Vasant Panchmi 2021 - ಯಾವ ರಾಶಿಯ ಜನರು ಇಂದು ಸರಸ್ವತಿಗೆ ಏನನ್ನು ಅರ್ಪಿಸಬೇಕು?

Tue, 16 Feb 2021-11:29 am,

ಮೇಷ - ಈ ದಿನ ಮೇಷ ರಾಶಿಯ ಜನರು ಸರಸ್ವತಿ ಪೂಜೆ ಮಾಡುವಾಗ ಸರಸ್ವತಿ ಕವಚವನ್ನು ಪಠಿಸಬೇಕು. ಇದರಿಂದ ಬುದ್ಧಿ ಪ್ರಾಪ್ತಿಯಾಗುತ್ತದೆ ಹಾಗೂ ಏಕಾಗ್ರತೆಯ ಕೊರತೆ ದೂರಾಗುತ್ತದೆ.

ವೃಷಭ - ದೇವಿ ಸರಸ್ವತಿಯನ್ನು ಪ್ರಸನ್ನಗೊಳಿಸಲು ವೃಷಭ ರಾಶಿಯ ಜನರು ದೇವಿಗೆ ಬಿಳಿ ಚಂದನದ ತಿಲಕವನ್ನಿಟ್ಟು ಹೂವು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಜ್ನಾನದಲಿ ಹೆಚ್ಚಳವಾಗುವುದರ ಜೊತೆಗೆ ಇತರ ಸಮಸ್ಯೆಗಳಿಗೂ ಪರಿಹಾರ ಲಭಿಸುತ್ತದೆ.

ಮಿಥುನ - ಮಿಥುನ ರಾಶಿಯ ಜನರು ಈ ದಿನ ದೇವಿ ಸರಸ್ವತಿಗೆ ಹಸಿರು ಬಣ್ಣದ ಲೇಖನಿ ಅರ್ಪಿಸಬೇಕು ಹಾಗೂ ತಮ್ಮ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಬೇಕು. ಇದರಿಂದ ಬರವಣಿಗೆಗೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳು ದೂರಾಗಲಿವೆ.

ಕರ್ಕ - ಕರ್ಕ ರಾಶಿಯ ಜನರು ಈ ದಿನ ಸರಸ್ವತಿಗೆ ಪಾಯಸ ನೈವೇದ್ಯ ತೋರಿಸಬೇಕು. ಸಂಗೀತ ಕ್ಷೇತ್ರದ ಜೊತೆಗೆ ಸಂಬಂಧಹೊಂದಿದ ವಿದ್ಯಾರ್ಥಿಗಳಿಗೆ ಇದರಿಂದ ವಿಶೇಷ ಲಾಭ ಸಿಗುತ್ತದೆ.

ಸಿಂಹ - ದೇವಿ ಸರಸ್ವತಿಯ ಪೂಜೆ ಮಾಡುವ ವೇಳೆ ಸಿಂಹ ರಾಶಿಯ ಜನರು ಗಾಯತ್ರಿ ಮಂತ್ರ ಜಪಿಸಬೇಕು. ಇದರಿಂದ ವಿದೇಶಗಳಲ್ಲಿದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಲಾಭ ಸಿಗಲಿದೆ.

ಕನ್ಯಾ - ಒಂದು ವೇಳೆ ನಿಮ್ಮ ರಾಶಿ ಕೂಡ ಕನ್ಯಾ ಆಗಿದ್ದರೆ, ಬಡ ಮಕ್ಕಳಿಗೆ ಅಧ್ಯಯನದ ವಸ್ತುಗಳ ಹಂಚಿಕೆ ಮಾಡಿ. ಇದರಲ್ಲಿ ಪೆನ್, ಪೆನ್ಸಿಲ್, ಪುಸ್ತಕ ಇತ್ಯಾದಿಗಳು ಶಾಮೀಲಾಗಿರಲಿ. ಓದಿನಲ್ಲಿ ಬರುತ್ತಿರುವ ಅಡಚಣೆಗಳು ಇದರಿಂದ ದೂರಾಗುತ್ತವೆ. 

