PM Narendra Modi: ರಾಜವಂಶಸ್ಥ ಯದುವೀರ್ ಒಡೆಯರ್ ಭೇಟಿಯಾದ ಪಿಎಂ ಮೋದಿ

Tue, 21 Jun 2022-3:00 pm,

ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ.

ಮೈಸೂರಿನ ಅಂಬಾ ವಿಲಾಸ ಪ್ಯಾಲೇಸ್ ಆವರಣದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ

ನಂತರ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಆಯೋಜಿಸಲಾಗಿದ್ದ  'ವಿನೂತನ ಡಿಜಿಟಲ್ ಯೋಗ ಪ್ರದರ್ಶನ'ವನ್ನು ಪಿಎಂ ಮೋದಿ ಉದ್ಘಾಟಿಸಿದರು. 

ಮೈಸೂರಿಗೆ ಯೋಗ ದಿನಾಚರಣೆಗೆ ಬಂದಾಗ ಬೆಳಗಿನ ಉಪಹಾರಕ್ಕೆ ತಮ್ಮ ಮನೆಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಪತ್ರ ಬರೆದಿದ್ದರು.  

ರಾಜಮನೆತನದವರ ಆಹ್ವಾನದ ಮೇರೆಗೆ ಅರಮನೆಗೆ ತೆರಳಿ ಬೆಳಗಿನ ಉಪಹಾರ ಸ್ವೀಕರಿಸಿದರು. 

ಇಂದು ಮೈಸೂರಿನ ಅರಮನೆಯಲ್ಲಿ ರಾಜಮನೆತನದವರೊಂದಿಗೆ ಪ್ರಸಿದ್ಧವಾದ ಮೈಸೂರು ಪಾಕ್ ಮತ್ತು ಮೈಸೂರು ಮಸಾಲೆ ದೋಸೆಯನ್ನು ಸವಿದರು. 

ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರೊಂದಿಗೆ ಮೋದಿ ವೇದಿಕೆ ಹಂಚಿಕೊಂಡಿದ್ದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link