ಶುಕ್ರನ ಅಧಿಪತ್ಯದ ರಾಶಿಯಲ್ಲಿ ರಾಜಯೋಗ ! ಈ ರಾಶಿಯವರ ಜೀವನದಲ್ಲಿ ಸಿರಿ ಸಂಪತ್ತು ಹೊತ್ತು ತರಲಿದೆ ನವರಾತ್ರಿ

Wed, 13 Sep 2023-11:25 am,

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ರಾಶಿಯಲ್ಲಿ ಬುಧಾದಿತ್ಯ ರಾಜಯೋಗವು ರೂಪುಗೊಂಡಾಗ, ಜನರ ಅದೃಷ್ಟವು ತೆರೆದುಕೊಳ್ಳುತ್ತದೆ.  ವ್ಯಕ್ತಿಯು ಬಹಳಷ್ಟು ಸಂಪತ್ತು ಮತ್ತು ದೊಡ್ಡ ಮಟ್ಟದ ಯಶಸ್ಸು ಪಡೆಯುವುದು ಸಾಧ್ಯವಾಗುತ್ತದೆ. 

ಅಕ್ಟೋಬರ್ 11, 2023 ರಂದು ಅಂದರೆ ನವರಾತ್ರಿಗೆ ಮೂರು ದಿನ ಮುಂಚಿತವಾಗಿ ಸೂರ್ಯನು ತುಲಾ ರಾಶಿಯಲ್ಲಿ  ಸಂಕ್ರಮಿಸಿದ ತಕ್ಷಣ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಬುಧಾದಿತ್ಯ ರಾಜಯೋಗ ರಚನೆಯಾಗುವುದರಿಂದ 3 ರಾಶಿಯ ಜನರ ಜೀವನದಲ್ಲಿ ಅದೃಷ್ಟದ  ಬಾಗಿಲು ತೆರೆಯುತ್ತದೆ.

ಕನ್ಯಾ ರಾಶಿ : ಬುಧಾದಿತ್ಯ ರಾಜಯೋಗವು ಕನ್ಯಾ ರಾಶಿಯವರಿಗೆ ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ನೀಡಬಹುದು. ದಿಢೀರ್ ಹಣ ಕೈ ಸೇರುವ ಜೊತೆಗೆ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳೂ ಇವೆ. ಹಣದ ಕೊರತೆ ಕಾಣಿಸುವುದೇ ಇಲ್ಲ.

ಧನು ರಾಶಿ: ಆದಾಯ ಹೆಚ್ಚಾಗುವ ಬಲವಾದ ಸಾಧ್ಯತೆಗಳಿವೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಆರೋಗ್ಯ ಸುಧಾರಿಸುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವುದು ಸಾಧ್ಯವಾಗುತ್ತದೆ. ಏನೇ ಹೊಸ ಯೋಜನೆ ರೂಪಿಸಿದರೂ ಯಶಸ್ಸು ನಿಮ್ಮದಾಗುವುದು.   

ಮಕರ ರಾಶಿ : ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ಸಂಪನ್ಮೂಲಗಳು ಹೆಚ್ಚಾಗಬಹುದು. ನಿಮ್ಮ ಜೀವನದಲ್ಲಿ ಸುಧಾರಣೆಗೆ ಅನೇಕ ಅವಕಾಶಗಳಿವೆ, 

ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link