Photo Gallery: ಕಾಫಿ ತೋಟದ ಯಜಮಾನನ ಹೃದಯ ಕದ್ದ ಆದಿತಿ ಪ್ರಭುದೇವ

Tue, 21 Mar 2023-10:07 am,

ಆದಿತಿ ಪ್ರಭುದೇವ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ತಮ್ಮ ಅದ್ಭುತ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ದಾವಣಗೆರೆಯಲ್ಲಿ ಜನಿಸಿದ ಆದಿತಿ ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್‍ನಲ್ಲಿ ಮಾಸ್ಟರ್ ಮಾಡಿದ್ದಾರೆ.

1994ರ ಜನವರಿ 13ರಂದು ಜನಿಸಿದ ನಟಿ ಆದಿತಿ ಪ್ರಭುದೇವ ಮೊದಲು ಆಂಕರ್ ಆಗಿ ವೃತ್ತಿಜೀವನ ಪ್ರಾರಂಭಿಸಿದ್ದರು. ‘ಗುಂಡ್ಯಾನ್ ಹೆಂಡ್ತಿ’ ಧಾರವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದ್ದರು.

'ಗುಂಡ್ಯಾನ ಹೆಂಡತಿ' ಅನ್ನೋ ಕಿರುತೆರೆ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ನಟಿ ಆದಿತಿ ಪ್ರಭುದೇವ ‘ನಾಗಕನ್ನಿಕೆ’ ಸಿರೀಯಲ್‍ನಲ್ಲಿ ಶಿವಾನಿ ಪಾತ್ರದಲ್ಲಿ ಮಿಂಚಿದ್ದರು.   

2017ರಲ್ಲಿ ಕೃಷ್ಣ ಅಜಯ್ ರಾವ್ ಜೊತೆ ‘ಧೈರ್ಯಂ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಟಿ ಆದಿತಿ ಪ್ರಭುದೇವ ಎಂಟ್ರಿ ಕೊಟ್ಟರು. ಆದಿತಿಯವರ ಮೂಲ ಹೆಸರು ಸುದೀಪನಾ. ‘ಬಜಾರ್’, ‘ಸಿಂಗಂ’, ‘ರಂಗನಾಯಕಿ’, ‘ಬ್ರಹ್ಮಚಾರಿ’,  ‘ಆನ’, ‘ಒಂಬತ್ತನೇ ದಿಕ್ಕು’, ಓಲ್ಡ್ ಮಂಕ್’, ಗಜಾನನ ಅಂಡ್ ಗ್ಯಾಂಗ್’, ತೋತಾಪುರಿ ಮುಂತಾದ ಸಿನಿಮಾಗಳಲ್ಲಿ ಮಿಂಚಿರುವ ಆದಿತಿ ಸದ್ಯ ಹಲವು ಚಿತ್ರಗಳಿಗೆ ಸಹಿ ಹಾಕಿದ್ದಾರೆ. 

ನಟಿ ಆದಿತಿ ಪ್ರಭುದೇವ 2022ರ ನವೆಂಬರ್ 28ರಂದು ಕಾಫಿ ಪ್ಲಾಂಟರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಯಶಸ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link