ಕೈಯ್ಯಲ್ಲಿ ದುಡ್ಡು ನಿಲ್ಲದಿರಲು ಇದುವೇ ಕಾರಣ!ಮನೆಯ ಈ ಜಾಗದಲ್ಲಿ ಚಪ್ಪಲಿ ಬಿಡುವ ತಪ್ಪು ಎಂದೂ ಮಾಡಬೇಡಿ!

Mon, 02 Sep 2024-4:54 pm,

ಚಪ್ಪಲಿಯನ್ನು ತಪ್ಪಾದ ದಿಕಿನಲ್ಲಿ ಬಿಟ್ಟರೆ,ಅದರ  ನೇರ ಪರಿಣಾಮ ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಬೀರುತ್ತದೆ.ಎಷ್ಟೇ ದುಡಿದರೂ ಕೈಯ್ಯಲ್ಲಿ ಒಂದು ಪೈಸವೂ ಉಳಿಯುವುದಿಲ್ಲ. 

ಮನೆಯ ಮುಖ್ಯ ದ್ವಾರದಲ್ಲಿ ಪಾದರಕ್ಷೆಗಳನ್ನು ಬಿಡಬಾರದು.ಮುಖ್ಯ ಬಾಗಿಲಿನ ಮೂಲಕವೇ ಲಕ್ಷ್ಮಿ ಮನೆಯೊಳಗೆ ಪ್ರವೇಶಿಸುತ್ತಾಳೆ ಎನ್ನುವುದು ನಂಬಿಕೆ. ಮುಖ್ಯ ದ್ವಾರದಲ್ಲಿ ಚಪ್ಪಲಿ ಇಟ್ಟರೆ ಲಕ್ಷ್ಮೀ ಪ್ರವೇಶವನ್ನು ತಡೆದ ಹಾಗೆ ಆಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿಯೂ ಶೂ ಮತ್ತು ಚಪ್ಪಲಿ ಇಡಬಾರದು.ಇದು ನಕಾರಾತ್ಮಕತೆಯನ್ನು ಉಂಟುಮಾಡುತ್ತದೆ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.   

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಪಾದರಕ್ಷೆ ಇಡುವುದು ತುಂಬಾ ಅಶುಭ.ಈ ದಿಕ್ಕು ಸಕಾರಾತ್ಮಕತೆಯನ್ನು ತರುತ್ತದೆ. ಇಂಥಹ ಮನೆಯಲ್ಲಿ ಲಕ್ಷ್ಮೀ ಎಂದಿಗೂ ನೆಲೆಸುವುದಿಲ್ಲ. 

ತಮ್ಮ ಜೀವನದಲ್ಲಿ ಪ್ರಗತಿಯನ್ನು ಪಡೆಯಲು ಬಯಸುವವರು,ನೀಲಿ ಬಣ್ಣದ ಶೂಗಳನ್ನು ಧರಿಸಬೇಕು.ನೀಲಿ ಬಣ್ಣದ ಕ್ಲೀನ್ ಬೂಟುಗಳನ್ನು ಧರಿಸುವುದರಿಂದ ಯಶಸ್ಸು ಸಿಗುತ್ತದೆ.       

ಕೊಳಕು ಮತ್ತು ಹರಿದ ಬೂಟುಗಳನ್ನು ಎಂದಿಗೂ ಧರಿಸಬೇಡಿ.ಇದು ಗ್ರಹ ದೋಷಗಳನ್ನು ಉಂಟುಮಾಡುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ,ಹಳದಿ ಬಣ್ಣದ ಶೂ ಮತ್ತು ಚಪ್ಪಲಿಗಳನ್ನು ಧರಿಸಬಾರದು.ಹಳದಿ ಬಣ್ಣದ ಬೂಟುಗಳನ್ನು ಧರಿಸುವುದು ಅದೃಷ್ಟವನ್ನು ದುರಾ ದೃಷ್ಟಕ್ಕೆ ತಿರುಗಿಸುತ್ತದೆ.    

ಸೂಚನೆ :ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link