ತುಲಾ - ತುಲಾ ರಾಶಿಯ ಜಾತಕ ಹೊಂದಿದವು ಬ್ರಾಹ್ಮಣರಿಗೆ ಬಿಳಿ ಬಣ್ಣದ ಬಟ್ಟೆ ದಾನ ಮಾಡಬೇಕು. ವಿದ್ಯಾರ್ಥಿಗಳು ಈ ರೀತಿ ಮಾಡಿದರೆ ವಾಣಿಗೆ ಸಂಬಂಧಿಸಿದ ಅವರ ಸಮಸ್ಯೆಗಳು ದೂರಾಗುತ್ತವೆ ಹಾಗೂ ಅವರ ವಾಣಿಯಲ್ಲಿ ಮಧುರತೆ ಬರುತ್ತದೆ.

ವೃಶ್ಚಿಕ - ಒಂದು ವೇಳೆ ನಿಮ್ಮ ರಾಶಿಯೂ ಕೂಡ ವೃಶ್ಚಿಕ ರಾಶಿಯಾಗಿದ್ದು, ನಿಮಗೆ ಸ್ಮರಣಶಕ್ತಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಸರಸ್ವತಿಯನ್ನು ಆರಾಧಿಸಿ ನೀವು ಈ ಸಮಸ್ಯೆಯನ್ನು ದೂರಗೊಳಿಸಬಹುದು. ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಕೆಂಪು ಬಣ್ಣದ ಪೆನ್ ಅರ್ಪಿಸಿ.

ಧನು - ಧನು ರಾಶಿಯ ಜಾತಕದವರು ಇಂದು ದೇವಿ ಸರಸ್ವತಿಗೆ ಪೂಜೆ ಸಲ್ಲಿಸಿ, ನಂತರ ಹಳದಿ ಬಣ್ಣದ ಸಿಹಿಯ ನೈವೇದ್ಯ ತೋರಿಸಿ. ಇದರಿಂದ ನಿಮ್ಮ ನಿರ್ಣಯ ಕೈಗೊಳ್ಳುವ ಕ್ಷಮತೆ ಹೆಚ್ಚಾಗುತ್ತದೆ. ಜೊತೆಗೆ ಉನ್ನತ ಶಿಕ್ಷಣದ ನಿಮ್ಮ ಆಸೆ ಈಡೇರುತ್ತದೆ.  

ಮಕರ - ಮಕರ ರಾಶಿಯ ಜನರು ಇಂದು ನಿರ್ಗತಿಕರಿಗೆ ಬಿಳಿ ಬಣ್ಣದ ಧಾನ್ಯ ದಾನ ನೀಡಬೇಕು. ಇದರಿಂದ ನಿಮ್ಮ ಬುದ್ಧಿಬಲ ಹೆಚ್ಚಾಗುತ್ತದೆ.

ಕುಂಭ - ದೇವಿ ಸರಸ್ವತಿಗೆ ಪೂಜೆ ಸಲ್ಲಿಸಿದ ಬಳಿಕ ಬಡ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಾಗೂ ಓದಿಗೆ ಸಂಬಂಧಿಸಿದ ಇತರೆ ವಸ್ತುಗಳನ್ನು ದಾನವಾಗಿ ನೀಡಬೇಕು. ಇದರಿಂದ ದೇವಿ ಸರಸ್ವತಿಯ ಕೃಪೆ ಸದಾ ನಿಮ್ಮ ಮೇಲಿರಲಿದೆ ಮತ್ತು ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ.

ಮೀನ - ಸರಸ್ವತಿ ಪೂಜೆಯ ಬಳಿಕ ಬಾಲ ಕನ್ಯೆಯರಿಗೆ ಹಳದಿ ಬಣ್ಣದ ವಸ್ತ್ರ ದಾನ ಮಾಡಿ. ವೃತ್ತಿಜೀವನದಲ್ಲಿ ಬರುವ ಸಮಸ್ಯೆಗಳು ಇದರಿಂದ ದೂರಾಗುತ್ತವೆ ಮತ್ತು ದೇವಿ ಸರಸ್ವತಿ ಕೃಪೆ ಸದಾ ನಿಮ್ಮ ಮೇಲಿರಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link