವುದರಿಂದ ಹಲವು ಬಗೆಯ ಅಪಾಯಕಾರಿ ಬ್ಯಾಕ್ಟೀರಿಯಾಗಳು ಬಿಡುಗಡೆಯಾಗಿ, ಗಾಳಿಯಲ್ಲಿ ಬೆರೆತು ದೇಹ ಸೇರಬಹುದು. ಅಂತಹ ಪರಿಸ್ಥಿತಿಯಲ್ಲಿ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ, ಮನೆಗೆ ಬಂದು ತಕ್ಷಣ ಸ್ನಾನ ಮಾಡಬೇಕು.  

5. ಅನೇಕ ಜನರು ನಾನ್ ವೆಜ್ ಅನ್ನು ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ಎಷ್ಟೋ ಸಲ ನಾನ್ ವೆಜ್ ತಿಂದ ನಂತರ ಫ್ರಿಜ್ ನಲ್ಲಿಟ್ಟು ಮರುದಿನ ತಿನ್ನುತ್ತಾರೆ. ಆದರೆ, ಹಳಸಿದ ಮಾಂಸಾಹಾರವನ್ನು ಆರೋಗ್ಯಕರವೆಂದು ಪರಿಗಣಿಸಲಾಗುವುದಿಲ್ಲ. ಇದು ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಹೊಂದಿರಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link