ರಾಜ ಭವನದಲ್ಲಿ ಪ್ರಧಾನಿ ಮೋದಿ ಔತಣಕೂಟ: ಯಶ್, ರಿಷಬ್ ಶೆಟ್ಟಿ, ಕಿರಗಂದೂರು ಸೇರಿ ಹಲವರು ಭಾಗಿ

Mon, 13 Feb 2023-1:31 pm,

ರಾಜಭವನದಲ್ಲಿ ಆಯೋಜಿಸಿದ್ದ ಪ್ರಧಾನಿ ಮೋದಿಯವರ ಔತನಕೂಟಕ್ಕೆ ಸಿನಿಮಾ, ಉದ್ಯಮಿಗಳು ಮತ್ತು ಕ್ರೀಡಾ ವಲಯದ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ನಟರಾದ ರಾಕಿಂಗ್ ಸ್ಟಾರ್, ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಂಗದೂರು, ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಪ್ರಸಿದ್ಧ ಹಾಸ್ಯನಟಿ ಅಯ್ಯೋ ಶ್ರದ್ಧಾ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಪ್ರಧಾನಿ ಮೋದಿಯವರ ಔತನಕೂಟದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಪಾಲ್ಗೊಂಡಿದ್ದರು. ಈ ವೇಳೆ ‘ಗಂಧದಗುಡಿ’ ಸಿನಿಮಾದ ಮೆಚ್ಚುಗೆ ಮಾತುಗಳನ್ನಾಡಿದ ಪ್ರಧಾನಿ ಮೋದಿಯವರು, ‘ಅಪ್ಪು’ ನಿಧನವನ್ನು ನೆನಪಿಸಿಕೊಂಡು ಭಾವುಕರಾದರು.

ಸೋಶಿಯಲ್​ ಮೀಡಿಯಾದಲ್ಲಿ ತುಂಬಾ ಹೆಸರು ಮಾಡಿರುವ ಪ್ರಸಿದ್ಧ ಹಾಸ್ಯನಟಿ ಅಯ್ಯೋ ಶ್ರದ್ಧಾ ಸಹ ಪ್ರಧಾನಿ ಮೋದಿಯವರ ಔತನಕೂಟದಲ್ಲಿ ಭಾಗಿಯಾಗಿದ್ದರು.

ರಾಕಿಂಗ್ ಸ್ಟಾರ್ ಯಶ್ ಅವರು ಪ್ರಧಾನಿ ಮೋದಿಯವರ ಔತನಕೂಟದಲ್ಲಿ ಭಾಗಿಯಾಗಿ ಚಿತ್ರರಂಗದ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದರು. ಕರ್ನಾಟಕದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಿಕೊಡುವಂತೆ ಈ ವೇಳೆ ಯಶ್ ಅವರು ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link