Saffron Remedies: ಹೊಸ ವರ್ಷದಲ್ಲಿ ಹಣದ ಮಳೆ ಸುರಿಯಲು ಕೇಸರಿಯಿಂದ ಈ ಸುಲಭ ಪರಿಹಾರವನ್ನು ಮಾಡಿ

Sat, 31 Dec 2022-6:08 am,

ನಿಮ್ಮ ಜಾತಕದಲ್ಲಿ ಮಂಗಳಿಕ ದೋಷವಿದ್ದರೆ, ಕೆಂಪು ಚಂದನದಲ್ಲಿ ಕೇಸರಿಯನ್ನು ಬೆರೆಸಿ ಆಂಜನೇಯ ದೇವರಿಗೆ ತಿಲಕವನ್ನು  ಹಚ್ಚಿ. ಇದು ನಿಮ್ಮ ಮಂಗಳಿಕ ದೋಷದ ಪರಿಣಾಮವನ್ನು ಕೊನೆಗೊಳಿಸುತ್ತದೆ.

ನಿಮ್ಮ ಬಳಿ ಹಣವಿಲ್ಲದಿದ್ದರೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಕವಡೆಗಳಿಗೆ ಕೇಸರಿ ಬಣ್ಣವನ್ನು ಹಚ್ಚಿ. ಬಳಿಕ ಕೆಂಪು ಬಟ್ಟೆಯಲ್ಲಿ ಕಟ್ಟಿ. ಅವುಗಳನ್ನು ನಿಮ್ಮ ಮನೆಯ ಗೋಡೆಯಲ್ಲಿ ಇರಿಸಿ. ಇದು ನಿಮ್ಮ ಹಣದ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ.

ದಾಂಪತ್ಯ ಜೀವನದಲ್ಲಿ ತೊಂದರೆಯಾದರೆ ಪತಿ-ಪತ್ನಿಯರು ಮೂರು ತಿಂಗಳ ಕಾಲ ಕೇಸರಿ ಮಿಶ್ರಿತ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡಬೇಕು. ಇದರಿಂದ ದಾಂಪತ್ಯ ಜೀವನ ಸುಧಾರಿಸುತ್ತದೆ.

ನಿಮ್ಮ ಜಾತಕದಲ್ಲಿ ಚಂದ್ರನು ದುರ್ಬಲನಾಗಿದ್ದರೆ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತಿದ್ದರೆ, ಬೆಳ್ಳಿಯ ಪೆಟ್ಟಿಗೆಯಲ್ಲಿ ಕೇಸರಿಯೊಂದಿಗೆ ಘನ ಬೆಳ್ಳಿಯ ಗುಂಡನ್ನು ಇರಿಸಿ. ಇದು ನಿಮ್ಮ ಜಾತಕದಲ್ಲಿ ಚಂದ್ರನನ್ನು ಬಲಪಡಿಸುತ್ತದೆ.

ನಿಮ್ಮ ಜಾತಕದಲ್ಲಿ ಗುರುವು ಅಶುಭ ಸ್ಥಾನದಲ್ಲಿದ್ದರೆ, ಇದರಿಂದ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಪಾಯಸವನ್ನು ಮನೆಯಲ್ಲಿ ತಯಾರಿಸಿ ಬಳಿಕ ಅದಕ್ಕೆ ಕೊಂಚ ಕೇಸರಿಯನ್ನು ಸೇರಿಸಿ ತಿನ್ನಿರಿ. ಇದರಿಂದ ಅಶುಭ ಪರಿಣಾಮ ದೂರವಾಗುತ್ತದೆ.

(ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ವಿವಿಧ ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link