ಈ ರಾಶಿಯವರು ಕಿರು ಬೆರಳಿಗೆ ಮುತ್ತಿನ ಉಂಗುರ ಧರಿಸಿದರೆ ಹಿಂಬಾಲಿಸುವುದು ಅದೃಷ್ಟ!ಯಶಸ್ಸಿನ ಉತ್ತುಂಗಕ್ಕೆ ಏರಲು ಇದೇ ದಾರಿ

Mon, 15 Jul 2024-8:44 am,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುತ್ತು ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದೆ.ಎಲ್ಲಾ ಚಿನ್ನ ಬೆಳ್ಳಿಯಂತೆ ಕೂಡಾ ಮುತ್ತನ್ನು ಕೂಡಾ ಎಲ್ಲರೂ ಧರಿಸುವಂತಿಲ್ಲ.ಕೆಲವು ರಾಶಿಯವರು ಕಿರು ಬೆರಳಿಗೆ ಮುತ್ತಿನ  ಉಂಗುರ ಧರಿಸಿದ ಕೂಡಲೇ ಅದೃಷ್ಟ ಅವರ ಕೈ ಹಿಡಿಯುತ್ತದೆ. 

ಮೇಷ ರಾಶಿಯವರು ಮುತ್ತು ಧರಿಸಿದರೆ ಒಳ್ಳೆಯದು. ಮುತ್ತು ಅವರ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ.ಎಲ್ಲವೂ ಮುಗಿಯಿತು ಎನ್ನುವಾಗಲೂ ಮುತ್ತು ಧರಿಸಿದರೆ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ.   

ಕರ್ಕಾಟಕ ರಾಶಿಯವರು ಕೂಡಾ ಕಿರು ಬೆರಳಿಗೆ ಮುತ್ತಿನ ಉಂಗುರ ಹಾಕಬೇಕು. ಇದು ಅವರ ಮನಸ್ಸು ಶಾಂತವಾಗಿರಿಸಲು ಸಹಾಯ ಮಾಡುತ್ತದೆ. ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಸಿಗುತ್ತದೆ.   

ವೃಶ್ಚಿಕ ರಾಶಿಯವರು ಮುತ್ತಿನ ಉಂಗುರ ಧರಿಸಿದರೆ ಎಲ್ಲರೂ  ನಿಮ್ಮ ಮಾತಿನತ್ತ ಆಕರ್ಷಿತರಾಗುತ್ತಾರೆ. ನೀವು ಅಂದುಕೊಂಡ ಪ್ರತಿ ಕಾರ್ಯಗಳೆಲ್ಲವೂ ಸುಲಭವಾಗಿ ನೆರವೇರುವುದು. 

ಮೀನ ರಾಶಿಯವರು ಕೂಡಾ ಮುತ್ತಿನ ಉಂಗುರ ಹಾಕಿದರೆ ಒಳ್ಳೆಯದು.ಸಾಧ್ಯವೇ ಇಲ್ಲ ಎನ್ನುವಂಥಹ ಕೆಲಸ ಕೂಡಾ ಕೈ ಗೂಡುವುದು.ಮನದ ಪ್ರತಿ ಆಸೆ ಈಡೇರುವುದು.       

ಬೆಳ್ಳಿಯಲ್ಲಿ ಕಟ್ಟಿದ ಮುತ್ತನ್ನು ಶುಕ್ಲ ಪಕ್ಷದ ಸೋಮವಾರ ರಾತ್ರಿಯಂದು ಕಿರುಬೆರಳಿಗೆ ಧರಿಸಬೇಕು.ನೀವು ಧರಿಸುವ ಮೊದಲು ಇದನ್ನು ಶಿವನಿಗೆ ಅರ್ಪಿಸಿದ ನಂತರವೇ ಮುತ್ತುಗಳನ್ನು ಧರಿಸುವುದು ಶ್ರೇಯಸ್ಕರ.  

ಸೂಚನೆ:ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link