ನವರಾತ್ರಿಯೊಂದಿಗೆ ಈ ರಾಶಿಯವರ ಬಾಳಲ್ಲಿ ಬೆಳಕು ! ಪ್ರತಿ ಕೆಲಸದಲ್ಲಿ ಕೈ ಹಿಡಿಯುವುದು ಅದೃಷ್ಟ ! ಮುಂದಿರುವುದು ಬಂಗಾರದ ಬದುಕು

Tue, 10 Oct 2023-9:30 am,

ನವರಾತ್ರಿ ಕಳೆಯುತ್ತಿದ್ದಂತೆಯೇ ಅಶುಭ ಗುರು ಚಂಡಾಲ ಯೋಗ ಕೂಡಾ ಕೊನೆಗೊಳ್ಳುತ್ತದೆ. ಈ ಮೂಲಕ ಮೂರು ರಾಶಿಯವರಿಗೆ ಶುಭ ದಿನಗಳು ಆರಂಭವಾಗಲಿವೆ. ಇಲ್ಲಿಯವರೆಗೆ ಈ ರಾಶಿಯವರ ಜೀವನದಲ್ಲಿ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. 

ತುಲಾ ರಾಶಿ: ಗುರು ಚಂಡಾಲ ಯೋಗ ಮುಗಿದ ತಕ್ಷಣ ತುಲಾ ರಾಶಿಯವರ ಜೀವನದ ಪ್ರತಿ ಹೆಜ್ಜೆ ಯಶಸ್ಸಿನಟ್ಟ ಸಾಗುತ್ತದೆ. ಅಶುಭ ಯೋಗದ ಅಂತ್ಯದೊಂದಿಗೆ, ಮದುವೆ ಸಂಬಂಧಿತ ಸಮಸ್ಯೆಗಳು ದೂರವಾಗುವುದು. ಆರ್ಥಿಕ ಪರಿಸ್ಥಿತಿಯು ಸ್ಥಿರವಾಗಿರುತ್ತದೆ. ವೃತ್ತಿಪರ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡುಬರುತ್ತವೆ.  ನೀವು ಅಂದುಕೊಂಡ ಗುರಿಯನ್ನು ಸಾಧಿಸುವುದು ಸಾಧ್ಯವಾಗುತ್ತದೆ. 

ಕರ್ಕಾಟಕ ರಾಶಿ : ಗುರು ಚಂಡಾಲ ಯೋಗವು ಕೊನೆಗೊಂಡ ತಕ್ಷಣ, ಅದೃಷ್ಟ ಕರ್ಕ ರಾಶಿಯವರತ್ತ ತಿರುಗುತ್ತದೆ. ಈ ರಾಶಿಯವರ ಜೀವನದಲ್ಲಿ ಆರ್ಥಿಕ ಸ್ಥಿರತೆ ವೃತ್ತಿಯಲ್ಲಿ ಪ್ರಗತಿ ಕಂಡು ಬರುವುದು. ವೃತ್ತಿಪರ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಸ್ವಲ್ಪ ಸಮಯದಿಂದ ನಿಮ್ಮನ್ನು ಕಾಡುತ್ತಿರುವ ಆರೋಗ್ಯ ಸಂಬಂಧಿತ  ಸಮಸ್ಯೆಗಳಿಂದ ಪರಿಹಾರ ಸಿಗುವುದು. 

ಸಿಂಹ ರಾಶಿ :ರಾಹು ಚಂಡಾಲ ಯೋಗದ ಅಂತ್ಯದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಬಹುನಿರೀಕ್ಷಿತ ವ್ಯವಹಾರವನ್ನು ವಿಸ್ತರಿಸಲು ಮತ್ತು ಎಲ್ಲಾ ಸೂಕ್ತ ಪ್ರಯೋಜನಗಳನ್ನು ಪಡೆಯಲು ಇದು ಸೂಕ್ತ ಸಮಯವಾಗಿದೆ. ಅಶುಭ ಯೋಗದ ಅಂತ್ಯದಿಂದ ಜನರ ಆರೋಗ್ಯವೂ  ಉತ್ತಮವಾಗಿರುತ್ತದೆ. 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link